ಟ್ರಂಪ್ ಗೆಲುವಿಗಾಗಿ ಎನ್ನಾರೈಗಳಿಂದ ವಿಶೇಷ ಪೂಜೆ!
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಉದ್ಯಮಿ ಡೊನಾಲ್ಡ್ ಟ್ರಂಪ್ ಅವರು ವಿಜಯಶಾಲಿ ಆಗಲೆಂದು ಅನಿವಾಸಿ ಭಾರತೀಯರು ವಿಶೇಷ ಪೂಜೆ ಸಲ್ಲಿಸಿದ್ದಾರೆ
ಮುಂಬೈ, ನವೆಂಬರ್ 08: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಉದ್ಯಮಿ ಡೊನಾಲ್ಡ್ ಟ್ರಂಪ್ ಅವರು ವಿಜಯಶಾಲಿ ಆಗಲೆಂದು ಅನಿವಾಸಿ ಭಾರತೀಯರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹಿಲರಿ ಕ್ಲಿಂಟನ್ ಪರ ಕರ್ನಾಟಕದ ಕುದ್ರೋಳಿ ಗೋಕರ್ಣನಾಥ ದೇಗುಲದಲ್ಲಿ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ಪೂಜೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಫ್ ಅವರ ಗೆಲುವಿಗಾಗಿ ನಾವು ವಿಶೇಷ ಯಾಗವನ್ನು ಮಾಡಿದ್ದೇವೆ. ಇದರಿಂದ ಅಮೆರಿಕದಲ್ಲಿರುವ ಎನ್ನಾರೈಗೆಗಳಿಗೆ ಒಳ್ಳೆಯದಾಗಲಿದೆ ಎಂದು ಮುಂಬೈನ ವಿಷ್ಣುಧಾಮ್ ದೇಗುಲದ ಟ್ರಸ್ಟಿ ರಮೇಶ್ ಜೋಶಿ ಅವರು ಹೇಳಿದ್ದಾರೆ.[ಹಿಲರಿ ಗೆಲ್ಲಲೆಂದು ಮಂಗಳೂರಲ್ಲಿ ಕೃಷ್ಣನಿಗೆ ವಿಶೇಷ ಪೂಜೆ]

ಮುಂಬೈನ ಉತ್ತರ ಭಾಗದ ಕಂಡಿವ್ಲಿಯ ಹೊರ ವಲಯದಲ್ಲಿರುವ ಈ ದೇಗುಲದಲ್ಲಿ ಮೂರು ಗಂಟೆಗಳಿಗೂ ಅಧಿಕ ಕಾಲ ನಡೆದ ಈ ಯಾಗದಲ್ಲಿ ಎನ್ನಾರೈಗಳ ಪರವಾಗಿ ಪೂಜೆ ಸಲ್ಲಿಸಲಾಗಿದೆ. [ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆ ಮುನ್ನಲೆ]
ಈ ದೇಗುಲಕ್ಕೆ ಎನ್ನಾರೈಗಳು ಹೆಚ್ಚಾಗಿ ಭೇಟಿ ಕೊಡುತ್ತಾರೆ. ಅಮೆರಿಕದಲ್ಲಿರುವ ಭಾರತ ಮೂಲದ ನಿವಾಸಿಗಳು ಮುಂಬೈಗೆ ಬಂದಾಗ ಈ ದೇಗುಲಕ್ಕೆ ತಪ್ಪದೇ ಭೇಟಿ ನೀಡುತ್ತಾರೆ. ಈ ಬಾರಿ ಹೀಗೆ ಬಂದಿದ್ದ ಎನ್ನಾರೈಗಳು ತಮ್ಮ ನೆಚ್ಚಿನ ಅಭ್ಯರ್ಥಿ ಟ್ರಂಪ್ ಪರವಾಗಿ ವಿಶೇಷ ಪೂಜೆ, ಯಾಗ ನಡೆಸುವಂತೆ ಕೋರಿದ್ದರು.
ಲಭ್ಯವಿರುವ ಮಾಹಿತಿಯಂತೆ ಟ್ರಂಪ್ ಗೆಲುವಿಗಾಗಿ ನಡೆಸಲಾದ ಯಾಗವನ್ನು 'ವಿಜಯ ಪ್ರತಿ ಯಜ್ಞ' ಎಂದು ಕರೆಯಲಾಗಿದೆ. ಶಾಸನ ಪ್ರತಿ ಯಜ್ಞ ನಡೆಸಿ ಟ್ರಂಪ್ ಅಧಿಕಾರ ನಡೆಸಲು ಅನುಕೂಲವಾಗಲಿ ಎಂದು ಹಾರೈಸಲಾಗಿದೆ.
ಭಾರತದಲ್ಲಿರುವ ಭಯೋತ್ಪಾದನೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಭರವಸೆಯನ್ನು ಅನಿವಾಸಿ ಭಾರತೀಯರಿಗೆ ಟ್ರಂಪ್ ನೀಡಿದ್ದಾರೆ ಹೀಗಾಗಿ ಅವರ ಪರ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ದೇಗುಲದ ಟ್ರಸ್ಟಿ ಹೇಳಿದ್ದಾರೆ. (ಪಿಟಿಐ)
-
ಇರಾನ್ ನೂತನ ಸರ್ವಾಧಿಕಾರಿ ಮೇಲೆ ಅಮೆರಿಕ ಕಣ್ಣು, ಖಮೇನಿ ಪುತ್ರನ ಬಗ್ಗೆ ಚರ್ಚೆ ಶುರು | Operation Roaring Lion -
ಭಾರತಕ್ಕೆ ಬಂಪರ್, ರಷ್ಯಾ ಮೂಲಕ 30 ಮಿಲಿಯನ್ ಬ್ಯಾರಲ್ ತೈಲ ಖರೀದಿ | Operation Roaring Lion -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ












Click it and Unblock the Notifications