ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಠ್ಮಂಡು : ಜಲವಿದ್ಯುತ್ ಸ್ಥಾವರದ ಬಳಿ ಅನುಮಾನಾಸ್ಪದ ಸ್ಫೋಟ
ಕಠ್ಮಂಡು, ಏಪ್ರಿಲ್ 29: ನೇಪಾಳದ ಸಂಖುವಸಭ ಜಿಲ್ಲೆಯಲ್ಲಿ ಭಾರತ ನಿರ್ಮಿಸಿದ್ದ ಜಲವಿದ್ಯುತ್ ಸ್ಥಾವರದಲ್ಲಿ ಸ್ಫೋಟ ಸಂಭವಿಸಿದೆ.
"ಅರುಣ್ -3 ಜಲವಿದ್ಯುತ್ ಯೋಜನೆಯನ್ನು ಗುರಿಯಾಗಿರಿಸಿಕೊಂಡು ಏ.28 ರ ಶನಿವಾರ ಮಧ್ಯರಾತ್ರಿಯ ಸಮಯದಲ್ಲಿ ಸ್ಫೋಟ ಸಂಭವಿಸಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ" ಎಂದು ವರದಿಗಳು ತಿಳಿಸಿವೆ.
ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ಸ್ಫೋಟ, 10 ಜನರಿಗೆ ಗಾಯ
2014 ರಲ್ಲಿ ನೇಪಾಳಕ್ಕೆ ಭೇಟಿ ನೀಡಿದ್ದ ಮೋದಿ ಈ ಯೋಜನೆಗೆ ಶಿಲಾನ್ಯಾಸ ಹಾಕಿದ್ದರು. ಮುಂದಿನ ತಿಂಗಳು ನೇಪಾಳಕ್ಕೆ ಭೇಟಿ ನೀಡುವ ಸಮಯದಲ್ಲಿ ಯೋಜನೆಯನ್ನು ಮೋದಿ ಉದ್ಘಾಟಿಸಲಿದ್ದರು. ಆದರೆ ಇದ್ದಕ್ಕಿದ್ದಂತೆ ಇಲ್ಲಿ ಸಂಭವಿಸಿದ ಸ್ಫೋಟ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
2020 ರ ಹೊತ್ತಿಗೆ ಈ ಯೋಜನೆ ಸಂಫೂರ್ಣವಾಗಲಿದೆ. ಏ.17 ರಂದಷ್ಟೇ ಕಟ್ಮಂಡುವಿನ ಬಿರತ್ ನಗರ ಪ್ರದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿ ಬಳಿಯೂ ಸ್ಫೋಟ ಸಂಭವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
Comments
English summary
A minor explosion took place at a hydropower project in Nepal's Sankhuwasabha district on Saturday.