ಫಿಲಿಪ್ಪೀನ್ಸ್ನಲ್ಲಿ ಸಂತ್ರಸ್ತರಿಗೆ ನಾವೆಲ್ಲರೂ ನೆರವಾಗುವಾ
ಭೀಕರ ಟೈಫೂನ್ 'ಹೈಯಾನ್' ಫಿಲಿಪ್ಪೀನ್ಸ್ ಕರಾವಳಿಯನ್ನು ಅಪ್ಪಳಿಸಿ ಅಪಾರ ಹಾನಿ ತಂದೊಡ್ದಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ, ಓದಿದ್ದೇವೆ. ಅಗಲೇ 10,000ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆಂದು ಸುದ್ದಿಯಿದೆ. ಲಕ್ಷಾಂತರ ಜನ ಮನೆಮಠ ಕಳೆದುಕೊಂಡಿದ್ದಾರೆ.
ಈಗಷ್ಟೇ ಟಿವಿಯಲ್ಲಿ ನ್ಯೂಸ್ ನೋಡ್ತಾ ಇದ್ದೆ. ಮಗುವನ್ನು ಕಂಕುಳಲ್ಲಿಟ್ಟುಕೊಂಡ ಒಬ್ಬ ತಾಯಿಯನ್ನು ರಿಪೋರ್ಟರ್ ಪ್ರಶ್ನಿಸುತ್ತಿದ್ದ. ಆಕೆ ತನ್ನ ಆಸ್ತಿಪಾಸ್ತಿಯನ್ನಷ್ಟೇ ಅಲ್ಲ ಕುಟುಂಬದವರನ್ನೆಲ್ಲ ಕಳೆದುಕೊಂಡಿದ್ದಾಳಂತೆ. ಮಾತಾಡುತ್ತಿರುವಾಗಲೇ ಗಳಗಳನೆ ಅತ್ತಳು. ಅಮ್ಮ ಏಕೆ ಅಳುತ್ತಿದ್ದಾಳೆಂದು ಆ ಮಗು ದಿಗಿಲುಗೊಂಡ ದೃಶ್ಯ ನೋಡಿದಾಗಂತೂ ನನಗೆ ತುಂಬಾ ದುಃಖವಾಯಿತು.
ಅಂಥ ಹೃದಯವಿದ್ರಾವಕ ದೃಶ್ಯಗಳು ಅದೆಷ್ಟೋ. ಜತೆಯಲ್ಲೇ, ಪರಿಹಾರ ಸಾಮಗ್ರಿಗಳಿಗಾಗಿ ಪೈಪೋಟಿ, ದಂಗೆ ಲೂಟಿ ಸ್ವೇಚ್ಛಾಚಾರವೂ ನಡೀತಿದೆಯಂತೆ. ಅಲ್ಲಿ ಪರಿಸ್ಥಿತಿ ಕರಾಳ ಇದೆ. ಫಿಲಿಪ್ಫಿನ್ಸ್ ಏನೂ ಶ್ರೀಮಂತ ದೇಶವಲ್ಲ. ಅವರಿಗೀಗ ನೆರವು ಬೇಕು. ಎಲ್ಲಬಗೆಯ ನೆರವೂ ಬೇಕು. ದೂರದೇಶಗಳಲ್ಲಿರುವ ನಾವು ಅಂತಾರಾಷ್ಟ್ರೀಯ ಸಹಾಯಸಂಸ್ಥೆಗಳ ಮೂಲಕ ಹಣ ಸಲ್ಲಿಸಿ ನೆರವಾಗಬಹುದು.

ನಾನು Unicefನ ಈ ಕೆಳಗಿನ ಲಿಂಕ್ನ ಮೂಲಕ ಆಗಲೇ ಒಂದಿಷ್ಟು ಹಣವನ್ನು ಫಿಲಿಪ್ಪೀನ್ಸ್ ಸಂತ್ರಸ್ತರ ನೆರವುನಿಧಿಗೆ ಸಲ್ಲಿಸಿದೆ. ನಾವು ಸಲ್ಲಿಸುವ ನೆರವು ಸದ್ವಿನಿಯೋಗವಾಗಬೇಕಾದರೆ ಇಂಥ ಸಂಸ್ಥೆಗಳ ಮೂಲಕ ಪಾವತಿ ಮಾಡುವುದೇ ಒಳ್ಳೆಯದು. ನೀವೂ ನಿಮ್ಮ ಕೈಲಾದಷ್ಟು ನೆರವನ್ನು ನೀಡುತ್ತೀರಾ? "ವಸುಧೈವ ಕುಟುಂಬಕಮ್" ಎಂಬಂಥ ಭಾರತೀಯ ಸಂಸ್ಕೃತಿಯ ಶ್ರೇಷ್ಠ ಚಿಂತನೆಗಳು ಅರ್ಥಪಡೆದುಕೊಳ್ಳುವುದು ಇಂಥ ಸಂದರ್ಭಗಳಲ್ಲೇ. [ಕೃಪೆ : ಶ್ರೀವತ್ಸ ಜೋಶಿ ಫೇಸ್ ಬುಕ್]
Unicef:
http://fieldnotes.unicefusa.org/2013/11/super-typhoon-haiyan-strikes-philippines.html
Redcross:
http://www.redcross.org/news/article/Typhoon-Haiyan-Disaster-Alert
Care:
http://www.care.org/emergencies/typhoon-haiyan
Worldvision:
http://www.worldvision.org/news-stories-videos/typhoon-haiyan-philippines
Save the children:
http://www.savethechildren.org/site/c.8rKLIXMGIpI4E/b.6115947/k.8D6E/Official_Site.htm
-
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಹೊಸ 800 ಕೆಪಿಎಸ್ ಶಾಲೆ, ಇಂಗ್ಲಿಷ್ ಭಾಷಾ ತರಬೇತಿ: ಕರ್ನಾಟಕ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಘೋಷಣೆ -
Karnataka Budget 2026: 100 ಹೊಸ ಸ್ಕೈವಾಕ್, ಟನಲ್ ರಸ್ತೆ ಸೇರಿ ಕರ್ನಾಟಕ ಬಜೆಟ್ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು? -
Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ -
ರೈತರಿಗೆ ಮಾಲ್, ಮಂಡ್ಯ ಸಾವಯ ಕೃಷಿ: ಅಡಿಕೆ - ತೆಂಗು ಬೆಳಗಾರರಿಗೂ ಬಂಪರ್, ಮೇಕೆದಾಟು ಯೋಜನೆಗೆ ಅಸ್ತು -
Karnataka Budget 2026: ಕರ್ನಾಟಕ ಬಜೆಟ್ 2026: ಬಜೆಟ್ ಗ್ರಾತ ಕಳೆದ ಬಾರಿಗಿಂತ 40 ಸಾವಿರ ಕೋಟಿ ರೂ. ಹೆಚ್ಚಳ -
ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ, ವಿಶೇಷವೇನು -
ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ಅನುಮತಿ ಕೊಟ್ಟ ಅಮೆರಿಕ












Click it and Unblock the Notifications