ಅಮೆರಿಕ ವಿರುದ್ಧ ತೊಡೆತಟ್ಟಿದ ರಷ್ಯಾ, ಸ್ನೋಡೆನ್ಗೆ ನಾಗರಿಕತ್ವ..!
ಅಮೆರಿಕದ ಗುಪ್ತಚರ ಮಾಹಿತಿ ಬಯಲಿಗೆಳೆದಿದ್ದ ಕಾರಣಕ್ಕಾಗಿ ಶಿಕ್ಷೆಯ ಭೀತಿ ಎದುರಿಸುತ್ತಿರುವ ಎಡ್ವರ್ಡ್ ಸ್ನೋಡೆನ್ಗೆ ರಷ್ಯಾ ಶಾಶ್ವತ ನಾಗರಿಕತ್ವ ನೀಡಿ ಗೌರವಿಸಿದೆ. ಭದ್ರತೆ ಹೆಸರಲ್ಲಿ ಅಮೆರಿಕನ್ನರ ಖಾಸಗಿ ಮಾಹಿತಿ ಕದಿಯುತ್ತಿದ್ದ ಸರ್ಕಾರದ ಸೀಕ್ರೇಟ್ ವಿಚಾರವನ್ನು ಸ್ನೋಡೆನ್ ಬಯಲಿಗೆಳೆದಿದ್ದರು.
ಅಮೆರಿಕದ NSA ಜನರ ಖಾಸಗಿ ಮಾಹಿತಿ ಕದಿಯುತ್ತಿದ್ದ ಬಗ್ಗೆ 2013ರಲ್ಲಿ ಸ್ವತಃ NSA ಉದ್ಯೋಗಿಯಾಗಿದ್ದ ಸ್ನೋಡೆನ್ ಸಂಪೂರ್ಣ ಮಾಹಿತಿ ಹೊರಹಾಕಿದ್ದರು. ಅಂದಿನ ಒಬಾಮಾ ಸರ್ಕಾರ ಎಡ್ವರ್ಡ್ ಸ್ನೋಡೆನ್ ಬಂಧನಕ್ಕೆ ಅದೆಷ್ಟು ಬಾರಿ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ತಕ್ಷಣ ಅಮೆರಿಕದಿಂದ ಕಾಲ್ಕಿತ್ತು, ರಷ್ಯಾದಲ್ಲಿ ಸ್ನೋಡೆನ್ ಆಶ್ರಯ ಪಡೆದಿದ್ದರು.
ಬಳಿಕ ಅಮೆರಿಕ ಸರ್ಕಾರದಿಂದ ಎಷ್ಟೇ ಒತ್ತಡ ಬಂದರೂ ರಷ್ಯಾ ಕೇರ್ ಮಾಡಿರಲಿಲ್ಲ. ಹಲವು ಬಾರಿ ಸ್ನೋಡೆನ್ ವೀಸಾ ಅವಧಿ ವಿಸ್ತರಣೆ ಮಾಡಿತ್ತು. ಇತ್ತೀಚೆಗೆ ಸ್ನೋಡೆನ್ ಪರವಾಗಿ ಅಮೆರಿಕ ಕೋರ್ಟ್ ತೀರ್ಪು ನೀಡಿತ್ತು.

ಭದ್ರತೆ ಹೆಸರಲ್ಲಿ ಜನರ ಖಾಸಗಿ ಮಾಹಿತಿ ಕದಿಯುವುದು ಅಪರಾಧ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆಗೆ ಕೋರ್ಟ್ ಛೀಮಾರಿ ಹಾಕಿತ್ತು. ಈ ಗೆಲುವಿನ ಬೆನ್ನಲ್ಲಿ ಸ್ನೋಡೆನ್ಗೆ ಇನ್ನೊಂದು ಸಿಹಿಸುದ್ದಿ ಸಿಕ್ಕಿದ್ದು, ಇನ್ನುಮುಂದೆ ಸ್ನೋಡೆನ್ ರಷ್ಯಾದ ನಾಗರಿಕನಾಗಿ ಅಲ್ಲೇ ಬದುಕಬಹುದಾಗಿದೆ.
ಆಧಾರ್ ಬಗ್ಗೆಯೂ ಮಾತನಾಡಿದ್ದ ಸ್ನೋಡೆನ್
ಈ ಹಿಂದೆ ಭಾರತದಲ್ಲಿ ನಡೆದಿದ್ದ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ಸ್ನೋಡೆನ್, ಭಾರತದ ಆಧಾರ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಆಧಾರ್ ಯೋಜನೆಯು ಉತ್ತಮ ಧ್ಯೇಯ ಹೊಂದಿದೆ, ಆದರೆ ಆಧಾರ್ನಿಂದ ಭಾರತೀಯರ ಖಾಸಗಿತನಕ್ಕೆ ಧಕ್ಕೆಯಾಗಬಾರದು ಎಂದು ಸ್ನೋಡೆನ್ ಎಚ್ಚರಿಕೆ ನೀಡಿದ್ದರು. ಅಷ್ಟೇ ಅಲ್ಲದೆ ಆಧಾರ್ ಮೂಲಕ ಭಾರತೀಯರ ಖಾಸಗಿ ಮಾಹಿತಿ ದುರಪಯೋಗ ಮಾಡಿಕೊಂಡರೆ, ಅಂತಹ ವ್ಯಕ್ತಿ ಅಥವಾ ಸಂಸ್ಥೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಸ್ನೋಡೆನ್ಗೆ 30 ವರ್ಷ ಶಿಕ್ಷೆ ಕಾದಿತ್ತು
2013ರಲ್ಲಿ NSA ಕುರಿತಾದ ಗೌಪ್ಯ ಮಾಹಿತಿ ಹೊರ ಜಗತ್ತಿಗೆ ತಿಳಿಸಿದ್ದ ಸ್ನೋಡೆನ್ಗೆ ಕಠಿಣ ಶಿಕ್ಷೆ ಕಾದಿತ್ತು. ಒಬಾಮಾ ಸರ್ಕಾರ ಸ್ನೋಡೆನ್ ಮಾಡಿದ್ದು ಅಕ್ಷಮ್ಯ ಅಪರಾಧ ಎಂದಿತ್ತು. ಅಷ್ಟಕ್ಕೂ ಅಮೆರಿಕದಲ್ಲಿ ಈ ರೀತಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರ ಹೊರಗೆಡವಿದರೆ 30 ವರ್ಷದವರೆಗೆ ಶಿಕ್ಷೆ ನೀಡಬಹುದು. ಆದರೆ 7 ವರ್ಷಗಳ ಹಿಂದೆಯೇ ಅಮೆರಿಕ ಬಿಟ್ಟು ಎಸ್ಕೇಪ್ ಆಗಿರುವ ಸ್ನೋಡೆನ್ ರಷ್ಯಾದಲ್ಲಿ ಆಶ್ರಯ ಪಡೆದಿದ್ದಾರೆ. ಹೀಗಾಗಿ ಶಿಕ್ಷೆಯಿಂದ ಪಾರಾಗಿದ್ದಾರೆ. ಅಲ್ಲದೆ ಇದೀಗ ರಷ್ಯಾದ ಶಾಶ್ವತ ನಾಗರಿಕತ್ವ ಪಡೆಯುವ ಮೂಲಕ, ವಿಶ್ವದ ದೊಡ್ಡಣ್ಣನಿಗೆ ಸೆಡ್ಡು ಹೊಡೆದಿದ್ದಾರೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications