ಏರ್ಏಷಿಯಾ ನಾಪತ್ತೆಯಾದಲ್ಲಿ ತೇಲುತ್ತಿವೆ ಶವಗಳು
ಇಂಡೋನೇಷಿಯಾ, ಡಿ. 30: ಏರ್ಏಷಿಯಾ ವಿಮಾನ ನಾಪತ್ತೆಯಾದ ಸ್ಥಳದ ಕೆಳಗಿನ ಸಮುದ್ರ ಪ್ರದೇಶದಲ್ಲಿ ಹಲವು ಶವಗಳು ತೇಲುತ್ತಿರುವುದು ಕಂಡುಬಂದಿದೆ ಎಂದು ವಿಮಾನಕ್ಕಾಗಿ ಹುಡುಕುತ್ತಿರುವ ಇಂಡೋನೇಷಿಯಾ ನೌಕಾದಳ ಹೇಳಿದೆ.
ಸಮುದ್ರದಲ್ಲಿ ತೇಲುತ್ತಿರುವ ಊದಿಕೊಂಡಿರುವ ಶವವೊಂದನ್ನು ಸ್ಥಳೀಯ ಟಿವಿ ಚಾನಲ್ನಲ್ಲಿ ತೋರಿಸಲಾಗಿದೆ. ಈ ಶವವನ್ನು ಇಂಡೋನೇಷಿಯಾದ ನೌಕಾದಳದ ಹಡಗಿಗೆ ತರಲಾಗಿದೆ. ಈ ಶವದ ಮೇಲೆ ಲೈಫ್ ಜಾಕೆಟ್ ಕೂಡ ಇರಲಿಲ್ಲ ಎಂದು ನ್ಯಾಶನಲ್ ಸರ್ಚ್ ಆ್ಯಂಡ್ ರೆಸ್ಕ್ಯೂ ನಿರ್ದೇಶಕ ಎಸ್.ಬಿ. ಸುಪ್ರಿಯದಿ ಹೇಳಿದ್ದಾರೆ. [ಏರ್ ಏಷಿಯಾ ವಿಮಾನ ಜಾವಾ ಸಮುದ್ರದಲ್ಲಿ ಪತನ?]
ನೌಕಾದಳದ ವಕ್ತಾರ ಮನಹನ್ ಈ ವರದಿಯನ್ನು ದೃಢಪಡಿಸಿದ್ದಾರೆ. ಅನೇಕ ದೇಹಗಳು ಸಮುದ್ರದಲ್ಲಿ ತೇಲುತ್ತಿರುವುದು ಕಂಡುಬಂದಿವೆ ಎಂದು ತಿಳಿಸಿದ್ದಾರೆ.

ವಸ್ತುಗಳೂ ತೇಲುತ್ತಿವೆ: ಕೇಂದ್ರ ಕಲಿಮಂತನ್ ಪ್ರದೇಶದ ಪಾಂಗ್ಕಲನ್ ಬನ್ ದ್ವೀಪದಿಂದ 190 ಕಿ.ಮೀ. ದೂರದಲ್ಲಿ ಹಲವು ವಸ್ತುಗಳು ಪತ್ತೆಯಾಗಿವೆ ಎಂದು ಇಂಡೋನೇಷಿಯಾ ನೌಕಾದಳ ಖಚಿತಪಡಿಸಿದೆ. [ಪಪ್ಪಾ ದಯವಿಟ್ಟು ಮನೆಗೆ ಬಾ : ಮಗಳ ಆರ್ತನಾದ]
ಪತ್ತೆಯಾದ ವಸ್ತುಗಳು ಅತ್ಯಂತ ಚಿಕ್ಕದಾಗಿದ್ದು ಕಿತ್ತಳೆ, ಬಿಳಿ, ಕಂದು ಹಾಗೂ ಕಪ್ಪು ಬಣ್ಣದಲ್ಲಿವೆ. ಈ ಕುರಿತು ಹೆಚ್ಚಿನ ವಿವರ ಸಂಗ್ರಹಿಸಲು ತಂಡವೊಂದನ್ನು ಕಳುಹಿಸಲಾಗಿದೆ ಎಂದು ನೌಕಾ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಟ್ವೀಟ್ಗಳಲ್ಲಿ ಸಮುದ್ರದಲ್ಲಿ ತೇಲುತ್ತಿದೆ ಎನ್ನಲಾದ ವಸ್ತುಗಳ ಛಾಯಾಚಿತ್ರಗಳು ಹರಿದಾಡುತ್ತಿವೆ.
#QZ8501: Objects seen in sea resembling life raft, life jackets http://t.co/aLZfxf5b30 #AIRASIA pic.twitter.com/nFgiSUd5YY
— RT (@RT_com) December 30, 2014 ಸೋಮವಾರ ದ್ವೀಪವೊಂದರಲ್ಲಿ ಹೊಗೆ ಪತ್ತೆಯಾಗಿತ್ತು. ಆದ್ದರಿಂದ ಕಲಿಮಂತನ್ ದ್ವೀಪದ ಸುತ್ತಲಿನ ಸಮುದ್ರದ ಜೊತೆಗೆ ಇತರ ದ್ವೀಪಗಳಲ್ಲಿಯೂ ವಿಮಾನದ ಅವಶೇಷಗಳಿಗಾಗಿ ಹುಡುಕಾಟ ಆರಂಭವಾಗಿದೆ. [162 ಪ್ರಯಾಣಿಕರಿದ್ದ ಏರ್ ಏಷ್ಯಾ ವಿಮಾನ ನಾಪತ್ತೆ]
ಇಂಡೋನೇಷಿಯಾ ಜೊತೆಗೆ ಸಿಂಗಪುರ, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಮಲೇಷಿಯಾ ದೇಶಗಳೂ ಹುಡುಕಾಟದಲ್ಲಿ ಕೈಜೋಡಿಸಿವೆ.

ಇಂಡೋನೇಷಿಯಾದಿಂದ ಸಿಂಗಪುರಕ್ಕೆ ತೆರಳುತ್ತಿದ್ದ ಏರ್ಏಷ್ಯಾ ವಿಮಾನ ಪೂರ್ವ ಜಾವಾ ಪ್ರಾಂತ್ಯದಲ್ಲಿ ರಾಡಾರ್ ಸಂಪರ್ಕ ಕಡಿದುಕೊಂಡಿತ್ತು. ಇದರಲ್ಲಿ 162 ಪ್ರಯಾಣಿಕರಿದ್ದರು.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ












Click it and Unblock the Notifications