ಸೂಪರ್ ಮೂನ್ ಎಲ್ಲೆಲ್ಲಿ ಕಾಣಿಸುತ್ತಾನೆ? ಇಲ್ಲಿದೆ ಗೈಡ್
ಬೆಂಗಳೂರು, ಸೆ.27: ಸೂಪರ್ ಮೂನ್, ಚಂದ್ರ ಗ್ರಹಣ ನೋಡಲು ವಿಶ್ವದ ಅನೇಕ ಮಂದಿ ಕಾತುರರಾಗಿದ್ದಾರೆ. ಕೆಂಪು ಚಂದ್ರನ ಬಗ್ಗೆ ಎದ್ದಿದ್ದ ಊಹಾಪೋಹ ಸುದ್ದಿಗಳನ್ನು ನಾಸಾ ತಳ್ಳಿ ಹಾಕಿದೆ. ಸೂಪರ್ ಮೂನ್ ಎಲ್ಲೆಲ್ಲಿ ಕಾಣಿಸುತ್ತಾನೆ? ಇಲ್ಲಿದೆ ಮಾರ್ಗದರ್ಶನ...
ಭಾನುವಾರ ಹುಣ್ಣಿಮೆಯ ರಾತ್ರಿಯಲ್ಲಿ ಚಂದ್ರ ಗ್ರಹಣ ಸಂಭವಿಸಲಿದೆ. ಅಮೆರಿಕ, ರಷ್ಯಾ ಹಾಗೂ ಆಫ್ರಿಕಾ ದೇಶದವರಿಗೆ ಗ್ರಹಣ ಗೋಚರಿಸಲಿದೆ. ಪಶ್ಚಿಮ ಯುರೋಪ್ ಹಾಗೂ ಆಫ್ರಿಕಾ ದೇಶಗಳಲ್ಲಿ ಚಂದಿರ ಸುಂದರವಾಗಿ ಕಾಣುತ್ತಾನೆ. ಪಶ್ಚಿಮ ಯುನೈಟೆಡ್ ಸ್ಟೇಟ್ಸ್, ಕೆನಡಾದ ಕೆಲ ಭಾಗಗಳಲ್ಲಿ ಭಾಗಶಃ ಗೋಚರ ಲಭ್ಯ. ಅಲಾಸ್ಕಾದಲ್ಲಿ ಚಂದ್ರೋದಯ ಕಾಲದ ದೃಶ್ಯ ಸಿಗುತ್ತದೆ.

ಸೆ. 28ರ ಬೆಳಗ್ಗೆ 6:40ಕ್ಕೆ ಚಂದ್ರಗ್ರಹಣ ಪ್ರಾರಂಭವಾಗಲಿದ್ದು, ಭಾರತದಲ್ಲಿ ಆಗ ಚಂದ್ರ ದರ್ಶನವಾಗುವುದಿಲ್ಲವಾದ್ದರಿಂದ, ಇಲ್ಲಿ ಗ್ರಹಣವಿಲ್ಲ. ಕೆಂಪು ಚಂದ್ರನ ದರ್ಶನ ಭಾಗ್ಯವಿಲ್ಲ. ಆದರೆ 27ರ ರಾತ್ರಿ ಹುಣ್ಣಿಮೆಯ ಚಂದ್ರ ಅತ್ಯಂತ ಸುಂದರವಾಗಿ ಹೆಚ್ಚಿನ ಪ್ರಭೆಯಿಂದ ಕಾಣಿಸಲಿದೆ. ಸೆ. 28ರ ಮುಂಜಾವಿನಲ್ಲಿ ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಇರಾನ್ ಪೂರ್ವ ಭಾಗದಲ್ಲಿ ಭಾಗಶಃ ಗ್ರಹಣ ಗೋಚರಿಸಲಿದೆ. [ಚಂದ್ರನ ಕುರಿತು ಇಂಟರೆಸ್ಟಿಂಗ್ ಸಂಗತಿ]
ಹುಣ್ಣಿಮೆ ಜೊತೆಗೆ ಚಂದ್ರ ಭೂಮಿಗೆ ಅತೀ ಸಮೀಪದಲ್ಲಿರುತ್ತಾನೆ. ಸುಮಾರು 3,56,877 ಕಿ.ಮೀ ಹತ್ತಿರವಾಗಿರುವ ಚಂದ್ರ ಕೆಂಪಗೆ ಕಾಣುತ್ತಾನೆ. ನ್ಯಾಷನಲ್ ಏರೋನಾಟಿಕ್ಸ್ ಆಂಡ್ ಸ್ಪೇಸ್ ಆರ್ಗನೈಜೇಶನ್ (ನಾಸಾ) ಈ ಸೂಪರ್ ಮೂನ್ ಅಧ್ಯಯನಕ್ಕೆ ಸಕಲ ರೀತಿಯಲ್ಲಿ ಸಜ್ಜಾಗಿದೆ.
ಸಾಮಾನ್ಯವಾಗಿ ಹುಣ್ಣಿಮೆ ದಿನ ಕಾಣುವ ಚಂದ್ರನಿಗಿಂತ ಈ ಹುಣ್ಣಿಮೆಯ ಚಂದ್ರ ಸುಮಾರು ಶೇ.12ರಷ್ಟು ದೊಡ್ಡದಾಗಿ ಹಾಗೂ ಶೇ.24ರಷ್ಟು ಹೆಚ್ಚಿನ ಪ್ರಭೆಯೊಂದಿಗೆ ಕಾಣಿಸುತ್ತಾನೆ. 1982ರ ನಂತರ ಇಂಥ ದೊಡ್ಡ ಚಂದ್ರ ಕಾಣುತ್ತಿದ್ದಾನೆ. 2033ರಲ್ಲಿ ಮತ್ತೊಮ್ಮೆ ಇದೇ ರೀತಿಯ ಪ್ರಭೆ ಬೀರಲಿದ್ದಾನೆ. [ಕೆಂಪು ಚಂದ್ರನ ಹೈಲೈಟ್ಸ್]
ಎಲ್ಲೆಲ್ಲಿ ಚಂದ್ರ ಗ್ರಹಣ ಗೋಚರಿಸುತ್ತದೋ ಅಲ್ಲೆಲ್ಲ ಜನರು ಬರಿಗಣ್ಣಿನಿಂದ ಚಂದ್ರ ಗ್ರಹಣವನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ವೀಕ್ಷಿಸಬಹುದು. ಭಾರತದಲ್ಲಿ ಗೋಚರಿಸದಿಲ್ಲ ಎಂದು ಚಿಂತಿಸಬೇಡಿ. ನಾಸಾ ಒದಗಿಸುತ್ತಿರುವ ಲೈವ್ ಸ್ಟ್ರೀಮಿಂಗ್ ಮೂಲಕ ಈ ಅದ್ಭುತವನ್ನು ವೀಕ್ಷಿಸಿ ಆನಂದಿಸಿ. ಲೈವ್ ಸ್ಟ್ರೀಮಿಂಗ್ ಲಿಂಕ್ ಕ್ಲಿಕ್ ಮಾಡಿ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications