130 ಕೋಟಿ ಭಾರತೀಯರ ಪ್ರೀತಿಯನ್ನು ನಿಮಗೆ ತಂದಿದ್ದೇನೆ; ಮೋದಿ
ಢಾಕಾ, ಮಾರ್ಚ್ 27: "ಇಲ್ಲಿನ ಒರಕಂಡಿ ದೇಗುಲಕ್ಕೆ ಭೇಟಿ ನೀಡಬೇಕೆಂದು ಬಹುವರ್ಷಗಳಿಂದ ಕಾಯುತ್ತಿದ್ದೆ. ಆ ದಿನ ಕೊನೆಗೂ ಇಂದು ಬಂತು" ಎಂದು ಬಾಂಗ್ಲಾದೇಶದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ಬಾಂಗ್ಲಾದೇಶಕ್ಕೆ ಎರಡು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಇಂದು ಬೆಳಿಗ್ಗೆ ಒರಕಂಡಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಈ ಸಂದರ್ಭ ಅಲ್ಲಿನ ಮತುವಾ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಅವರು, "ಬಂಗಾಳದಲ್ಲಿ ಅಸ್ಪೃಶ್ಯರಿಗೆ ಬೆಂಬಲವಾಗಿ ನಿಂತು ಮತುವಾ ಸಮುದಾಯ ನಿರ್ಮಿಸಿದ ಹರಿಚಂದ್ ಠಾಕೂರ್ ಅವರಿಂದ ನಾನು ಈ ಪವಿತ್ರ ಸ್ಥಳದಲ್ಲಿ ತಲೆಬಾಗಿ ನಿಲ್ಲಲು ಸಾಧ್ಯವಾಗಿದೆ" ಎಂದು ಹೇಳಿದರು.
ಪಶ್ಚಿಮ ಬಂಗಾಳದ ಠಾಕೂರ್ನಗರಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿಕೊಂಡ ಅವರು, "ಮತುವಾದ ಸಹೋದರ, ಸಹೋದರಿಯರು ಅಲ್ಲಿ ನನಗೆ ಕುಟುಂಬ ಸದಸ್ಯ ಎಂಬಂತೆ ಪ್ರೀತಿ ನೀಡಿದರು. ಬಾಂಗ್ಲಾದ ಸುವರ್ಣ ಸ್ವಾತಂತ್ರ್ಯ ದಿನದ ಈ ಸಂಭ್ರಮದಲ್ಲಿ 130 ಕೋಟಿ ಭಾರತೀಯರ ಪರವಾಗಿ ಪ್ರೀತಿ ಹಾಗೂ ಶುಭಾಶಯಗಳನ್ನು ನಾನು ನಿಮಗಾಗಿ ತಂದಿದ್ದೇನೆ" ಎಂದು ಶುಭ ಹಾರೈಸಿದರು.

ಅಭಿವೃದ್ಧಿ ಕಾರ್ಯಗಳಿಂದ ಬಾಂಗ್ಲಾ ಹಾಗೂ ಭಾರತ ಈ ಎರಡೂ ದೇಶಗಳು ವಿಶ್ವದಲ್ಲಿ ಉನ್ನತಿ ಸಾಧಿಸಬೇಕು. ವಿಶ್ವದಲ್ಲಿ ಅಭದ್ರತೆ, ಭಯೋತ್ಪಾದನೆ, ಅಹಿತಕರ ಘಟನೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಎರಡು ದೇಶಗಳಿಗೂ ಪ್ರೀತಿ, ಶಾಂತಿಯ ಅವಶ್ಯಕತೆ ಇದೆ ಎಂದರು. ಈ ಮೌಲ್ಯ, ಶಿಕ್ಷಣವನ್ನು ನಮಗೆ ಹರಿಚಾಂದ್ ಠಾಕೂರ್ ಅವರು ನೀಡಿದ್ದಾರೆ ಎಂದರು.












Click it and Unblock the Notifications