ಒಂದು ಕಾಫಿ, ಒಂದು ಟೀ ಗೆ 78,650 ಬಿಲ್ ನೀಡಿದ ಹೋಟೆಲ್!
ಬಾಲಿ, ಸೆಪ್ಟೆಂಬರ್ 04: ಕೆಲವು ದಿನಗಳ ಹಿಂದಷ್ಟೆ ಚಂಡೀಘಡದ ಐಶಾರಾಮಿ ಹೊಟೆಲ್ ಒಂದು ಎರಡು ಬಾಳೆಹಣ್ಣಿಗೆ 442 ರೂಪಾಯಿ ಬಿಲ್ ಹಾಕಿತ್ತು. ಮುಂಬೈನ ಹೊಟೆಲ್ ಒಂದು ಎರಡು ಬೇಯಿಸಿದ ಮೊಟ್ಟೆಗೆ 1700 ರೂಪಾಯಿ ಬಿಲ್ ಹಾಕಿದ್ದರು.
ಆದರೆ ಈಗ ಒಂದು ಕಾಫಿ ಮತ್ತು ಟೀ ಗೆ 78,650 ಬಿಲ್ ಹಾಕಿದ್ದಾರೆ. ಆದರೆ ಈ ಬಾರಿ ಬಿಲ್ ಪಾವತಿಸಿರುವ ಸೆಲೆಬ್ರಿಟಿಯು ಈ ಬಗ್ಗೆ ತಾವು ದೂರು ನೀಡುವುದಿಲ್ಲ ಎಂದು ಹೇಳಿದ್ದಾರೆ.
ಹೌದು, ಕಾಮಿಡಿಯನ್ ಕಿಕು ಶಾರ್ದಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ಒಂದು ಕಾಫಿ ಮತ್ತು ಒಂದು ಟೀಗೆ ಬರೋಬ್ಬರಿ 78,650 ಬಿಲ್ ಹಾಕಿದ್ದಾರೆ. ಆದರೆ ಈ ಬಗ್ಗೆ ನಾನು ದೂರು ನೀಡುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಬಿಲ್ನ ಚಿತ್ರವನ್ನೂ ಹಾಕಿದ್ದಾರೆ.

ನಿಜ ಸಂಗತಿ ಏನೆಂದರೆ, ಕಿಕು ಶಾರ್ದಾ ಹಾಕಿರುವ ಬಿಲ್ ಇಂಡೊನೇಷ್ಯಾದ ಬಾಲಿಯ ಹೊಟೆಲ್ ಒಂದರದ್ದು. ಅಲ್ಲಿನ ಹೊಟೆಲ್ನಲ್ಲಿ ಅವರಿಗೆ ಒಂದು ಕೆಫೆಚೀನೊ ಕಾಫಿಗೆ 35,000 ಬಿಲ್ ಹಾಕಿದ್ದರೆ, ಒಂದು ಬಿಸಿ ಚಹಕ್ಕೆ 30,000 ಬಿಲ್ ಹಾಕಿದ್ದಾರೆ. ಸೇವಾ ತೆರಿಗೆ 13,650 ಹಾಕಿದ್ದಾರೆ.
ವಿಷಯವೆಂದರೆ ಅಷ್ಟು ದೊಡ್ಡ ಬಿಲ್ ಪಾವತಿಸಿದರೂ ತಾವು ದೂರು ನೀಡುವುದಿಲ್ಲವೆಂದು ಕಿಕು ಶಾರ್ದಾ ಹೇಳಿರುವುದಕ್ಕೆ ಕಾರಣ, ಇಂಡೋನೇಷ್ಯಾದ 78,650 ರುಪಯ್ಯಾ ಭಾರತದ 400 ರೂಪಾಯಿಗಳಿಗೆ ಸಮ. ಹಾಗಾಗಿ ಕಿಕು ಶಾರ್ದಾ ಆರಾಮವಾಗಿ ಬಿಲ್ ಕೊಟ್ಟು ಬಂದಿದ್ದಾರೆ.
My bill for 1 cappuccino and 1 tea is 78,650/- ,,,,,,, but I am not complaining 😜 as I am in Bali , Indonesia and this amount in their currency converts to ₹ 400/- in Indian currency #mehengaayee pic.twitter.com/rB6U6YgVnN
— kiku sharda (@kikusharda) September 3, 2019
ಇಂಡೊನೇಷ್ಯಾದಲ್ಲಿ ರುಪಯಾ ಎಂಬ ಹಣ ಚಾಲ್ತಿಯಲ್ಲಿದೆ. ಇದು ಭಾರತದ ರೂಪಾಯಿಗಿಂತಲೂ ಬಹಳ ಕಡಿಮೆ ಮೌಲ್ಯದ್ದಾಗಿದೆ. ಹಾಗಾಗಿಯೇ 78,650 ಬಿಲ್ ಆಗಿದ್ದರೂ ಸಹ ಅದನ್ನು ಭಾರತದ ರೂಪಾಯಿಯಲ್ಲಿ ಬದಲಾಯಿಸಿದರೆ ಕೇವಲ 400 ರೂಪಾಯಿ ಮಾತ್ರವೇ ಆಗುತ್ತದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications