ಮ್ಯಾಂಚೆಸ್ಟರ್ ನಲ್ಲಿ ಅಪರಿಚಿತ ವ್ಯಕ್ತಿಯಿಂದ ಮೂವರಿಗೆ ಚೂರಿ ಇರಿತ
ಇಂಗ್ಲೆಂಡ್, ಜನವರಿ 01 : ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಮ್ಯಾಂಚೆಸ್ಟರ್ ನ ವಿಕ್ಟೋರಿಯಾ ರೈಲ್ವೆ ನಿಲ್ದಾಣದಲ್ಲಿ ಚಾಕುಧಾರಿ ವ್ಯಕ್ತಿಯೊಬ್ಬ ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರಿಗೆ ಇರಿದಿದ್ದಾನೆ.
ಸ್ಥಳೀಯ ಕಾಲಮಾನ ಸಂಜೆ 8.50ರ ಸುಮಾರಿಗೆ ಈ ಘಟನೆ ನಡೆದಿದ್ದು, ಬ್ರಿಟಿಷ್ ಸಂಚಾರಿ ಪೊಲೀಸ್ ನ ಭುಜದ ಮೇಲೆ ವ್ಯಕ್ತಿಯೊಬ್ಬ ಇರಿದಿದ್ದಾನೆ. ಐವತ್ತು ವರ್ಷ ಆಸುಪಾಸಿನಲ್ಲಿರುವ ದಂಪತಿಗಳು ಕೂಡ ಚಾಕುವಿನಿಂತ ಇರಿತಕ್ಕೊಳಗಾಗಿದ್ದಾರೆ ಎಂದು ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರು ತಿಳಿಸಿದ್ದಾರೆ.
ಇದು ಭಯೋತ್ಪಾದಕ ದಾಳಿ ಇರಬಹುದಾ ಎಂಬ ಬಗ್ಗೆ ತನಿಖೆ ನಡೆಸುತ್ತಿರುವ ಭಯೋತ್ಪಾದಕ ನಿಗ್ರಹ ದಳದ ಪೊಲೀಸರು ಯಾವುದೇ ಸ್ಪಷ್ಟನೆ ನೀಡಿಲ್ಲ. ಸದ್ಯಕ್ಕೆ ರೈಲ್ವೆ ನಿಲ್ದಾಣವನ್ನು ಮುಚ್ಚಲಾಗಿದ್ದು, ಪೊಲೀಸರು ದಾಳಿಯ ಹಿಂದಿನ ಕಾರಣದ ಪತ್ತೆಯಲ್ಲಿ ತೊಡಗಿದ್ದಾರೆ.

ಈ ದಾಳಿಯನ್ನು ತನಿಖಾ ದಳದವರು ಅತ್ಯಂತರ ಗಂಭೀರ ಪ್ರಕರಣ ಎಂದು ಬಣ್ಣಿಸಿದ್ದು, ಇಂಥ ದಾಳಿಯ ಬಗ್ಗೆ ಗುಪ್ತದಳದಿಂದ ಯಾವುದೇ ಮುನ್ಸೂಚನೆ ಬಂದಿರಲಿಲ್ಲ ಎಂದಿದ್ದಾರೆ. ದಾಳಿಗೊಳಗಾಗಿರುವವರಿಗೆ ಗಂಭೀರವಾದ ಗಾಯಗಳಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಹಿಳೆಗೆ ಕೈಗೆ ಮತ್ತು ಹೊಟ್ಟೆಗೆ ಗಾಯವಾಗಿದ್ದರೆ, ಆಕೆಯ ಗಂಡನಿಗೆ ಹೊಟ್ಟೆಯ ಬಳಿ ಆಳವಾದ ಗಾಯವಾಗಿದೆ.
ನನ್ನಿಂದ ಕೆಲವೇ ಹೆಜ್ಜೆ ದೂರದಲ್ಲಿದ್ದ ವ್ಯಕ್ತಿಯೊಬ್ಬ ಸ್ಟೇಷನ್ ನ ಟ್ರಾಮ್ ಪ್ಲಾಟ್ ಫಾರಂನಲ್ಲಿ ಚಾಕುವಿನಿಂದ ಇರಿಯುತ್ತಿದ್ದುದನ್ನು ನೋಡಿದೆ. ದಾಳಿಕೋರನ ಬಳಿ ದೊಡ್ಡ ಚಾಕು ಇದ್ದಿದ್ದರಿಂದ ನಾನು ಪ್ಲಾಟ್ ಫಾರಂ ಜಂಪ್ ಮಾಡುವವನಿದ್ದೆ ಎಂದು ಆಗ ಅದೇ ಸ್ಥಳದಲ್ಲಿದ್ದ ಬಿಬಿಸಿ 5 ಲೈವ್ ನಿರ್ಮಾಪಕ ಸ್ಯಾಮ್ ಕ್ಲಾರ್ಕ್ ಎಂಬುವವರು ಘಟನೆಯನ್ನು ವಿವರಿಸಿದ್ದಾರೆ.
ಮೊದಲಿಗೆ ಇಬ್ಬರು ಪುರುಷರ ನಡುವೆ ಜಗಳ ನಡೆದಿರಬಹುದು ಎಂದು ಅಂದುಕೊಂಡಿದ್ದೆ. ಆದರೆ, ಅವರ ಪಕ್ಕದಲ್ಲಿದ್ದ ಮಹಿಳೆ ಕೂಡ ರಕ್ತಸಿಕ್ತರಾಗಿ ಚೀರಿಕೊಳ್ಳಲು ಆರಂಭಿಸಿದರು. ಚೀರಾಟ ಕೇಳಿ ಪೊಲೀಸರೊಬ್ಬರು ಓಡಿಬರುತ್ತಿದ್ದಂತೆ ಚಾಕು ಹಿಡಿದಿದ್ದವ ನನ್ನ ಬಳಿ ಬರಲು ಆರಂಭಿಸಿದ. ನಾನು ಅತ್ಯಂತ ಭಯಭೀತನಾಗಿದ್ದೆ. ಆತನ ಬಳಿ 12 ಇಂಚ್ ನ ಅಡುಗೆಮನೆಯಲ್ಲಿ ಬಳಸುವ ಚಾಕು ಇತ್ತು ಎಂದಿದ್ದಾರೆ ಕ್ಲಾರ್ಕ್.
ಆರೇಳು ಪೊಲೀಸರು ಆತನ ಮೇಲೆ ಮುಗಿಬಿದ್ದು, ಪೆಪ್ಪರ್ ಸ್ಪ್ರೇ ಸಿಂಪಡಿಸಿ ಆತನನ್ನು ಬಂಧಿಸಿದ್ದಾರೆ. ಆತ ತುಂಬಾ ಉಗ್ರನಾಗಿದ್ದ, ಕೂಡಲೆ ಬಂಧಿಸಿರದಿದ್ದರೆ ಇನ್ನೂ ಹೆಚ್ಚಿನ ಹಾನಿ ಮಾಡುವ ಸಾಧ್ಯತೆ ಇತ್ತು ಎಂದು ಕ್ಲಾರ್ಕ್ ವಿವರಿಸಿದ್ದಾರೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications