ಎವರೆಸ್ಟ್ ಹೆಬ್ಬಾಗಿಲು ಲೂಕ್ಲಾದಲ್ಲಿ ವಿಮಾನ ದುರಂತದಲ್ಲಿ 3 ಸಾವು
ಲೂಕ್ಲಾ, ಏಪ್ರಿಲ್ 14: ಇಲ್ಲಿನ ತೇನ್ಜಿಂಗ್ ಹಿಲ್ಲರಿ ವಿಮಾನ ನಿಲ್ದಾಣದಲ್ಲಿಂದು ದುರಂತ ಸಂಭವಿಸಿದೆ. ಸಮ್ಮಿಟ್ ಏರ್ ಸಂಸ್ಥೆ(ಗೋಮಾ ಏರ್) ಗೆ ಸೇರಿರುವ ಲಘು ವಿಮಾನವೊಂದು ದುರಂತಕ್ಕೀಡಾಗಿದ್ದು, ಕೋ ಪೈಲಟ್ ಸೇರಿ ಮೂವರು ಮೃತಪಟ್ಟಿದ್ದು, 5ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಜಗತ್ತಿನ ಅತ್ಯಂತ ಭಯಾನಕ ರನ್ ವೇಗಳಲ್ಲಿ ಲೂಕ್ಲಾ ವಿಮಾನ ನಿಲ್ದಾಣ ಕೂಡಾ ಒಂದೆನಿಸಿದೆ. ಇಲ್ಲಿನ ಕಡಿದಾದ ರನ್ ವೇ, ಇಕ್ಕಟ್ಟಾದ ವಿಮಾನ ನಿಲ್ದಾಣದಲ್ಲಿ ವಿಮಾನ ಟೇಕಾಫ್, ಲ್ಯಾಂಡಿಂಗ್ ಮಾಡುವುದೇ ದೊಡ್ಡ ಸಾಹಸ.
ಇಂಥ ವಿಮಾನ ನಿಲ್ದಾಣದಲ್ಲಿ ಪ್ರತಿ ಕೂಲ ಹವಾಮಾನದ ನಡುವೆ ಇಂದು ಚೆಕ್ ನಿರ್ಮಿತ ಎಲ್ ಇಟಿ 410 ಸಮ್ಮಿಟ್ ಏರ್ ವಿಮಾನವನ್ನು ಟೇಕಾಫ್ ಮಾಡಲು ಯತ್ನಿಸಿದ ಪೈಲಟ್ ಗೆ ಅಲ್ಲಿ ನಿಲ್ಲಿಸಲಾಗಿದ್ದ ಹೆಲಿಕಾಪ್ಟರ್ ಕಂಡಿದೆ. ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದರೂ ಫಲ ನೀಡಲಿಲ್ಲ. ಹೆಲಿಕಾಪ್ಟರ್ ಗೆ ಗುದ್ದಿ, ವಿಮಾನದ ಮುಂಭಾಗ ಮೂತಿ ನೆಲಕ್ಕಪ್ಪಳಿಸಿದೆ ಎಂದು ವಿಮಾನಯಾನ ಅಧಿಕಾರಿ ರಾಜ್ ಕುಮಾರ್ ಛೆಟ್ರಿ ಹೇಳಿದ್ದಾರೆ.

ನೇಪಾಳದ ಸೋಲೋ ಕುಂಬು ಕಣಿವೆ ಪ್ರದೇಶದಲ್ಲಿರುವ ಲೂಕ್ಲಾ ವಿಮಾನ ನಿಲ್ದಾಣವು ಎವರೆಸ್ಟ್ ಬೇಸ್ ಕ್ಯಾಂಪ್ ಟ್ರೆಕ್ ಹೋಗುವವರಿಗೆ ಹೆಬ್ಬಾಗಿಲಾಗಿದೆ. ಕಠ್ಮಂಡು ವಿಮಾನ ನಿಲ್ದಾಣವನ್ನು ಜೂನ್ 31ರ ತನಕ ಮುಚ್ಚಲಾಗಿದ್ದು, ಲೂಕ್ಲಾದಿಂದ ಈ ವಿಮಾನವು ರಾಮೆಚಾಪ್ ಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ.
ALERT Summit Air (9N-AMH) Let L-410UVP-E20 Turbolet has crashed into two AS350 helicopters during a takeoff attempt at Tenzing–Hillary Airport, Nepal. Two fatalities & 5 injuries have been reported. pic.twitter.com/IdLKoihfKR
— Air Disasters (@AirCrashMayday) April 14, 2019
ಮೃತರನ್ನು ಕೋ ಪೈಲಟ್ ಸುಜಿತ್ ಧುಂಗನಾ, ಪೊಲೀಸ್ ಸಿಬ್ಬಂದಿಗಳಾದ ರಾಮ್ ಬಹದ್ದೂರ್ ತಮಾಂಗ್, ರುದ್ರ ಶ್ರೇಷ್ಠ ಎಂದು ತಿಳಿದು ಬಂದಿದೆ. ಕ್ಯಾ. ರಬಿನಾಥ್ ರೊಕಯಾ, ಮನಂಗ್ ಏರ್ ಚೆಟ್ ಬಿ ಗುರುಂಗ್ ಅವರು ಸೇರಿದಂತೆ ಗಾಯಗೊಂಡ ಪ್ರಯಾಣಿಕರನ್ನು ಕಠ್ಮಂಡುವಿಗೆ ಏರ್ ಲಿಫ್ಟ್ ಮಾಡಲಾಗಿದ್ದು, ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಲೂಕ್ಲಾ ವಿಮಾನ ನಿಲ್ದಾಣ, ರನ್ವೇ ಝಲಕ್ ಈ ವಿಡಿಯೋದಲ್ಲಿದೆ ನೋಡಿ:
2008ರಲ್ಲಿ ಯೇತಿ ವಿಮಾನಯಾನ ಸಂಸ್ಥೆ ವಿಮಾನ ದುರಂತದಲ್ಲಿ 18 ಮಂದಿ ದುರ್ಮರಣ ಹೊಂದಿದ್ದರು. ಮೃತರ ಪೈಕಿ ಬಹುತೇಕ ಜರ್ಮನಿಯ ಟ್ರೆಕ್ಕರ್ಸ್ ಇದ್ದರು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications