ಅವಳಲ್ಲ..ಅವನು..: ಮದುವೆಯಾದ ಬಳಿಕ ಗುಟ್ಟು ರಟ್ಟು, ವರ ಫುಲ್ ಶಾಕ್
ಮದುವೆ ಎಂದರೆ ನೂರಾರು ಕನಸುಗಳ ಸಮ್ಮಿಲನ. ಪ್ರತಿಯೊಬ್ಬರಿಗೂ ತಮ್ಮ ಮದುವೆಯ ಬಗ್ಗೆ ಹತ್ತಾರು ಕನಸುಗಳಿರುತ್ತದೆ. ಅದರಲ್ಲೂ ಪ್ರೀತಿಸಿ ಮದುವೆಯಾಗುವರಿಗಂತೂ ತಮ್ಮ ಕಾಲು ಭೂಮಿ ಮೇಲೆ ನಿಲ್ಲದ ಅನುಭವ ಖುಷಿಯಲ್ಲಿ ತೇಲಾಡುತ್ತಿರುತ್ತಾರೆ. ಇಂತಹದ್ದೇ ಖುಷಿಯಲ್ಲಿದ್ದ, ಪ್ರೀತಿಸಿದ ಹುಡುಗಿಯನ್ನೇ ಕೈ ಹಿಡಿದು ಆಕೆಯೊಂದಿಗೆ ಸುಂದರ ಸಂಸಾರ ನಡೆಸಬೇಕು ಎಂದುಕೊಂಡಿದ್ದ ವ್ಯಕ್ತಿಯೊಬ್ಬನ ಖುಷಿ ಮದುವೆಯಾದ 12 ದಿನಕ್ಕೆ ಮಾಯಾವಾಗಿದೆ.
ನನ್ನ ಹುಡುಗಿ ಸುಂದರವಾಗಿದ್ದಾಳೆ..ಕೊನೆಗೂ ಆಕೆಯೊಂದಿಗೆ ಮದುವೆಯಾದೆ..ಇನ್ನು ಸುಖ ಸಂಸಾರ ಎಂದು ಕನಸು ಕಂಡಿದ್ದ ಯುವಕನ ಬಾಳು ನರಕವಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ದುರಂತವೆಂದರೆ ಆತ ಅಷ್ಟು ಕನಸು ಕಂಡು ಮದುವೆಯಾಗಿದ್ದು ಹುಡುಗಿಯನ್ನಲ್ಲ..ಬದಲಿಗೆ ಹುಡುಗಿಯಂತೆ ನಟಿಸುತ್ತಿದ್ದ ಹುಡುಗನನ್ನು.

ಇಂಡೋನೇಷಿಯಾದ ವ್ಯಕ್ತಿಯೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಹುಡುಗಿ ಒಬ್ಬಳನ್ನು ನೋಡಿ ಮೆಚ್ಚಿಕೊಂಡು ಮೆಸೇಜ್ ಮಾಡಿದ್ದಾನೆ. ಆಕೆಯಿಂದಲೂ ಉತ್ತರ ಬಂದಿದ್ದು, ಮೊದಲು ಸ್ನೇಹ, ಸಲುಗೆ ಆಮೇಲೆ ಪ್ರೀತಿ ಆರಂಭವಾಗಿದೆ. ಇಬ್ಬರು ಕೆಲವು ದಿನಗಳ ಕಾಲ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಡೇಟಿಂಗ್ ಮಾಡಿದ ನಂತರ ಭೇಟಿಯಾಗಿದ್ದಾರೆ.
ಭೇಟಿಯಾದಾಗ ಆಕೆ ತಲೆ ಹಾಗೂ ಮುಖವನ್ನು ಬಟ್ಟೆಯಿಂದ ಮುಚ್ಚಿದ್ದು, ಕಣ್ಣುಗಳಷ್ಟೇ ಶುಭ್ರವಾಗಿ ಹೊಳೆಯುತ್ತಿದ್ದವು. ಆಕೆಯ ಕಣ್ಣುಗಳನ್ನು ನೋಡಿ ಮನಸೋತ ವ್ಯಕ್ತಿ ಇನ್ನಷ್ಟು ಪ್ರೀತಿಸಿದ್ದಾನೆ. ಬಳಿಕ ಪರಸ್ಪರ ಮನೆಯಲ್ಲಿ ಒಪ್ಪಿಸಿ ಅದ್ಧೂರಿಯಾಗಿ ಮದುವೆಯಾಗಿದ್ದಾನೆ. ಆದರೆ ಮದುವೆಯಾಗಿ ಮನೆಗೆ ಕರೆದುಕೊಂಡು ಬಂದಾಗ ಎಲ್ಲ ಸತ್ಯ ಬಯಲಾಗಿದ್ದು, ವರ ಫುಲ್ ಶಾಕ್ ಆಗಿದ್ದಾನೆ. ಲಕ್ಷಾಂತರ ರೂಪಾಯಿ ವ್ಯಹಿಸಿ ಮದುವೆಯಾಗಿ ಬಂದ ಯುವಕ ಈ ಅವಾಂತರದಿಂದ ಬೆಚ್ಚಿಬಿದ್ದಿದ್ದಾನೆ.
ಮೋಸಗಾತಿ(ರ) ಸಿಕ್ಕಿ ಬಿದ್ದಿದ್ದೇಗೆ..?
ಮೋಸ ಹೋದ ಯುವಕನನ್ನು ಭೇಟಿ ಮಾಡುವ ಸಂದರ್ಭದಲ್ಲಿ ಹಿಜಾಬ್ ಹಾಕಿಕೊಂಡೇ ಇರುತ್ತಿದ್ದಳು. ಆತನಿಗೆ ಆಕೆಯ ಬಗ್ಗೆ ಒಂದು ಚೂರು ಅನುಮಾನ ಬರದಂತೆ ನಡೆದುಕೊಂಡಿದ್ದಳು. ಆದರೆ ಮದುವೆಯಾದ ನಂತರವೂ ಮನೆಯವರ ಮುಂದೆಯೂ ಆಕೆ ಹಿಜಾಬ್ ತೆಗೆದಿರಲಿಲ್ಲ. ಆದರೆ ಮದುವೆಯಾಗಿ 12 ದಿನವಾದರೂ ಇದೆ ರೀತಿ ಹಿಜಾಬ್ ತೆಗೆಯದೇ ಇರುವುದನ್ನು ಕಂಡು ಅನುಮಾನ ಬಂದಿದೆ. ಬಳಿಕ ಪಟ್ಟು ಹಿಡಿದು ತನಿಖೆ ಮಾಡಿದಾಗ ಸತ್ಯಾಂಶ ಹೊರ ಬಿದ್ದಿದ್ದು, ಹುಡುಗಿ ಅಲ್ಲ..ಹುಡುಗ ಎನ್ನುವುದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications