Plane Crash: 179 ಜನರ ಸಾವಿಗೆ ಕಾರಣ ಏನು? ವಿಮಾನ ನಿಲ್ದಾಣದಲ್ಲಿ ತನಿಖೆ ಚುರುಕು!
ದಕ್ಷಿಣ ಕೊರಿಯಾದಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತ ಇಡೀ ಜಗತ್ತು ಬೆಚ್ಚಿ ಬೀಳುವ ರೀತಿ ಮಾಡಿತ್ತು. ಯಾಕಂದ್ರೆ ಈ ದುರಂತದಲ್ಲಿ ಜೀವ ಬಿಟ್ಟವರು ಒಬ್ಬರಲ್ಲ, ಇಬ್ಬರಲ್ಲ. ಈ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ 181 ಜನರಲ್ಲಿ ಬರೋಬ್ಬರಿ 179 ಜನರ ಪ್ರಾಣ ಪಕ್ಷಿ ಹಾರಿ ಹೋಗಿದೆ. ಇದೇ ಕಾರಣಕ್ಕೆ ಈ ಘಟನೆಯನ್ನು ತುಂಬಾ ಗಂಭೀರವಾಗಿ ಪರಿಗಣಿಸಿರುವ ದಕ್ಷಿಣ ಕೊರಿಯಾ ಸರ್ಕಾರ, ಕಠಿಣ ತನಿಖೆಗೆ ಮುಂದಾಗಿದೆ.
ಹೌದು ಲ್ಯಾಂಡಿಂಗ್ ಮಾಡುವ ಸಮಯದಲ್ಲಿ ರನ್ವೇ ಮೂಲಕ ಜಾರಿದ್ದ ದಕ್ಷಿಣ ಕೊರಿಯಾದ ವಿಮಾನ ನೇರ ರನ್ವೇ ಪಕ್ಕಕ್ಕೆ ಹೋಗಿ ಕ್ರಾಶ್ ಲ್ಯಾಂಡ್ ಆಗಿತ್ತು. 'ಜೆಜು ಏರ್ ಫ್ಲೈಟ್ 2216' ವಿಮಾನ ಥೈಲ್ಯಾಂಡ್ ಮೂಲಕ ದಕ್ಷಿಣ ಕೊರಿಯಾಗೆ ಬರುತ್ತಿತ್ತು.

ಆದರೆ ದಕ್ಷಿಣ ಕೊರಿಯಾದ ರಾಜಧಾನಿ ಸೋಲ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ಸಮಯದಲ್ಲೇ ಈ ರೀತಿ ಭೀಕರ ಘಟನೆ ಸಂಭವಿಸಿತ್ತು. ಅಲ್ಲದೆ 181 ಜನರಲ್ಲಿ ಬರೋಬ್ಬರಿ 179 ಜನರು ಜೀವ ಬಿಟ್ಟ ವಿಚಾರ ತಲ್ಲಣ ಎಬ್ಬಿಸಿದೆ. ಹೀಗಾಗಿ ಭೀಕರ ಅಪಘಾತ ಸಂಭವಿಸಿದ್ದ ಮುವಾನ್ ಏರ್ಪೋರ್ಟ್ ಪೂರ್ತಿ ತಪಾಸಣೆ ನಡೆಸಿ ತನಿಖೆ ಮಾಡಲಾಗುತ್ತಿದೆ.
ಒಂದೇ ವಾರದಲ್ಲಿ 2 ಭೀಕರ ಘಟನೆ
ಕೇವಲ ಒಂದೇ ವಾರದ ಅಂತರದಲ್ಲಿ 2 ರಣಭೀಕರ ವಿಮಾನ ದುರಂತ ಸಂಭವಿಸಿ ಆತಂಕ ಸೃಷ್ಟಿಯಾಗಿದೆ. ಇತ್ತೀಚೆಗೆ ಭೀಕರ ವಿಮಾನ ದುರಂತ ನೋಡಿ ನೊಂದಿದ್ದ ಜಗತ್ತಿಗೆ ಮತ್ತೊಂದು ಸ್ಫೋಟಕ ಸುದ್ದಿಯು ಸಿಕ್ಕಿತ್ತು. ದಕ್ಷಿಣ ಕೊರಿಯಾ ದೇಶದಲ್ಲಿ ಭೀಕರ ವಿಮಾನ ದುರಂತ ಸಂಭವಿಸಿ ಒಟ್ಟಾರೆ 181 ಜನ ಇದ್ದ ವಿಮಾನ ಕ್ರಾಶ್ ಲ್ಯಾಂಡಿಂಗ್ ಆಗಿತ್ತು. ಕೆಲವು ದಿನಗಳ ಹಿಂದೆ ಕಝಕಿಸ್ತಾನ್ ದೇಶದಲ್ಲಿ ವಿಮಾನ ದುರಂತ ಸಂಭವಿಸಿ, 38 ಜನ ಬಲಿಯಾಗಿದ್ದರು. ಆ ನಂತರ ದಕ್ಷಿಣ ಕೊರಿಯಾದ ದುರ್ಘಟನೆ 179 ಜನರನ್ನು ಬಲಿಪಡೆದಿತ್ತು. ಹೀಗಾಗಿ ಈ ಘಟನೆ ಕುರಿತು ಗಂಭೀರ ತನಿಖೆ ಇದೀಗ ಆರಂಭವಾಗಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications