Greenland: ಗ್ರೀನ್ಲ್ಯಾಂಡ್ ಬೆನ್ನಿಗೆ ನಿಂತ ಯುರೋಪ್, ಅಮೆರಿಕ ಅಧ್ಯಕ್ಷರ ನಡೆಗೆ ವಿರೋಧ
ವೆನಿಜುಯೆಲಾ ಮೇಲೆ ದಾಳಿ ಮಾಡಿದ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಣ್ಣು ಇನ್ನಷ್ಟು ದೇಶಗಳ ಮೇಲೆ ಬೀಳುತ್ತಿದೆ. ಅಮೆರಿಕದ ಶತ್ರು ದೇಶಗಳನ್ನು ಒಂದೊಂದಾಗಿ ವಶಕ್ಕೆ ಪಡೆಯಲು ಡೊನಾಲ್ಡ್ ಟ್ರಂಪ್ ಈ ಮೂಲಕ ಪ್ಲಾನ್ ಮಾಡಿದ್ದಾರಾ? ಎಂಬ ಪ್ರಶ್ನೆ ಕೂಡ ಉದ್ಭವಿಸುವಂತೆ ಮಾಡಿದೆ. ಇಷ್ಟೆಲ್ಲಾ ಚರ್ಚೆಗಳ ನಡುವೆಯೇ ದಿಢೀರ್ ಗ್ರೀನ್ಲ್ಯಾಂಡ್ ಭೂಮಿ ಅಮೆರಿಕಗೆ ಬೇಕೆ ಬೇಕು ಅನ್ನೋ ಹಠಕ್ಕೆ ಬಿದ್ದಿದ್ದಾರೆ ಟ್ರಂಪ್. ಇದೇ ಕಾರಣಕ್ಕೆ ಈಗ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈ ವಿಚಾರವಾಗಿ ಅಮೆರಿಕ & ಯುರೋಪ್ ದೇಶಗಳ ನಡುವೆ ತಿಕ್ಕಾಟ ಶುರುವಾಗಿದೆ.
ಗ್ರೀನ್ಲ್ಯಾಂಡ್ ಮೇಲೆ ಡೆನ್ಮಾರ್ಕ್ ಹಿಡಿತ ಹೊಂದಿದ್ದರೂ, ಪಾಶ್ಚಿಮಾತ್ಯ ದೇಶಗಳಿಗೆ ಅಲ್ಲಿ ಅಧಿಕಾರ ಇದೆ. ಹೀಗಿದ್ದಾಗಲೇ ನೇರವಾಗಿ ಅಷ್ಟೂ ಜಾಗ ನಮಗೆ ಬೇಕು ಎಂದು ಅಮೆರಿಕದ ಅಧ್ಯಕ್ಷರು ಹಠ ಹಿಡಿದಿರುವ ರೀತಿ ನೋಡಿದರೆ ಪರಿಸ್ಥಿತಿ ಇನ್ನಷ್ಟು ಕೈಮೀರುವ ಸಾಧ್ಯತೆಗಳು ದಟ್ಟವಾಗಿವೆ. ಇದೇ ಕಾರಣಕ್ಕೆ ಯುರೋಪ್ ದೇಶಗಳು ಗ್ರೀನ್ಲ್ಯಾಂಡ್ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುತ್ತಿವೆ. ಅದರಲ್ಲೂ ಡೆನ್ಮಾರ್ಕ್ ಈಗಾಗಲೇ ಅಮೆರಿಕದ ನಡೆ ವಿರುದ್ಧ ತನ್ನ ಪ್ರತಿಭಟನೆ ದಾಖಲಿಸಿದೆ. ಇದರ ಜೊತೆಗೆ ಯುರೋಪ್ ಒಕ್ಕೂಟದ ದೇಶಗಳು ಕೂಡ ಬುದ್ಧಿ ಹೇಳುವ ಕೆಲಸಕ್ಕೆ ಮುಂದಾಗಿವೆ.

ನ್ಯಾಟೋ ಒಕ್ಕೂಟದಲ್ಲೇ ಶುರುವಾಯ್ತು ಕಿರಿಕ್
ಜಗತ್ತಿನಲ್ಲಿ ಅತಿದೊಡ್ಡ ಮಿಲಿಟರಿ ಒಕ್ಕೂಟ ಎಂಬ ಕೀರ್ತಿ ಪಡೆದಿರುವ ನ್ಯಾಟೋ ಒಕ್ಕೂಟದಲ್ಲೇ ಈಗ ಫೈಟಿಂಗ್ ಶುರುವಾಗಿದೆ. ಗ್ರೀನ್ಲ್ಯಾಂಡ್ ನಮಗೆ ಬೇಕು ಎಂದು ಅಮೆರಿಕ ಹಠ ಹಿಡಿದ ಬೆನ್ನಲ್ಲೇ ಇದು ಸರಿಯಾದ ಮಾರ್ಗ ಅಲ್ಲ, ಈ ರೀತಿಯ ವರ್ತನೆಗಳು ನಮ್ಮಲ್ಲೇ ಬಿರುಕನ್ನು ಮೂಡಿಸಲಿದೆ ಎಂಬ ವಿಚಾರ ಮನದಟ್ಟು ಮಾಡಲು ಮುಂದಾಗಿವೆ ಯುರೋಪ್ ದೇಶಗಳು. ಅದರಲ್ಲೂ ಟ್ರಂಪ್ ಅವರನ್ನು ಸಹಿಸಿಕೊಳ್ಳದ ಯುರೋಪ್ ಒಕ್ಕೂಟದ ಸದಸ್ಯರು ಈ ಬಗ್ಗೆ ದೊಡ್ಡದಾಗಿ ಧ್ವನಿ ಎತ್ತಿದ್ದಾರೆ.
ಅಮೆರಿಕ ಭವಿಷ್ಯಕ್ಕೆ ಗ್ರೀನ್ಲ್ಯಾಂಡ್ ಅನಿವಾರ್ಯ
ಜಗತ್ತಿನ ದೊಡ್ಡಣ್ಣ ಎಂಬ ಬಿರುದು ಪಡೆದಿರುವ ಅಮೆರಿಕ ಇಡೀ ಪ್ರಪಂಚದಲ್ಲೇ ಅತಿಹೆಚ್ಚು ಭೂಮಿ ಹೊಂದಿರುವ ದೇಶಗಳ ಪೈಕಿ ಒಂದಾಗಿದೆ. ಆದರೂ ತಮಗೆ ಸಮೀಪದಲ್ಲೇ ಇರುವ ಭೂಮಿ ಮೇಲೆ ಹಾಗೂ ದೇಶಗಳ ಮೇಲೆ ಕಣ್ಣು ಹಾಕುವ ಕೆಲಸ ಮಾತ್ರ ಬಿಡುತ್ತಿಲ್ಲ. ಇದೇ ರೀತಿ ಡೊನಾಲ್ಡ್ ಟ್ರಂಪ್ ಅವರು ಕೆನಡಾ ಮೇಲೆ ಕೂಡ ಕಣ್ಣು ಹಾಕಿದ್ದರು. ಅಲ್ಲದೆ ಕೆನಡಾ ದೇಶವನ್ನು ಅಮೆರಿಕದ ರಾಜ್ಯವಾಗಿ ಮಾಡಿಕೊಳ್ಳುತ್ತೇವೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ಕೂಡ ನೀಡಿದ್ದರು. ಇದೀಗ ಗ್ರೀನ್ಲ್ಯಾಂಡ್ ವಿಚಾರದಲ್ಲಿ ಕಿರಿಕ್ ಬಲು ಜೋರಾಗುತ್ತಿದೆ.
-
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Gold and Silver Rate Today April 5: ಚಿನ್ನ - ಬೆಳ್ಳಿ ಪ್ರಿಯರಿಗೆ ಗುಡ್ನ್ಯೂಸ್, ಮುಂದಿನ ವಾರ ಹೇಗಿರಲಿದೆ ಬಂಗಾರದ ಬೆಲೆ -
Bengaluru Migration: ಅಸ್ಸಾಂನಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ -
ಸಿಎಸ್ಕೆ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಸ್ಫೋಟಕ ಸತ್ಯ ಬಿಚ್ಚಿಟ್ಟ ಆರ್ಸಿಬಿ ಸ್ಟಾರ್, ಕನ್ನಡಿಗ ಪಡಿಕ್ಕಲ್ -
ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ: 3 ರೈಲುಗಳು ಇನ್ಮುಂದೆ ಪರ್ಮನೆಂಟ್, ಟಿಕೆಟ್ ದರದಲ್ಲಿ ಭಾರಿ ಇಳಿಕೆ! -
Match Weather Report: ಚಿನ್ನಸ್ವಾಮಿಯಲ್ಲಿ ಆರ್ಸಿಬಿ-ಸಿಎಸ್ಕೆ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಉಪೇಂದ್ರ ಅಣ್ಣನ ಮಗನ ಜೊತೆ ಶ್ರೇಯಾಂಕ ಪಾಟೀಲ್ ಮದುವೆ ಸುದ್ದಿ: ಖಡಕ್ ಪ್ರತಿಕ್ರಿಯೆ ಕೊಟ್ಟ ನಟ ನಿರಂಜನ್ ಸುಧೀಂದ್ರ -
Prakash Raj: ಚಹಾ ಮಾರುವುದರಿಂದ ಸಿನಿಮಾ ಮಾರುವವರೆಗೆ ಮೋದಿ ಬಗ್ಗೆ ನಟ ಪ್ರಕಾಶ್ ರಾಜ್ ವ್ಯಂಗ್ಯ -
ಪಾಪರ್ ಸರ್ಕಾರದ ಸಾಹುಕಾರ ಸಿದ್ದರಾಮಯ್ಯ: ಬಾಗಲಕೋಟೆ ಮೆಡಿಕಲ್ ಕಾಲೇಜ್ ಬಗ್ಗೆ ಬೊಮ್ಮಾಯಿ ಪ್ರಶ್ನೆ -
Basavaraj Bommai: ನಾನು ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲ ಎಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ












Click it and Unblock the Notifications