ಗಾಂಧೀಜಿ ಮರಿಮೊಮ್ಮಗಳ ಮೇಲೆ ವಂಚನೆ ಆರೋಪ
ಜೊಹಾನ್ಸ್ಬರ್ಗ್, ಅ.21: ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಮರಿಮೊಮ್ಮಗಳು ಆಶಿಷ್ ಲತಾ ರಾಮ್ಗೋಬಿನ್ (45) ಅವರ ಮೇಲೆ ಭಾರಿ ವಂಚನೆ ಆರೋಪ ಕೇಳಿ ಬಂದಿದೆ. ದಕ್ಷಿಣ ಆಫ್ರಿಕದಲ್ಲಿ ಇಬ್ಬರು ಉದ್ಯಮಿಗಳಿಗೆ ಸುಮಾರು 8.30 ಲಕ್ಷ ಡಾಲರ್ಗಳಿಗೂ ಅಧಿಕ ಮೊತ್ತದ ವಂಚನೆ ಎಸಗಿರುವ ಆರೋಪ ಎದುರಿಸುತ್ತಿದ್ದಾರೆ.
ಗಾಂಧೀಜಿಯವರ ಮೊಮ್ಮಗಳಾದ ಆಶಿಷ್ ಲತಾ ರಾಮ್ಗೋಬಿನ್ ಡರ್ಬನ್ನಿನ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಹಾಜರಾಗಿ ಈ ಸಂಬಂಧ ಹೇಳಿಕೆ ದಾಖಲಿಸಿದ್ದಾರೆ. ಕಳವು, ವಂಚನೆ ಹಾಗೂ ಫೋರ್ಜರಿ ಕುರಿತಾದ ಆರೋಪಗಳ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.

ದಕ್ಷಿಣ ಆಫ್ರಿಕದಲ್ಲಿ ಸ್ವಂತ ಉದ್ಯೋಗಿಯಾಗಿರುವ ರಾಮ್ಗೋಬಿನ್, ನೆಟ್ಕೇರ್ ಸಮೂಹದ ಖಾಸಗಿ ಆಸ್ಪತ್ರೆಗಾಗಿ ಭಾರತದಿಂದ ಬೆಡ್ಡಿಂಗ್ ಆಮದಿಗೆ ತಾನು ಟೆಂಡರ್ ಪಡೆದುಕೊಂಡಿರುವುದಾಗಿ ಹೇಳಿಕೊಂಡು ಇಬ್ಬರು ಉದ್ಯಮಿಗಳಿಗೆ 8,31,380 ಡಾಲರ್ (1.10 ಕೋಟಿ ರಾಂಡ್) ವಂಚಿಸಿದ್ದಾರೆ.
ಭಾರತದಿಂದ ಕಂಟೈನರ್ ಲಿನನ್(linen) ರವಾನಿಸಲಾಗಿದೆ ಎಂದು ಹೂಡಿಕೆದಾರರನ್ನು ನಂಬಿಸಲು ರಾಮ್ಗೋಬಿನ್ ನಕಲಿ ಇನ್ವಾಯ್ಸ್ ಹಾಗೂ ಆಮದು ದಾಖಲೆ ಪತ್ರಗಳನ್ನು ಒದಗಿಸಿದ್ದಾರೆ. ಅದರೆ, ಎಲ್ಲವೂ ನಕಲಿಯಾಗಿದೆ ಎಂದು ಹೂಡಿಕೆದಾರರು ಆರೋಪಿಸಿದ್ದಾರೆ ಎಂದು ಉನ್ನತ ಮಟ್ಟದ ವಂಚನೆ ಪ್ರಕರಣಗಳನ್ನು ಪತ್ತೆ ಮಾಡುವ 'ಹಾಕ್ಸ್' ದಳದ ಮುಖ್ಯಸ್ಥರಾಗಿರುವ ಬ್ರಿಗೇಡಿಯರ್ ಹಂಗ್ವಾನಿ ಮುಲೌಝಿ ವಿವರಿಸಿದ್ದಾರೆ.
ಆಮದು ಆಗದೆಯೇ ಸರಕುಗಳನ್ನು ಬಿಡಿಸಿಕೊಳ್ಳಲು ಕಸ್ಟಮ್ಸ್ ಹಾಗೂ ಆಮದು ಸುಂಕವನ್ನು ಪಾವತಿಸುವುದಕ್ಕಾಗಿ ಓರ್ವ ಉದ್ಯಮಿಯಾಗಿರುವ ಎಸ್.ಆರ್. ಮಹಾರಾಜ್ ಎಂಬವರು ರಾಮ್ಗೋಬಿನ್ಗೆ 62 ಲಕ್ಷ ರಾಂಡ್ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಅವರಿಗೆ ಭಾರೀ ಪ್ರಮಾಣದ ಲಾಭಾಂಶವನ್ನು ಕೊಡುವುದಾಗಿ ರಾಮ್ಗೋಬಿನ್ ನಂಬಿಸಿದ್ದರೆನ್ನಲಾಗಿದೆ. ಇದೇ ರೀತಿ ಮತ್ತೊಂದು ಉದ್ಯಮಿಯಿಂದ ರಾಮ್ಗೋಬಿನ್ 52 ಲಕ್ಷ ರಾಂಡ್ ಪಡೆದುಕೊಂಡು ವಂಚಿಸಿದ್ದರೆ ಎನ್ನಲಾಗಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications