ಫಿಲಿಪ್ಪೀನ್ಸ್ನಲ್ಲಿ ಸಂತ್ರಸ್ತರಿಗೆ ನಾವೆಲ್ಲರೂ ನೆರವಾಗುವಾ
ಭೀಕರ ಟೈಫೂನ್ 'ಹೈಯಾನ್' ಫಿಲಿಪ್ಪೀನ್ಸ್ ಕರಾವಳಿಯನ್ನು ಅಪ್ಪಳಿಸಿ ಅಪಾರ ಹಾನಿ ತಂದೊಡ್ದಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ, ಓದಿದ್ದೇವೆ. ಅಗಲೇ 10,000ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆಂದು ಸುದ್ದಿಯಿದೆ. ಲಕ್ಷಾಂತರ ಜನ ಮನೆಮಠ ಕಳೆದುಕೊಂಡಿದ್ದಾರೆ.
ಈಗಷ್ಟೇ ಟಿವಿಯಲ್ಲಿ ನ್ಯೂಸ್ ನೋಡ್ತಾ ಇದ್ದೆ. ಮಗುವನ್ನು ಕಂಕುಳಲ್ಲಿಟ್ಟುಕೊಂಡ ಒಬ್ಬ ತಾಯಿಯನ್ನು ರಿಪೋರ್ಟರ್ ಪ್ರಶ್ನಿಸುತ್ತಿದ್ದ. ಆಕೆ ತನ್ನ ಆಸ್ತಿಪಾಸ್ತಿಯನ್ನಷ್ಟೇ ಅಲ್ಲ ಕುಟುಂಬದವರನ್ನೆಲ್ಲ ಕಳೆದುಕೊಂಡಿದ್ದಾಳಂತೆ. ಮಾತಾಡುತ್ತಿರುವಾಗಲೇ ಗಳಗಳನೆ ಅತ್ತಳು. ಅಮ್ಮ ಏಕೆ ಅಳುತ್ತಿದ್ದಾಳೆಂದು ಆ ಮಗು ದಿಗಿಲುಗೊಂಡ ದೃಶ್ಯ ನೋಡಿದಾಗಂತೂ ನನಗೆ ತುಂಬಾ ದುಃಖವಾಯಿತು.
ಅಂಥ ಹೃದಯವಿದ್ರಾವಕ ದೃಶ್ಯಗಳು ಅದೆಷ್ಟೋ. ಜತೆಯಲ್ಲೇ, ಪರಿಹಾರ ಸಾಮಗ್ರಿಗಳಿಗಾಗಿ ಪೈಪೋಟಿ, ದಂಗೆ ಲೂಟಿ ಸ್ವೇಚ್ಛಾಚಾರವೂ ನಡೀತಿದೆಯಂತೆ. ಅಲ್ಲಿ ಪರಿಸ್ಥಿತಿ ಕರಾಳ ಇದೆ. ಫಿಲಿಪ್ಫಿನ್ಸ್ ಏನೂ ಶ್ರೀಮಂತ ದೇಶವಲ್ಲ. ಅವರಿಗೀಗ ನೆರವು ಬೇಕು. ಎಲ್ಲಬಗೆಯ ನೆರವೂ ಬೇಕು. ದೂರದೇಶಗಳಲ್ಲಿರುವ ನಾವು ಅಂತಾರಾಷ್ಟ್ರೀಯ ಸಹಾಯಸಂಸ್ಥೆಗಳ ಮೂಲಕ ಹಣ ಸಲ್ಲಿಸಿ ನೆರವಾಗಬಹುದು.

ನಾನು Unicefನ ಈ ಕೆಳಗಿನ ಲಿಂಕ್ನ ಮೂಲಕ ಆಗಲೇ ಒಂದಿಷ್ಟು ಹಣವನ್ನು ಫಿಲಿಪ್ಪೀನ್ಸ್ ಸಂತ್ರಸ್ತರ ನೆರವುನಿಧಿಗೆ ಸಲ್ಲಿಸಿದೆ. ನಾವು ಸಲ್ಲಿಸುವ ನೆರವು ಸದ್ವಿನಿಯೋಗವಾಗಬೇಕಾದರೆ ಇಂಥ ಸಂಸ್ಥೆಗಳ ಮೂಲಕ ಪಾವತಿ ಮಾಡುವುದೇ ಒಳ್ಳೆಯದು. ನೀವೂ ನಿಮ್ಮ ಕೈಲಾದಷ್ಟು ನೆರವನ್ನು ನೀಡುತ್ತೀರಾ? "ವಸುಧೈವ ಕುಟುಂಬಕಮ್" ಎಂಬಂಥ ಭಾರತೀಯ ಸಂಸ್ಕೃತಿಯ ಶ್ರೇಷ್ಠ ಚಿಂತನೆಗಳು ಅರ್ಥಪಡೆದುಕೊಳ್ಳುವುದು ಇಂಥ ಸಂದರ್ಭಗಳಲ್ಲೇ. [ಕೃಪೆ : ಶ್ರೀವತ್ಸ ಜೋಶಿ ಫೇಸ್ ಬುಕ್]
Unicef:
http://fieldnotes.unicefusa.org/2013/11/super-typhoon-haiyan-strikes-philippines.html
Redcross:
http://www.redcross.org/news/article/Typhoon-Haiyan-Disaster-Alert
Care:
http://www.care.org/emergencies/typhoon-haiyan
Worldvision:
http://www.worldvision.org/news-stories-videos/typhoon-haiyan-philippines
Save the children:
http://www.savethechildren.org/site/c.8rKLIXMGIpI4E/b.6115947/k.8D6E/Official_Site.htm
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications