ಹಾಲಿನಂತಹ ಸಮುದ್ರದ ಮೇಲೆ ಆಯಿಲ್ ವಿಷದ ಆತಂಕ!
ಮಾರಿಷಸ್ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ..? ಸ್ವಚ್ಛಂದವಾದ -ಕಡಲ ತೀರ, ಹಾಲ್ನೊರೆಯಂತೆ ಕಂಗೊಳಿಸುವ ಅಲ್ಲಿನ ಸಮುದ್ರದ ನೀರು. ಇನ್ನೇನು ಬೇಕು ಪ್ರಕೃತಿಯ ಅಂದ ಸವಿಯಲು. ಆದರೆ ಜಪಾನ್ ಮೂಲದ ಕಂಪನಿಯೊಂದರ ಹಡಗು ಈ ಪ್ರಾಕೃತಿಕ ಸೌಂದರ್ಯಕ್ಕೆ ವಿಷ ಸುರಿದಿದೆ. 2 ವಾರದ ಹಿಂದೆ ಮಾರಿಷಸ್ ತೀರಕ್ಕೆ ಬಂದಿದ್ದ ಜಪಾನ್ ಮೂಲದ ಸರಕು ಸಾಗಣೆ ಹಡಗು ತೀವ್ರ ಪ್ರಮಾಣದಲ್ಲಿ ಹಾನಿಗೀಡಾಗಿ ಮುಳುಗುತ್ತಿದೆ. ಇದೇ ಹಡಗಿನಿಂದ ಸೋರಿಕೆಯಾಗುತ್ತಿರುವ ಅಪಾರ ಪ್ರಮಾಣದ ಡೀಸೆಲ್ ಮಾರಿಷಸ್ ಕಡಲ ತೀರವನ್ನು ಆವರಿಸಿದೆ.
Recommended Video
ಡೀಸೆಲ್ ವಿಷ ಆವರಿಸುತ್ತಿರುವ ಹಿನ್ನೆಲೆಯಲ್ಲಿ ಹಿಂದೂ ಮಹಾಸಾಗರದ ಹವಳದ ದಂಡೆಗಳು ಹಾಗೂ ಮತ್ಸ್ಯ ಸಂಪತ್ತಿಗೆ ಅಪಾಯ ಎದುರಾಗಿದೆ. ಜಲಚರಗಳ ಕಳೆಬರಹ ಸಾಗರ ತೀರಕ್ಕೆ ತೇಲಿ ಬರುತ್ತಿವೆ. ಈಗಾಗಲೇ ತುರ್ತು ಪರಿಸ್ಥಿತಿ ಘೋಷಿಸಿರುವ ಮಾರಿಷಸ್ ಸರ್ಕಾರ, ಸಾಗರ ಹಾಗೂ ಸಾಗರ ತೀರವನ್ನು ಕಾಪಾಡಲು ಹೆಣಗಾಡುತ್ತಿದೆ. ನೂರಾರು ಸ್ವಯಂ ಸೇವಕರು ಪ್ರಕೃತಿ ಮಾತೆಯ ರಕ್ಷಣೆಗೆ ಧಾವಿಸಿದ್ದಾರೆ. ಆದರೆ ಎಲ್ಲೆಲ್ಲೂ ಹರಡಿರುವ ಅಪಾರ ಪ್ರಮಾಣದ ಡೀಸೆಲ್ ಸಾಗರಕ್ಕೆ ಭಾರಿ ಹಾನಿ ಮಾಡುವ ಮುನ್ಸೂಚನೆ ನೀಡಿದೆ.

‘ನಾಗಸಾಕಿ ಶಿಪ್ಪಿಂಗ್ ಕಂಪನಿ’ ಎಡವಟ್ಟು..!
ಈಗ ತೀವ್ರವಾಗಿ ಹಾನಿಗೀಡಾಗಿರುವ ಹಡಗು ಜಪಾನ್ನ ‘ನಾಗಸಾಕಿ ಶಿಪ್ಪಿಂಗ್ ಕಂಪನಿ'ಗೆ ಸೇರಿದ್ದಾಗಿದೆ. ಈ ಕಂಪನಿಯ ‘ಎಂ.ವಿ.ವಾಕಾಶಿಯೊ' ಎಂಬ ಹೆಸರಿನ ಹಡಗು ಜುಲೈ 25 ರಂದು ಅಪಘಾತಕ್ಕೆ ಈಡಾಗಿತ್ತು. ಮಾರಿಷಸ್ ಕರಾವಳಿಯ ಆಗ್ನೇಯ ಭಾಗದಲ್ಲಿ ಸಾಗರ ತಳದ ಬಂಡೆಗಲ್ಲಿಗೆ ಹೊಡೆದು ಹಡಗು ದುರಂತಕ್ಕೀಡಾಯಿತು. ದುರಂತದ ಬಳಿಕ ಅರ್ಧಭಾಗ ಮುಳುಗಿರುವ ಹಡಗಿನಿಂದ ಅದರಲ್ಲಿದ್ದ ಕೆಲಸಗಾರರನ್ನು ರಕ್ಷಿಸಲಾಗಿದೆ. ಆದರೆ ತೈಲವನ್ನು ಹೊರತೆಗೆಯಲು ಸಾಧ್ಯವಾಗದೇ ಇದ್ದಿದ್ದು ಎಡವಟ್ಟಿಗೆ ಕಾರಣವಾಗಿದೆ.

ಒಂದಲ್ಲ.. ಎರಡಲ್ಲ.. 200 ಟನ್ ಡೀಸೆಲ್..!
ಇದು ಸರಕು ಸಾಗಣಿಕೆ ಮಾಡುವ ಹಡಗು. ಆದರೂ ಈ ಹಡಗು ಮಾರಿಷಸ್ ತೀರದಲ್ಲಿ ಅಪಘಾತಕ್ಕೆ ತುತ್ತಾಗುವ ಸಂದರ್ಭ ಖಾಲಿ ಇದ್ದರೂ 200 ಟನ್ ಡೀಸೆಲ್ ಹಾಗೂ 3,800 ಬಂಕರ್ ತೈಲ ದಾಸ್ತಾನು ಹೊಂದಿತ್ತು. ಈ ತೈಲ ಇದೀಗ ಸಾಗರಕ್ಕೆ ಸೋರಿಕೆಯಾಗುತ್ತಿದೆ. ನೆಲಕಚ್ಚಿರುವ ಹಡಗಲ್ಲಿ ದೊಡ್ಡ ಬಿರುಕು ಕಂಡು ಬಂದಿದ್ದು, ಹಡಗು 2 ತುಂಡಾಗುವ ಸಾಧ್ಯತೆಗಳಿವೆ ಎಂದು ಮಾರಿಷಸ್ ಅಧಿಕಾರಿಗಳೇ ಹೇಳುತ್ತಿದ್ದಾರೆ. ಇದು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಕೈಚೆಲ್ಲಿ ಕೂತ ಮಾರಿಷಸ್ ಸರ್ಕಾರ..?
ತೈಲ ಸೋರಿಕೆ ಅಪಾರ ಪ್ರಮಾಣದಲ್ಲಿ ಕಂಡುಬಂದ ತಕ್ಷಣ ತುರ್ತು ಪರಿಸ್ಥಿತಿ ಘೋಷಿಸಿ ಕಾರ್ಯಾಚರಣೆ ನಡೆಸಿದ್ದರೂ ದುರಂತ ತಪ್ಪಿಸಲು ಸಾಧ್ಯವಾಗಿಲ್ಲ. ಈಗಾಗಲೇ ಪರಿಸ್ಥಿತಿ ಕೈಮೀರಿ ಹೋಗಿದೆ. ಹೀಗಾಗಿ ತೈಲ ಸೋರಿಕೆ ತಡೆಯುವ ಪ್ರಯತ್ನಗಳೆಲ್ಲವೂ ವಿಫಲವಾಗಿವೆ. ಹೀಗಾಗಿ ಕಡಲ ತೀರದ ಸ್ವಚ್ಛತಾ ಕಾರ್ಯ ನಡೆಯುತ್ತಿದೆ ಎನ್ನುತ್ತಿದ್ದಾರೆ ಅಧಿಕಾರಿಗಳು. ಹೀಗೆ ಮಾರಿಷಸ್ ಸರ್ಕಾರದ ಅಧಿಕಾರಿಗಳ ಮಾತು ಕೇಳಿದರೆ ಪರಿಸ್ಥಿತಿ ಎದುರು ಮಂಡಿಯೂರಿದಂತೆ ಕಾಣುತ್ತಿದೆ.

ಫ್ರಾನ್ಸ್ ನೆರವು ಕೋರಿದ ಮಾರಿಷಸ್..!
ಪರಿಸ್ಥಿತಿ ಎಷ್ಟು ಕಠೋರವಾಗಿದೆ ಎಂದರೆ ಇಷ್ಟು ದಿನ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದ ನೀಲಿ ನೀಲಿ ಸಾಗರವೀಗ ಕಪ್ಪುಗಟ್ಟಿಹೋಗಿದೆ. ಸದ್ಯ ಉಪಗ್ರಹಗಳ ದೃಶ್ಯ ಪರಿಶೀಲಿಸಿದರೂ ಮಾರಿಷಸ್ ಕಡಲ ತೀರ ಕಪ್ಪುಕಪ್ಪಾಗಿ ಕಾಣುತ್ತಿದೆ. ನೀರಿನಲ್ಲಿ ಅಪಾರ ಪ್ರಮಾಣದ ಇಂಧನ ಬೆರೆತಿದೆ. ಪರಿಸ್ಥಿತಿ ನಿಭಾಯಿಸಲು ಮಾರಿಷಸ್ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಫ್ರಾನ್ಸ್ ನೆರವಿಗೆ ಮೊರೆಯಿಡಲಾಗಿದೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುವೆಲ್ ಮ್ಯಾಕ್ರನ್ಗೆ ಈ ಕುರಿತು ಮನವಿ ಮಾಡಲಾಗಿದೆ ಅಂತಾ ಮಾರಿಷಸ್ ಪ್ರಧಾನ ಪ್ರವಿಂದ್ ಜುಗ್ನಾಥ್ ಮಾಹಿತಿ ನೀಡಿದ್ದಾರೆ.

ಹಡಗಿನ ವಿರುದ್ಧ FIR ದಾಖಲು..!
ತನ್ನ ಸುಂದರ ಕಡಲ ತೀರವನ್ನು ಹಾಳುಗೆಡವಿದ ಜಪಾನ್ನ ‘ಒಕಿಯೊ ಮಾರಿಟೈಮ್ ಕಾರ್ಪೊರೇಷನ್ & ನಾಗಸಾಕಿ ಶಿಪ್ಪಿಂಗ್ ಕಂಪನಿ' ವಿರುದ್ಧ ಮಾರಿಷಸ್ ಸರ್ಕಾರ ರೊಚ್ಚಿಗೆದ್ದಿದೆ. ಈ ಕಂಪನಿ ವಿರುದ್ಧ ಕೇಸ್ ಕೂಡ ದಾಖಲಾಗಿದೆ. ಪ್ರಕರಣ ದಾಖಲಾದ ಹಿನ್ನೆಲೆ ತನಿಖೆ ನಡೆಯುತ್ತಿದ್ದು, ಈ ಕಂಪನಿಗೆ ಭಾರಿ ಪ್ರಮಾಣದ ದಂಡ ವಿಧಿಸುವ ಸಾಧ್ಯತೆಗಳು ದಟ್ಟವಾಗಿವೆ.
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ












Click it and Unblock the Notifications