ಕಿಮ್ ಜೊಂಗ್ ಹಿಂದಿನ ಶಕ್ತಿ ಸೋದರಿ ಯೋ ಜಂಗ್!
ಬೆಂಗಳೂರು, ಜೂನ್ 12: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರಿಬ್ಬರು ಸಿಂಗಪುರದಲ್ಲಿ ನಡೆಸಿರುವ ಸಭೆ ಈಗ ವಿಶ್ವದ ಎಲ್ಲರ ಗಮನ ಸೆಳೆದಿದೆ.
ಉತ್ತರ ಕೊರಿಯಾದಿಂದ ಜಾಂಗ್ ಉನ್ ಅವರು ಬೇರೆ ದೇಶಕ್ಕೆ ಬಂದಿದ್ದು ಇದೆ ಮೊದಲು. ಈ ಮುಂಚೆ ಚೀನಾಕ್ಕೆ ಹೋಗಿ ಬಂದರೂ ರೈಲು ಮಾರ್ಗ ಅನುಸರಿಸುತ್ತಿದ್ದರು. ಆದರೆ, ವಿಮಾನ ಮಾರ್ಗವಾಗಿ ಸಿಂಗಪುರಕ್ಕೆ ತೆರಳಿ, ಸಂಚಲನ ಮೂಡಿಸಿದ್ದಾರೆ.
ರಹಸ್ಯಮಯ ಜೀವನ ಸಾಗಿಸುವ ಕಿಮ್ ಅವರು ಟ್ರಂಪ್ ಜತೆಗಿನ ಮಾತುಕತೆ ನಡೆಸಲು ಬಂದಿದ್ದು, ಕಿಮ್ ಅವರ ಜತೆಗೆ ಬಂದಿರುವ ನಿಯೋಗದಲ್ಲಿರುವ ಅವರ ತಂಗಿ ಕಿಮ್ ಯೋ ಜಾಂಗ್ ಎಲ್ಲರ ಗಮನ ಸೆಳೆದಿದ್ದಾರೆ.

ಕಿಮ್ ಯೋ ಜಾಂಗ್: ಕಿಮ್ ಜಾಂಗ್ ಉನ್ ಅವರ ಕಿರಿಯ ಸೋದರಿ ಕಿಮ್ ಯೋ ಅವರು ಪಾಲಿಟ್ ಬ್ಯೂರೋ ಸದಸ್ಯ ಅಷ್ಟೇ ಅಲ್ಲ, ದೇಶದ ಆಡಳಿತದ ನಡೆಸಿರುವ ಕಿಮ್ ಕುಟುಂಬದಲ್ಲಿ ನಂ.2 ಸ್ಥಾನ ಗಳಿಸಿದ್ದಾರೆ.
ಸಾಮಾನ್ಯವಾಗಿ ಕಿಮ್ ಜಾಂಗ್ ಜತೆ ಬರುವ ಅಧಿಕಾರಿಗಳು ಈ ಬಾರಿ ಪ್ರತ್ಯೇಕ ವಿಮಾನದಲ್ಲಿ ಸಿಂಗಪುರದಲ್ಲಿ ತೆರಳುವಂತೆ ಸೂಚಿಸಿದ್ದು ಕೂಡಾ ಕಿಮ್ ಯೋ. ಆಕೆ ಕೂಡಾ ಅಣ್ಣನ ಜತೆ ತೆರಳದೆ ನಂತರ ಸಿಂಗಪುರಕ್ಕೆ ಬಂದಿದ್ದಾರೆ.
ಉತ್ತರ ಕೊರಿಯಾದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಪ್ರತ್ಯಕ್ಷವಾಗಿ ಪಾತ್ರವಹಿಸುವ ಕಿಮ್ ಯೋ, ಅಣ್ಣನ ಆಡಳಿತ ತಂತ್ರಗಾರಿಕೆಯ ಹಿಂದಿನ ಶಕ್ತಿ ಎನಿಸಿಕೊಂಡಿದ್ದಾರೆ.

2014ರಿಂದ ಕಿಮ್ ಜಾಂಗ್ ಉನ್ ಅವರ ರಾಜಕೀಯ ಸಲಹೆಗಾರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾಧ್ಯಮದೆದುರು ವಿರಳವಾಗಿ ಕಾಣಿಸಿಕೊಳ್ಳುವ ಕಿಮ್ ಯೋ ಅವರು ಸರ್ವಾಧಿಕಾರಿಯ ಪಾತ್ರಕ್ಕೆ ಹೇಳಿ ಮಾಡಿಸಿದಂತೆ ಇದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
1996 ರಿಂದ 2000ರದವರೆಗೆ ಸ್ವಿಟ್ಜರ್ಲ್ಯಾಂಡ್ನಲ್ಲಿ ತಮ್ಮ ಶಿಕ್ಷಣ ಪೂರೈಸಿದ ಯೋ, ಇಲ್ ಸುಂಗ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿದ್ದಾರೆ.ಇಂಗ್ಲೀಷ್ ಹಾಗೂ ಜರ್ಮನ್ ಬಲ್ಲವರಾಗಿದ್ದಾರೆ.
ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಕಿಮ್ ಕುಟುಂಬದ ಸದಾ ಸುದ್ದಿಯಾಗುವುದರ ಹಿಂದೆ ಯೋ ಕೈವಾಡವಿದೆ ಎನ್ನಲಾಗುತ್ತದೆ. ಈಗ ಟ್ರಂಪ್ ಹಾಗೂ ಕಿಮ್ ನಡುವಿನ ಐತಿಹಾಸಿಕ ಭೇಟಿ ಹಾಗೂ ಮಾತುಕತೆ ಹಿಂದಿನ ರೂಪುರೇಷೆಯನ್ನು ಕೂಡಾ ಯೋ ವಹಿಸಿಕೊಂಡಿದ್ದಾರೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications