2070 ಇಂಗಾಲ ಮುಕ್ತ ಭಾರತ ಘೋಷಣೆ ಸ್ವಾಗತಿಸಿದ ಐಎಂಎಫ್
ಮಾಲಿನ್ಯ ತಗ್ಗಿಸಲು ಭಾರತ ಮಾಡಿದ್ದ 2070 ಇಂಗಾಲ ಮುಕ್ತ ಭಾರತ ಘೋಷಣೆಯನ್ನು ಅಂತರಾಷ್ಟ್ರೀಯ ನಿಧಿ (ಐಎಂಎಫ್) ಸ್ವಾಗತಿಸಿದೆ.
ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಭಾರತ ಕೈಗೊಳ್ಳುವ ಕ್ರಮಗಳು ಜಾಗತಿಕ ಮಟ್ಟದಲ್ಲಿ ಮಾಲಿನ್ಯ ನಿಯಂತ್ರಣ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ಐಎಂಎಫ್ ಅಧಿಕಾರಿ ಗೆರ್ರಿ ರೈಸ್ ಅಭಿಪ್ರಾಯಪಟ್ಟಿದ್ದಾರೆ.
ಪುನರ್ಬಳಕೆ ಇಂಧನ ಉಪಯೋಗ ಮತ್ತು ಕಾರ್ಬನ್ ಹೊರಸೂಸುವಿಕೆ ಪ್ರಮಾಣವನ್ನು 2070ರ ವೇಳೆಗೆ ಸಂಪೂರ್ಣವಾಗಿ ತಗ್ಗಿಸುವುದಾಗಿ ನರೇಂದ್ರ ಮೋದಿ ಘೋಷಿಸಿದ್ದರು.

ಈಗಾಗಲೇ ಜಾಗತಿಕ ಹವಾಮಾನ ಬದಲಾವನೆ ವಿಷಯವಾಗಿ ಜಗತ್ತಿನ ಹಲವು ರಾಷ್ಟ್ರಗಳು ಕಳವಳ ವ್ಯಕ್ತ ಪಡಿಸಿವೆ. ಮಾಲಿನ್ಯ ನಿಯಂತ್ರಣ ಸಾಧ್ಯವಾಗದೇ ಹೋದಲ್ಲಿ ದೇಶಗಳು ಹವಾಮಾನ ವೈಪರೀತ್ಯದ ಪ್ರತಿಕೂಲ ಪರಿಣಾಮಗಳನ್ನು ಎದುರಿಸಬೇಕಾಗಿ ಬರುವುದು. ಆ ನಿಟ್ಟಿನಲ್ಲಿ ಜಾಗತಿಕ ತಾಪಮಾನದಲ್ಲಿ 2 ಡಿಗ್ರಿ ತಗ್ಗಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಭೆಗಳು ನಡೆದಿವೆ.
2070ರ ವೇಳೆಗೆ ಭಾರತವು ಇಂಗಾಲದ ಹೊರಸೂಸುವಿಕೆಯಲ್ಲಿ ಸಂಪೂರ್ಣ ಶೂನ್ಯವಾಗಲು ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಹತ್ವದ ಘೋಷಣೆ ಮಾಡಿದ್ದಾರೆ.
ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆಯಲ್ಲಿ (ಸಿಒಪಿ26) ಅವರು ಈ ಹೇಳಿಕೆ ನೀಡಿದ್ದು, ಸಂಪನ್ಮೂಲಗಳ ಪ್ರಜ್ಞಾಪೂರ್ವಕ ಬಳಕೆಯನ್ನು ಅಳವಡಿಸಿಕೊಳ್ಳುವುದು ಹಾಗೂ ಮತಿಹೀನ ಬಳಕೆಯನ್ನು ತೊಡೆದುಹಾಕುವ- 'ವಿಶ್ವ ಜೀವನ' ಎಂಬ ಜಾಗತಿಕ ಚಳವಳಿಯನ್ನು 'ಜೀವನ ವಿಧಾನ ಬದಲಾವಣೆ'ಯನ್ನಾಗಿ ಮಾಡಿಕೊಳ್ಳಬೇಕು ಎಂದು ಜಾಗತಿಕ ನಾಯಕರಿಗೆ ಅವರು ಮನವಿ ಮಾಡಿದ್ದಾರೆ.
2020ರ ವೇಳೆಗೆ ಪ್ರತಿ ವರ್ಷ 100 ಬಿಲಿಯನ್ ಅಮೆರಿಕನ್ ಡಾಲರ್ ಹವಾಮಾನ ಹಣಕಾಸು ಸಂಗ್ರಹಿಸುವ ಭರವಸೆಯನ್ನು ಈಡೇರಿಸದ ಅಭಿವೃದ್ಧಿ ಹೊಂದಿದ ದೇಶಗಳ ವಿರುದ್ಧ ಹರಿಹಾಯ್ದ ಪ್ರಧಾನಿ ಮೋದಿ, ಅಭಿವೃದ್ಧಿಶೀಲ ದೇಶಗಳಿಗೆ ನೆರವಾಗಲು 1 ಟ್ರಿಲಿಯನ್ ಡಾಲರ್ ಸಂಗ್ರಹಿಸಬೇಕು ಎಂದು ಅವರ ಜವಾಬ್ದಾರಿಗಳನ್ನು ನೆನಪಿಸಿದರು.
ಹವಾಮಾನ ನಿಧಿಯ ಹಳೆಯ ಉದ್ದೇಶಗಳನ್ನು ಇಟ್ಟುಕೊಂಡು ಹೊಸ ಗುರಿಗಳನ್ನು ಸಾಧಿಸಲು ಜಗತ್ತಿಗೆ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಇತರೆ ವಲಯವಾರು ಗುರಿಗಳಿಗೆ ಸ್ಪಷ್ಟ ಕಾಲಾನುಕ್ರಮ ನಿಗದಿಪಡಿಸುವ ಮೂಲಕ 'ಸಂಪೂರ್ಣ ಶೂನ್ಯ' ಸಾಧಿಸಲು ಹವಾಮಾನ ಕ್ರಿಯೆಗಳಿಗೆ ನಾಲ್ಕು ಇತರೆ ಹೆಜ್ಜೆಗಳನ್ನು ದೇಶ ಹೇಗೆ ಅನುಸರಿಸಲಿದೆ ಎಂದು ಮೋದಿ ವಿವರಿಸಿದ್ದಾರೆ. ಅಮೆರಿಕ, ಬ್ರಿಟನ್ ಹಾಗೂ ಯುರೋಪಿಯನ್ ದೇಶಗಳು ಸೇರಿದಂತೆ ಹಲವು ರಾಷ್ಟ್ರಗಳು ಭಾರತವನ್ನು 2050ರ ವೇಳೆಗೆ ಇಂಗಾಲದ ವಿಚಾರದಲ್ಲಿ 'ಸಂಪೂರ್ಣ ಶೂನ್ಯ' ಸಾಧನೆಗೆ ತರಬೇಕೆಂದು ಉದ್ದೇಶಿಸಿವೆ.
ಆದರೆ ಭಾರತ ಈ ಗುರಿಯನ್ನು 2070ರಲ್ಲಿ ಸಾಧಿಸುವುದಾಗಿ ಹೇಳಿರುವುದು ಈ ದೇಶಗಳಿಗೆ ಅಚ್ಚರಿ ಮೂಡಿಸಿದೆ. ಜಗತ್ತಿನ ಅತಿ ಮಾಲಿನ್ಯಕಾರಕ ದೇಶ ಎಂದೆನಿಸಿರುವ ಚೀನಾ, 2060ರ ವೇಳೆಗೆ ಈ ಗುರಿ ಸಾಧನೆಯ ಭರವಸೆ ನೀಡಿದೆ. ಅದಕ್ಕಿಂತಲೂ ಹತ್ತು ವರ್ಷ ತಡವಾಗಿ ಈ ಗುರಿ ಸಾಧಿಸುವುದಾಗಿ ಭಾರತ ಹೇಳಿಕೊಂಡಿದೆ.
ತನ್ನ ಇಂಧನ ಅಗತ್ಯಗಳಲ್ಲಿ ಶೇ 50ರಷ್ಟನ್ನು 2030ರ ವೇಳೆಗೆ ನವೀಕರಿಸಬಹುದಾದ ಸಂಪನ್ಮೂಲಗಳಿಂದಲೇ ಪಡೆಯುವುದು, ಮುಂದಿನ ಒಂಬತ್ತು ವರ್ಷಗಳಲ್ಲಿ ಹಸಿರುಮನೆ ಅನಿಲಕ್ಕೆ (ಜಿಎಚ್ಜಿ) ಸಮಪ್ರಮಾಣದಲ್ಲಿ ಒಂದು ಬಿಲಿಯನ್ ಟನ್ನಷ್ಟು ಇಂಗಾಲವನ್ನು ತಗ್ಗಿಸಲಾಗುವುದು, 2030ರ ವೇಳೆಗೆ 2005ರಲ್ಲಿ ಇದ್ದ ಮಟ್ಟಕ್ಕೆ ಶೇ 45ರಷ್ಟು ಇಂಗಾದಲ ಸಾಂದ್ರತೆಯನ್ನು (ಜಿಡಿಪಿಯ ಪ್ರತಿ ಘಟಕಕ್ಕೆ ಇಂಗಾಲದ ವಿಸರ್ಜನೆ) ಕಡಿಮೆ ಮಾಡುವುದು ಮತ್ತು 2030ರ ವೇಳೆಗೆ ನವೀಕರಿಸಬಹುದಾದ ಇಂಧನಗಳ ಪ್ರಮಾಣವನ್ನು 450 ಗಿಗಾ ವ್ಯಾಟ್ನಿಂದ 500 ಗಿಗಾ ವ್ಯಾಟ್ಗೆ ಹೆಚ್ಚಿಸುವುದು ಭಾರತದ ಇತರೆ ಗುರಿಗಳಾಗಿವೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications