ಕೊರೊನಾ ಸೋಂಕಿತರು 3 ದಿನಕ್ಕೆ ವಾಸನೆ ಗ್ರಹಿಕೆ ಶಕ್ತಿ ಕಳೆದುಕೊಳ್ಳುತ್ತಾರೆ
ಕೊರೊನಾ ಸೋಂಕಿತರು ಸೋಂಕು ತಗುಲಿ 3ದಿನಕ್ಕೆ ವಾಸನೆ ಗ್ರಹಿಕೆ ಶಕ್ತಿ ಕಳೆದುಕೊಳ್ಳುತ್ತಾರೆ.
Recommended Video
ಈ ಕುರಿತು ಸಂಶೋಧನೆ ವರದಿಯೊಂದು ಹೇಳಿದೆ. 100 ಕ್ಕೂ ಹೆಚ್ಚು ಕೊವಿಡ್ 19 ರೋಗಿಗಳ ಅಧ್ಯಯನದ ಪ್ರಕಾರ ಕೊರೊನಾ ತಗುಲಿದ ಮೂರು ದಿನಗಳಲ್ಲಿ ರೋಗಿಯ ವಾಸನಾ ಗ್ರಹಿಕೆ ಶಕ್ತಿ ಕುಗ್ಗುತ್ತದೆ. ಈ ಸಂಶೋಧನೆ ಆರೋಗ್ಯ ತಜ್ಞರಿಗೆ ಸೋಂಕಿತರನ್ನು ಗುರುತಿಸಲು ಸುಲಭವಾಗಿ ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.
ಯಾರಾದರೂ ಕೊವಿಡ್ -19 ರೋಗಿ ವಾಸನೆ ಗ್ರಹಿಕೆಯಲ್ಲಿ ಕೊರತೆಯಾಗಿದೆ ಎಂದರೆ ಅವರು ರೋಗ ಖಚಿತವಾಗಿರುವ ಮೊದಲ ವಾರದಲ್ಲಿದ್ದಾರೆ ಎಂದು ಅರಿಯಬೇಕು ಹಾಗೆಯೇ ನ್ನೂ ಒಂದು ವಾರ ಅಥವಾ ಎರಡು ವಾರಗಳ ನಿರೀಕ್ಷೆಯಲ್ಲಿ ಅವರನ್ನು ನಾವು ತೀವ್ರ ನಿಗಾದಲ್ಲಿರಿಸಬೇಕು.

ಟೆಲಿಫೋನಿಕ್ ಅಧ್ಯಯನದ ವರದಿ
Otolaryngology-Head and Neck Surgery ಜರ್ನಲ್ ನಲ್ಲಿ ಪ್ರಕಟವಾದ ಟೆಲಿಫೋನಿಕ್ ಅಧ್ಯಯನ ವರದಿ ಇದಾಗಿದ್ದು ಆರು ವಾರಗಳ ಅವಧಿಯಲ್ಲಿ ಕೋವಿಡ್ -19 ರೋಗನಿರ್ಣಯ ಮಾಡಿದ 103 ರೋಗಿಗಳ ಗುಣಲಕ್ಷಣಗಳು ಮತ್ತು ರೋಗಲಕ್ಷಣದ ಆಧಾರದಲ್ಲಿ ಇದನ್ನು ಗುರುತಿಸಲಾಗಿದೆ

ಉಸಿರಾಟದ ತೊಂದರೆಯಾಗಿ ಮಾರ್ಪಾಡು
"ನೀವು ಕೊರೊನಾ ಗಂಭೀರ ರೋಗಲಕ್ಷಣಗಳನ್ನು ಅನುಭವಿಸಲು ಪ್ರಾರಂಭಿಸಿದಾಗ ಅದು ಉಸಿರಾಟದ ತೊಂದರೆಯಾಗಿ ಮಾರ್ಪಡಲಿದೆ. ಆಗ ನೀವು ಗಾಬರಿಗೆ ಒಳಗಾಗುತ್ತೀರಿ. ಧ್ಯಯನದಲ್ಲಿ ಕಿರಿಯ ರೋಗಿಗಳು ಮತ್ತು ಮಹಿಳೆಯರನ್ನೂ ಒಳಗೊಂಡಿದ್ದು ಅವರಲ್ಲಿ ಸಹ ವಾಸನೆ ಗ್ರಹಿಕೆಯ ಕೊರತೆ ಅಥವಾ ಇಲ್ಲದಿರುವಿಕೆ ಕಂಡುಬಂದಿದೆ ಎಂದು ಅಧ್ಯಯನವು ತಿಳಿಸಿದೆ

ಸ್ವಿಡ್ಜರ್ಲೆಂಡ್ನ ರೋಗಿಗಳು
ಸ್ವಿಟ್ಜರ್ಲ್ಯಾಂಡ್ನ ಆರಾವ್ನ ರೋಗಿಗಳು ತಮ್ಮಲ್ಲಿ ಕೋವಿಡ್ -19 ರೋಗಲಕ್ಷಣಗಳನ್ನು ಹೊಂದಿರುವ ದಿನಗಳು ಮತ್ತು ಅವರ ವಾಸನೆ ಗ್ರಹಿಕೆ ಇಲ್ಲದಿರುವುದರ ತೀವ್ರತೆಯ ಬಗ್ಗೆ ಮಾಹಿತಿ ನೀಡಿದರು ಎಂದು ಅಧ್ಯಯನ ತಂಡದ ಸದಸ್ಯ, ಸಂಶೋಧಕ ಯುಎಸ್ನ ಸಿನ್ಸಿನಾಟಿ ವಿಶ್ವವಿದ್ಯಾಲಯದ ಅಹ್ಮದ್ ಸೆದಘಾಟ್ ಹೇಳಿದ್ದಾರೆ. 103 ರೋಗಿಗಳಲ್ಲಿ, ಕನಿಷ್ಠ 61 ಪ್ರತಿಶತದಷ್ಟು ಜನರು ವಾಸನೆ ಗ್ರಹಿಕೆಯನ್ನು ಕಳೆದುಕೊಂಡಿದ್ದಾಗಿ ಅಥವಾ ಕಡಿಮೆಯಾಗಿದ್ದಾಗಿ ವರದಿ ಹೇಳಿದೆ.`ವಾಸನೆಯ ಗ್ರಹಿಕೆಯಲ್ಲಿನ ತೊಂದರೆ ಅಥವಾ ನಷ್ಟದ ಸರಾಸರಿ ಅವಧಿ ರೋಗ ತಗುಲಿದ ನಂತರದ 3-4 ದಿನಗಳಾಗಿರಲಿದೆ.

ವಾಸನೆ ಗ್ರಹಿಕೆ ಇಲ್ಲದಿರುವುದು
ವಾಸನೆಯ ಗ್ರಹಿಕೆ ಇಲ್ಲದಿರುವಿಕೆಯ ತೀವ್ರತೆಯು ಕೊವಿಡ್ ನ ಇತರೆ ರೋಗಲಕ್ಷಣಗಳು ಎಷ್ಟು ಕೆಟ್ಟದಾಗಿರುತ್ತದೆ ಎಂಬುದರ ಮೇಲೆ ಅವಲಂಬಿಸಿದೆ. ವಾಸನೆಯ ನಷ್ಟ ಎಂದೂ ಕರೆಯಲ್ಪಡುವ ಅನೋಸ್ಮಿಯಾ ಕೆಟ್ಟದಾಗಿದ್ದರೆ, ರೋಗಿಗಳು ಉಸಿರಾಟದ ತೊಂದರೆ ಮತ್ತು ಹೆಚ್ಚು ತೀವ್ರವಾದ ಜ್ವರ ಮತ್ತು ಕೆಮ್ಮಿಗೆ ಒಳಗಾಗುತ್ತಾರೆ.
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ












Click it and Unblock the Notifications