ಮೈಮೇಲೆ ಮನೆ ಬಿದ್ದಿದ್ರೂ ಮಗುವನ್ನು ಹೊಟ್ಟೆಯಲ್ಲಿ ರಕ್ಷಿಸಿದ ಮಹಾತಾಯಿ!
ಕಠ್ಮಂಡು, ಮೇ. 14 : ಅಮ್ಮಂದಿರಿರುವ ಮಕ್ಕಳೆಲ್ಲ ಜಾಗತಿಕವಾಗಿ ಮೊನ್ನೆ ಭಾನುವಾರ ಅಮ್ಮನ ದಿನ ಆಚರಿಸಿಕೊಂಡರು. ತಮಿಳುನಾಡಿನ 'ಅಮ್ಮ'ನ 'ಕಂದಮ್ಮ'ಗಳಿಗೆ ಜಯಲಲಿತಾ ಜೈಲುಶಿಕ್ಷೆಯಿಂದ ಮುಕ್ತಳಾದ ದಿನವೇ ಅಮ್ಮನ ದಿನ. ಆದರೆ, ಭಾರೀ ಪ್ರಕೃತಿ ವೈರುಧ್ಯಗಳನ್ನು ಎದುರಿಸಿ ಜನಿಸಿದ ಈ ಗಂಡು ಮಗುವಿಗೆ ಮೇ 13ರ ಬುಧವಾರವೇ ಮದರ್ಸ್ ಡೇ.
ಎಲ್ಲಕ್ಕಿಂತ ಹೆಚ್ಚಾಗಿ, ತನ್ನ ಮಗುವಿಗಾಗಿ ಬದುಕುವ ಆಸೆಯನ್ನು ಹಿಡಿದಿಟ್ಟುಕೊಂಡು, ಸಾಹಸ ಮಾಡಿ ಕಟ್ಟಡದ ಅವಶೇಷಗಳ ಅಡಿಯಿಂದ ತಾನೇ ಹೋರಾಡಿ ಹೊರಬಂದ ಅಮ್ಮನಿಗೊಂದು ಭಕ್ತಿಪೂರ್ವಕ ಪ್ರಣಾಮ. ಹೌದು, ನೇಪಾಳದಲ್ಲಿ ಮೊದಲನೇ ಬಾರಿ ಸಂಭವಿಸಿದ ಭೂಕಂಪದಲ್ಲಿ ಕಟ್ಟಡದಡಿ ಸಿಲುಕಿದ್ದ 28 ವರ್ಷದ ಡೊಲ್ಮಾ ತಮಂಗ್ ಈ ಸಾಹಸ ಮೆರೆದ ತಾಯಿ.
ಮಗು ಜಗದ ಇರುವನ್ನು ಅರಿತುಕೊಳ್ಳಲು ಆರಂಭಿಸಿದ ನಂತರ, ಮಡಿಲಲ್ಲಿ ಕೂಡಿಸಿಕೊಂಡು ತಾನು ಮೆರೆದ ಸಾಹಸವನ್ನು ಬಿಡಿಬಿಡಿಯಾಗಿ ತಮಾಂಗ್ ಹೇಳುತ್ತಿದ್ದರೆ ಮಗುವಿಗೆ ರೋಮಾಂಚನವಾಗದೆ ಇದ್ದೀತಾ? [ಕಠ್ಮಂಡುವಿನಲ್ಲಿ ನಾಲ್ಕು ತಿಂಗಳ ಮಗುವಿನ ರಕ್ಷಣೆ]

ಆಗಿದ್ದೇನೆಂದರೆ, ಏಪ್ರಿಲ್ 25ರಂದು ನೇಪಾಳದಲ್ಲಿ 7.8 ಪ್ರಮಾಣದಷ್ಟು ಸಂಭವಿಸಿದ ಭೀಕರ ಭೂಕಂಪದ ಸಂದರ್ಭದಲ್ಲಿ ಡೊಲ್ಮಾ ತಮಂಗ್ ತುಂಬು ಗರ್ಭಿಣಿ. ಅಂದು ಆಕೆ ವಾಸವಾಗಿದ್ದ ಮನೆಯೂ ಧರಾಶಾಯಿಯಾಗಿತ್ತು. ಅದರಡಿ ತಮಾಂಗ್ ಸಿಲುಕಿದ್ದಳು, ಹೊಟ್ಟೆಯಲ್ಲಿದ್ದ ತನ್ನ ಮಗುವಿನ ಸಮೇತ.
ತಮಾಂಗ್ ತೀವ್ರವಾಗಿ ಗಾಯಗೊಂಡಿದ್ದಳು ಮತ್ತು ಇತರರ ಸಹಾಯ ಹೇಗೆ ಪಡೆಯಬೇಕೆಂಬ ಚಿಂತೆಯಲ್ಲಿದ್ದಳು. ಆದರೆ, ಬದುಕುವ ಆಸೆಯನ್ನು ಮಾತ್ರ ಬಿಟ್ಟಿರಲಿಲ್ಲ.
"ನನಗೆ ತೀವ್ರವಾಗಿ ಗಾಯಗಳಾಗಿದ್ದವು. ನಾನು ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದೆ. ನನಗೆ ನನ್ನ ಆರೋಗ್ಯದ ಬಗ್ಗೆ ಎಳ್ಳಷ್ಟೂ ಚಿಂತೆಯಿರಲಿಲ್ಲ. ಆದರೆ ಹೊಟ್ಟೆಯಲ್ಲಿದ್ದ ನನ್ನ ಮಗುವಿನ ಆರೋಗ್ಯದ ಬಗ್ಗೆ ತೀವ್ರ ಕಳವಳಗೊಂಡಿದ್ದೆ" ಎಂದು ಬಿಬಿಸಿಗೆ ತಮಾಂಗ್ ತನ್ನ ಕಥೆಯನ್ನು ಬಿಚ್ಚಿಟ್ಟಿದ್ದಾಳೆ.
"ಭೂಕಂಪದಲ್ಲಿ ನಾನು ಎಲ್ಲವನ್ನೂ ಕಳೆದುಕೊಂಡೆ, ಮನೆಮಠವೂ ಹೋಯಿತು. ತಾತ್ಕಾಲಿಕ ಜೋಪಡಿಯಲ್ಲಿ ಬದುಕುತ್ತಿದ್ದೆ. ಆದರೆ ಈ ನನ್ನ ಮಿರಾಕಲ್ ಕಂದಮ್ಮ ಎಲ್ಲ ನೋವುಗಳನ್ನು ಮರೆಯುವಂತೆ ಮಾಡಿದೆ. ಆರೋಗ್ಯಕರವಾಗಿ ಜನಿಸಿದ್ದು ನಮ್ಮ ಕುಟುಂಬಕ್ಕೆ ಮರುಜನ್ಮ ಸಿಕ್ಕಂತಾಗಿದೆ" ಎಂದು ತಮಾಂಗ್ ಸಂತಸ ಹಂಚಿಕೊಂಡಿದ್ದಾಳೆ.
ಮತ್ತೊಂದು ಘಟನೆಯಲ್ಲಿ, ಭೂಕಂಪ ಸಂಭವಿಸುವ ಕೆಲವೇ ಗಂಟೆಗಳ ಮೊದಲು ರಂಜಿತಾ ಶ್ರೇಷ್ಠಾ ಎಂಬ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಭೂಕಂಪ ಸಂಭವಿಸಿದ ಎರಡು ದಿನಗಳ ನಂತರ ಅವಶೇಷಗಳಡಿ ಸಿಲುಕಿದ್ದ ನಾಲ್ಕು ತಿಂಗಳ ಮಗುವನ್ನು ಯೋಧರು ಯಶಸ್ವಿಯಾಗಿ ಪಾರು ಮಾಡಿದ್ದರು.
ಈ ಭೀಕರ ಭೂಕಂಪದಲ್ಲಿ ಎಷ್ಟೋ ಜೀವಗಳು ಬಲಿಯಾಗಿವೆ, ಎಷ್ಟೋ ದುರಾದೃಷ್ಟವಂತರು ಬದುಕಿಯೂ ಸತ್ತಂತಾಗಿದ್ದಾರೆ. ಆದರೆ, ಇಂಥ ಕಂದಮ್ಮಗಳು ಈ ದುರಂತದ ನಡುವೆಯೂ ಬದುಕಲು ಆಶಾಭಾವನೆ ಮೂಡಿಸುತ್ತಿವೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications