Heart Attacks: ಸೋಮವಾರದಂದು ಹೃದಯಾಘಾತದ ಅಪಾಯ ಹೆಚ್ಚು- ಹೊಸ ಅಧ್ಯಯನ
ಹೃದಯಾಘಾತ ಸಂಭವಿಸಲು ವಯಸ್ಸಿನ ಮಿತಿಯಿಲ್ಲ. ಇದು ಯಾವಾಗ? ಯಾರಿಗೆ ಬೇಕಾದರೂ ಸಂಭವಿಸಬಹುದು. ಆದರೆ ಇಲ್ಲೊಂದು ಸಂಶೋಧನೆ ನೀಡಿದ ವರದಿ ಎಲ್ಲರನ್ನು ಬೆಚ್ಚಿಬೀಳಿಸಿದೆ. ಹೃದಯಾಘಾತ ಸಾಮಾನ್ಯವಾಗಿ ವಾರದ ಯಾವ ದಿನದಲ್ಲಾದರೂ ಸಂಭವಿಸಬಹುದು. ಆದರೆ ಹೊಸ ಸಂಶೋದನೆ ಹೃದಯಾಘಾತ ವಾರದ ಯಾವ ದಿನ ಹೆಚ್ಚಾಗಿ ಸಂಭವಿಸುತ್ತದೆ ಎಂದು ಹೇಳಿಕೊಂಡಿದೆ.
ಜನರು ವಾರದ ಯಾವುದೇ ದಿನಕ್ಕಿಂತ ಸೋಮವಾರದಂದು ಗಂಭೀರ ಹೃದಯಾಘಾತವನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ಹೊಸ ಸಂಶೋಧನೆಯೊಂದು ಹೇಳಿದೆ. ಅಧ್ಯಯನದ ಸಂಶೋಧನೆಗಳನ್ನು ಮ್ಯಾಂಚೆಸ್ಟರ್ನಲ್ಲಿ ನಡೆದ ಬ್ರಿಟಿಷ್ ಕಾರ್ಡಿಯೋವಾಸ್ಕುಲರ್ ಸೊಸೈಟಿ (BCS) ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾಗಿದೆ. ಬೆಲ್ಫಾಸ್ಟ್ ಹೆಲ್ತ್ ಅಂಡ್ ಸೋಶಿಯಲ್ ಕೇರ್ ಟ್ರಸ್ಟ್ ಮತ್ತು ಐರ್ಲೆಂಡ್ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ನ ವೈದ್ಯರು ಈ ಅಧ್ಯಯನವನ್ನು ಮಾಡಿದ್ದಾರೆ. ಇದಕ್ಕಾಗಿ 20,000 ಕ್ಕೂ ಹೆಚ್ಚು ರೋಗಿಗಳನ್ನು ಅಧ್ಯಯನ ಮಾಡಲಾಗಿದೆ.

ಸೋಮವಾರದಂದು ಹೃದಯಾಘಾತದ ಅಪಾಯ ಹೆಚ್ಚು
ಹೃದಯಾಘಾತದ ಅತ್ಯಂತ ಗಂಭೀರ ವಿಧಗಳಲ್ಲಿ ಒಂದಾದ ST-ಸೆಗ್ಮೆಂಟ್ ಎಲಿವೇಶನ್ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ (STEMI) ರೋಗಿಗಳಲ್ಲಿ ಕಂಡುಬರುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. STEMI ಹೃದಯಾಘಾತದ ಪ್ರಮಾಣವು ಸೋಮವಾರ ಅಧಿಕವಾಗಿತ್ತು ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. STEMI ಯಲ್ಲಿ ಪ್ರಮುಖ ಪರಿಧಮನಿಯು ಸಂಪೂರ್ಣವಾಗಿ ನಿರ್ಬಂಧಿಸಲ್ಪಡುತ್ತದೆ. ಆಮ್ಲಜನಕ ಮತ್ತು ರಕ್ತ ಪೂರೈಕೆಯನ್ನು ನಿಲ್ಲಿಸಿಬಿಡುತ್ತದೆ.
"ದೇಹದಲ್ಲಾಗುವ ಈ ಬದಲಾವಣೆಗಳಿಗೆ ನಿಖರವಾದ ಕಾರಣ ತಿಳಿದಿಲ್ಲ. ಆದರೆ ಹೃದಯಾಘಾತ ಮತ್ತು ಪಾರ್ಶ್ವವಾಯುಗಳ ಮೇಲೆ ಪ್ರಭಾವ ಬೀರುವ ರಕ್ತಪರಿಚಲನೆಯ ಹಾರ್ಮೋನುಗಳ ಮೇಲೆ ಸರ್ಕಾಡಿಯನ್ ಲಯವು ಹೇಗೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಏನಾದರೂ ಸಂಬಂಧವಿದೆ ಎಂದು ನಾವು ಭಾವಿಸುತ್ತೇವೆ" ಎಂದು ಬೆಲ್ಫಾಸ್ಟ್ ಹೆಲ್ತ್ ಅಂಡ್ ಸೋಶಿಯಲ್ ಕೇರ್ನಲ್ಲಿ ಸಂಶೋಧನೆಯ ನೇತೃತ್ವ ವಹಿಸಿದ್ದ ಹೃದ್ರೋಗ ತಜ್ಞ ಹಿಂದಿನ ಅಧ್ಯಯನಗಳ ಸಂಶೋಧನೆಗಳನ್ನು ಉಲ್ಲೇಖಿಸಿ ಟ್ರಸ್ಟ್ ಡೈಲಿ ಮೇಲ್ಗೆ ತಿಳಿಸಿದರು. ಇಂತಹ ಬದಲಾವಣೆಗಳು ಚಳಿಗಾಲದಲ್ಲಿ ಮತ್ತು ಮುಂಜಾನೆಯಲ್ಲಿ ಕಂಡುಬರುತ್ತವೆ. ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ಅಧ್ಯಯನ ಹೇಳುತ್ತದೆ.

"ಇದು ಕೆಲಸಕ್ಕೆ ಮರಳುವ ಒತ್ತಡದ ಕಾರಣದಿಂದಾಗಿರಬಹುದು. ಹೆಚ್ಚಿನ ಒತ್ತಡವಾಗಿರಬಹುದು. ಒತ್ತಡದ ಹಾರ್ಮೋನ್ಗಳ ಹೆಚ್ಚಳ ಹೃದಯಾಘಾತದ ಹೆಚ್ಚಿನ ಅಪಾಯ ಸೃಷ್ಟಿಸಬಹುದು" ಎಂದು ಅವರು ಹೇಳಿದರು.
ಹೃದಯಾಘಾತ ಹೇಗೆ ಮತ್ತು ಏಕೆ ಸಂಭವಿಸುತ್ತದೆ?
"ಯುಕೆಯಲ್ಲಿ ಪ್ರತಿ ಐದು ನಿಮಿಷಗಳಿಗೊಮ್ಮೆ ಮಾರಣಾಂತಿಕ ಹೃದಯಾಘಾತದಿಂದ ಯಾರಾದರೂ ಆಸ್ಪತ್ರೆಗೆ ದಾಖಲಾಗುತ್ತಾರೆ. ಆದ್ದರಿಂದ ಹೃದಯಾಘಾತಗಳು ಹೇಗೆ ಮತ್ತು ಏಕೆ ಸಂಭವಿಸುತ್ತವೆ ಎಂಬುದರ ಕುರಿತು ತಿಳಿಯುವುದು ಅತ್ಯಗತ್ಯ. ಈ ಅಧ್ಯಯನವು ವಿಶೇಷವಾಗಿ ಗಂಭೀರ ಹೃದಯಾಘಾತದ ಸಮಯದ ಬಗ್ಗೆ ಪುರಾವೆಗಳನ್ನು ನೀಡುತ್ತದೆ. ಮಾತ್ರವಲ್ಲದೆ ವಾರದ ಯಾವ ದಿನದಲ್ಲಿ ಹೃದಯಾಘಾತ ಹೆಚ್ಚಾಗಿ ಸಂಭವಿಸುತ್ತದೆ ಎಂದು ಬ್ರಿಟಿಷ್ ಹಾರ್ಟ್ ಫೌಂಡೇಶನ್ನ ವೈದ್ಯಕೀಯ ನಿರ್ದೇಶಕ ಪ್ರೊಫೆಸರ್ ಸರ್ ನೀಲೇಶ್ ಸಾಮಾನಿ ಮಾಧ್ಯಮಕ್ಕೆ ತಿಳಿಸಿದರು STEMI ನಿಂದಾಗಿ 30,000 ಕ್ಕೂ ಹೆಚ್ಚು ರೋಗಿಗಳು UK ಯಲ್ಲಿ ಆಸ್ಪತ್ರೆಗಳಿಗೆ ದಾಖಲಾಗುತ್ತಾರೆ.
ಮೂರು ವಿಧದ ಹೃದಯಾಘಾತಗಳು:
* ST ವಿಭಾಗದ ಎಲಿವೇಶನ್ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ (STEMI)
* ನಾನ್-ಎಸ್ಟಿ ವಿಭಾಗದ ಎಲಿವೇಶನ್ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ (NSTEMI)
* ಪರಿಧಮನಿಯ ಸೆಳೆತ, ಅಥವಾ ಅಸ್ಥಿರ ಆಂಜಿನಾ

STEMI ಸಮಯದಲ್ಲಿ ಏನಾಗುತ್ತದೆ?
ಪರಿಧಮನಿಯು ಸಂಪೂರ್ಣವಾಗಿ ನಿರ್ಬಂಧಿಸಲ್ಪಟ್ಟಾಗ ಮತ್ತು ಸ್ನಾಯುವಿನ ಹೆಚ್ಚಿನ ಭಾಗವು ರಕ್ತ ಪಡೆಯುವುದನ್ನು ನಿಲ್ಲಿಸಿದಾಗ STEMI ಸಂಭವಿಸುತ್ತದೆ. ಇದು ಗಂಭೀರವಾದ ಹೃದಯಾಘಾತವಾಗಿದ್ದು ಅದು ಗಮನಾರ್ಹ ಹಾನಿ ಉಂಟುಮಾಡುತ್ತದೆ.
ತಂಬಾಕು ಸೇವನೆ, ಧೂಮಪಾನ, ಮಧುಮೇಹ, ಕೊಲೆಸ್ಟ್ರಾಲ್, ಆಲ್ಕೋಹಾಲ್, ಆಂಫೆಟಮೈನ್ಗಳು, ಕೊಕೇನ್ ಮತ್ತು ಕಡಿಮೆ ದೈಹಿಕ ಚಟುವಟಿಕೆ, ಮಾದಕ ದ್ರವ್ಯಗಳ ಸೇವನೆ STEMI ಯನ್ನು ಪ್ರಚೋದಿಸುವ ಜೀವನಶೈಲಿ ಅಭ್ಯಾಸಗಳು ಎಂದು ಪರಿಗಣಿಸಲಾಗುತ್ತದೆ. ಹೃದ್ರೋಗಗಳ ಕುಟುಂಬದ ಇತಿಹಾಸವನ್ನು ಹೊಂದಿರುವ ನೀವು STEMI ಅನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೊಂದಿರಬಹುದು. 20,000 ಕ್ಕೂ ಹೆಚ್ಚು ರೋಗಿಗಳನ್ನು ಅಧ್ಯಯನ ಮಾಡಿದಾಗ ಹೆಚ್ಚು ಹೃದಯಾಘಾತಗಳು ಸೋಮವಾರ ಸಂಭವಿಸಿರುವುದು ಕಂಡು ಬಂದಿದೆ. ಇದು ಕೆಲಸದ ಒತ್ತಡ ಆಗಿರಬಹುದು. ಅಥವಾ ಮಾದಕ ದ್ರವ್ಯಗಳ ಸೇವನೆಯೂ ಆಗಿರಬಹುದು.
-
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ












Click it and Unblock the Notifications