North Korea: ದೊಡ್ಡಣ್ಣ ಅಮೆರಿಕ ವಿರುದ್ಧ ತೊಡೆತಟ್ಟಿದ ಉತ್ತರ ಕೊರಿಯಾ, ಮತ್ತಷ್ಟು ಪರಮಾಣು ಬಾಂಬ್ ರೆಡಿ?
ಅಮೆರಿಕ ಹಾಗೂ ಉತ್ತರ ಕೊರಿಯಾ ನಡುವೆ ಸುಮಾರು ಅರ್ಧ ಶತಮಾನದಿಂದ ದ್ವೇಷ ಇದೆ. ಎರಡೂ ದೇಶಗಳು ಒಬ್ಬರ ಮೇಲೆ ಮತ್ತೊಬ್ಬರು ಪರಮಾಣು ಬಾಂಬ್ ಹಾಕುವಷ್ಟು ಕೋಪ ಕಾಪಾಡಿಕೊಂಡು ಬಂದಿದ್ದಾರೆ. ಇಂತಹ ಸ್ಥಿತಿ ಇರುವಾಗ ಅಮೆರಿಕ ದಿಢೀರ್ ವೆನಿಜುಯೆಲಾ ಮೇಲೆ ದಾಳಿ ಅಲ್ಲಿನ ಅಧ್ಯಕ್ಷನ ಅರೆಸ್ಟ್ ಮಾಡಿ ಅಮೆರಿಕಗೆ ಕರೆದುಕೊಂಡು ಹೋಗಿದೆ. ಈ ಘಟನೆ ಬೆನ್ನಲ್ಲೇ ಅಮೆರಿಕದ ಶತ್ರುಗಳ ಎದೆಯಲ್ಲಿ ನಡುಕ ಶುರುವಾಗಿದೆ. ಅದರಲ್ಲೂ ಉತ್ತರ ಕೊರಿಯಾ ರೊಚ್ಚಿಗೆದ್ದು ಮತ್ತಷ್ಟು ಪರಮಾಣು ಬಾಂಬ್ಗಳನ್ನು ರೆಡಿ ಮಾಡಿಕೊಳ್ಳುತ್ತಿದೆ.
2024ರ ಹೊತ್ತಿಗೆ ಉತ್ತರ ಕೊರಿಯಾ ಬಳಿ ಬರೋಬ್ಬರಿ 50 ಪರಮಾಣು ಬಾಂಬ್ಗಳು ಇದ್ದು, ಇದೀಗ ಮತ್ತಷ್ಟು ಹೆಚ್ಚಾಗಿವೆ. ಅದರಲ್ಲೂ ಅಮೆರಿಕ ಅಧ್ಯಕ್ಷ ಟ್ರಂಪ್ ನಡೆ ವಿರುದ್ಧ ಭಾರಿ ಆಕ್ರೋಶ ಹೊರ ಹಾಕಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ತಮ್ಮ ರಕ್ಷಣೆಗೆ ಮತ್ತಷ್ಟು ಬಾಂಬ್ಗಳ ಅಗತ್ಯತೆ ಇದೆ ಎಂಬುದನ್ನು ಪ್ರಸ್ತಾಪ ಮಾಡಿದ್ದಾನೆ.

ಉತ್ತರ ಕೊರಿಯಾ ಬಗ್ಗೆ ಟ್ರಂಪ್ ಸೈಲೆಂಟ್
ಅಲ್ಲದೇ ಉತ್ತರ ಕೊರಿಯಾದ ನ್ಯೂಕ್ಲಿಯರ್ ಪ್ಲಾಂಟ್ಗಳಲ್ಲಿ ಇನ್ನಷ್ಟು ಪರಮಾಣು ಬಾಂಬ್ ಸಿಡಿತಲೆ ಉತ್ಪಾದನೆ ಮಾಡಲಾಗುತ್ತಿದೆ ಎಂಬ ಮಾಹಿತಿ ತಲ್ಲಣ ಸೃಷ್ಟಿಸಿದೆ. ಇದರ ಜೊತೆಗೆ ನ್ಯೂಕ್ಲಿಯರ್ ಬಾಂಬ್ ಹೊತ್ತೊಯ್ಯುವ ಸಾಮರ್ಥ್ಯ ಇರುವ, ಹೊಸ ಕ್ಷಿಪಣಿಗಳನ್ನು ಕೂಡ ಅಭಿವೃದ್ಧಿಪಡಿಸಿ ದೊಡ್ಡದಾಗೇ ಉತ್ತರ ಕೊರಿಯಾ ಸಿದ್ಧತೆ ಆರಂಭ ಮಾಡಿದೆ. ಇಷ್ಟಾದರೂ ಅಮೆರಿಕ ಅಧ್ಯಕ್ಷ ಟ್ರಂಪ್ ಮಾತ್ರ ಉತ್ತರ ಕೊರಿಯಾ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ಕುತೂಹಲ ಹೆಚ್ಚು ಮಾಡಿದೆ.
ಒಂದು ಬಾರಿ ಭೇಟಿ ಆಗಿದ್ದರು ಟ್ರಂಪ್
2016ರ ಅವಧಿಯಲ್ಲಿ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರಾಗಿದ್ದ ಟ್ರಂಪ್, ಆರಂಭದಲ್ಲಿ ಇದೇ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಜೊತೆಗೆ ಕಿರಿಕ್ ಮಾಡಿಕೊಂಡಿದ್ದರು. ಆ ನಂತರ ಇಬ್ಬರ ನಡುವೆ ಸಂಧಾನ ನಡೆದು ಭೇಟಿ ಕೂಡ ಮಾಡಿದ್ದರು. ಖುದ್ದು ಟ್ರಂಪ್ ದಕ್ಷಿಣ ಕೊರಿಯಾಗೆ ಹೋಗಿ, ಗಡಿಯಲ್ಲಿ ಕಿಮ್ ಜಾಂಗ್ ಉನ್ ಮೀಟ್ ಮಾಡಿದ್ದರು. ಈ ಎಲ್ಲಾ ಬೆಳವಣಿಗೆ ನಂತರ ಎರಡೂ ದೇಶಗಳ ದ್ವೇಷ ಸರಿಯಾಗಲಿದೆ ಎಂಬ ನಿರೀಕ್ಸೆ ಕೂಡ ಇತ್ತು. ಆದರೆ ಈಗ ತಿಕ್ಕಾಟ ಇನ್ನಷ್ಟು ಹೆಚ್ಚಾಗುತ್ತಿದೆ.
ಉತ್ತರ ಕೊರಿಯಾ ಮೇಲೆ ಮತ್ತಷ್ಟು ನಿರ್ಬಂಧ?
ಈಗಾಗಲೇ ನೂರಾರು ಆರ್ಥಿಕ ನಿರ್ಬಂಧ ಎದುರಿಸುತ್ತಿರುವ ಉತ್ತರ ಕೊರಿಯಾ ಸಂಕಷ್ಟಗಳ ಸರಮಾಲೆಗೆ ಸಿಲುಕಿದೆ. ರಷ್ಯಾ & ಚೀನಾ ಮಾಡುತ್ತಿರುವ ಸಹಾಯದ ಫಲವಾಗಿ ಉಸಿರಾಟ ನಡೆಸುತ್ತಿದೆ ಉತ್ತರ ಕೊರಿಯಾ. ಹೀಗಿದ್ದಾಗ ಪದೇ ಪದೇ ಪರಮಾಣು ಸಾಮರ್ಥ್ಯದ ಕ್ಷಿಪಣಿ ಪರೀಕ್ಷೆ ಮಾಡುತ್ತಿರುವ ಉತ್ತರ ಕೊರಿಯಾ ವಿರುದ್ಧ ಅಮೆರಿಕ ಈಗ ಇನ್ನಷ್ಟು ನಿರ್ಬಂಧದ ಅಸ್ತ್ರ ಪ್ರಯೋಗ ಮಾಡುವ ಸಾಧ್ಯತೆ ದಟ್ಟವಾಗಿದೆ. ಆದರೆ ಇದಕ್ಕೆಲ್ಲಾ ಕಿಮ್ ಕೇರ್ ಮಾಡುವ ವ್ಯಕ್ತಿಯೇ ಅಲ್ಲ ಅನ್ನೋದು ಅಮೆರಿಕಗೆ ಕೂಡ ಚನ್ನಾಗಿಯೇ ಗೊತ್ತಿದೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications