ಜಗತ್ತಿನ ನಿದ್ದೆಗೆಡಿಸಿರುವ ವಾನ್ನಕ್ರೈ ವೈರಸ್ ಹುಟ್ಟಿದ್ದು ಎಲ್ಲಿ?
ಲಂಡನ್, ಮೇ 16 : ಭಾರತವೂ ಸೇರಿದಂತೆ ನೂರೈವತ್ತು ದೇಶಗಳಲ್ಲಿ ದಾಂಗುಡಿಯಿಟ್ಟು, ಮೈಕ್ರೋಸಾಫ್ಟ್ ಆಪರೇಟಿಂಗ್ ಸಿಸ್ಟಂ ಇರುವ ಕಂಪ್ಯೂಟರ್ ಗಳನ್ನು ಹ್ಯಾಕ್ ಮಾಡಿ ರಂಪಾಟ ನಡೆಸಿರುವ ರಾನ್ಸಮ್ ವೇರ್ ವೈರಸ್ ಹುಟ್ಟಿದ್ದು ಎಲ್ಲಿ?
ಇಡೀ ಅಂತರ್ಜಾಲವನ್ನು ಜಾಲಾಡಿರುವ ಗೂಗಲ್ ಕಂಪನಿಯ ಭಾರತೀಯ ಮೂಲದ ಕಂಪ್ಯೂಟರ್ ಭದ್ರತಾ ಸಂಶೋಧಕ ನೀಲ್ ಮೆಹ್ತಾ, ಇದು ಹುಟ್ಟಿದ್ದು ಉತ್ತರ ಕೊರಿಯಾದಲ್ಲಿ ಎಂದು ಕಂಡುಹಿಡಿದಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ಉತ್ತರ ಕೊರಿಯಾದವರ ಪರವಾಗಿ ಕೆಲಸ ಮಾಡುತ್ತಿರುವ ಲಝಾರಸ್ ಗ್ರೂಪ್ ಈ ಕೃತ್ಯದ ಹಿಂದಿರಬಹುದೆಂದು ಅವರು ಶಂಕಿಸಿದ್ದಾರೆ. ಏಕೆಂದರೆ, ವಾನ್ನಾಕ್ರಿಪ್ಟ್ ಕೋಡಿಂಗ್ ನಲ್ಲಿ ಬಳಸಿದ ಕೋಡನ್ನೇ ಹಲವಾರು ಬಾರಿ ಈ ಕಂಪನಿ ಬಳಸಿದೆ.

ನೀಲ್ ಮೆಹ್ತಾ ಅವರು ಕಂಡುಹಿಡಿದಿರುವ ಈ ಸಂಗತಿ ಅತ್ಯಂತ ಮಹತ್ವದ್ದಾಗಿದೆ ಮಾಸ್ಕೋ ಮೂಲದ ಸೈಬರ್ ಭದ್ರತಾ ಕಂಪನಿ ಕಾಸ್ಪರ್ಸ್ಕಿ ಲ್ಯಾಬ್ ಹೇಳಿರುವುದನ್ನು ಬಿಬಿಸಿ ತನ್ನ ವರದಿಯಲ್ಲಿ ಹೇಳಿದೆ.
2014ರಲ್ಲಿ ಚೀನಾದಲ್ಲಿರುವ ಲಝಾರಸ್ ಗ್ರೂಪ್ ಸೋನಿ ಪಿಕ್ಚರ್ಸ್ ಮೇಲೆ ಮತ್ತು 2016ರಲ್ಲಿ ಬಾಂಗ್ಲಾದೇಶದ ಬ್ಯಾಂಕ್ ಮೇಲೆ ದಾಳಿ ನಡೆಸಿತ್ತು ಎಂದು ಮೆಹ್ತಾ ಹೇಳಿದ್ದಾರೆ.
ರಾನ್ಸಮ್ ವೇರ್ ವೈರಸ್ ಇಡೀ ಜಗತ್ತಿನ ನಿದ್ದೆಗೆಡಿಸಿರುವುದಂತೂ ನಿಜ. ಬೆಂಗಳೂರಿನಲ್ಲಿ ಬ್ಯಾಂಕುಗಳ ಎಟಿಎಂಗಳನ್ನೆಲ್ಲ ಬಂದ್ ಮಾಡಲಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವವರೆಗೆ ಆನ್ ಲೈನ್ ಟ್ರಾನ್ಸಾಕ್ಷನ್ ಮಾಡಬೇಡಿ ಎಂದು ಗ್ರಾಹಕರನ್ನು ಕೋರಲಾಗಿದೆ.
ಈ ವೈರಸ್ ದಾಳಿಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಬೆಂಗಳೂರು ಪೊಲೀಸ್ ಇಲಾಖೆ ಸೇರಿದಂತೆ ಹಲವರು ಹಲವಾರು ಟಿಪ್ಸ್ ಗಳನ್ನು ನೀಡಿದ್ದಾರೆ. ಯಾವುದೇ ವಿಳಾಸವಿಲ್ಲದೆ ಬರುವ ಈಮೇಲನ್ನು ತೆಗೆದು ಅದರಲ್ಲಿನ ಇಎಕ್ಸ್ಇ ಫೈಲನ್ನು ತೆರೆಯಬೇಡಿ ಎಂದೂ ಸೂಚನೆಗಳು ಬರುತ್ತಿವೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications