ಮಾಸ್ಕ್ ಧರಿಸದ ವಿದೇಶಿಗರಿಗೆ ಈ ನಗರದಲ್ಲಿ ನೀಡುವ ಶಿಕ್ಷೆ ಏನು ಗೊತ್ತೇ?
ಡೆನ್ಪಾಸರ್, ಜನವರಿ 20: ಕೋವಿಡ್ ಹರಡುವುದನ್ನು ತಡೆಯಲು ಅನೇಕ ದೇಶಗಳಲ್ಲಿ ಜನರು ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವುದು ಸೇರಿದಂತೆ ವಿವಿಧ ಶಿಕ್ಷೆಗಳನ್ನು ನೀಡಲಾಗುತ್ತಿದೆ. ಮಾಸ್ಕ್ ಧರಿಸದ ವಿದೇಶಿಗರಿಗೆ ಅನೇಕ ಕಡೆ ಬುದ್ದಿಮಾತು ಹೇಳಿ ಬಿಟ್ಟ ಘಟನೆಗಳು ನಡೆದಿದೆ. ಆದರೆ ಇಂಡೋನೇಷ್ಯಾದ ನಗರವೊಂದರಲ್ಲಿ ಮಾಸ್ಕ್ ತೊಡಲು ಮರೆತ ವಿದೇಶಿಗರಿಗೆ ವಿಭಿನ್ನ ಶಿಕ್ಷೆ ನೀಡಲಾಗುತ್ತಿದೆ.
ಪ್ರವಾಸಿಗರ ನೆಚ್ಚಿನ ತಾಣವಾದ ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಮಾಸ್ಕ್ ಧರಿಸದೆ ಸಿಕ್ಕಿಬಿದ್ದ ವಿದೇಶಿಗರಿಗೆ ಪುಶ್ಅಪ್ ಮಾಡುವ ಶಿಕ್ಷೆ ವಿಧಿಸಲಾಗುತ್ತಿದೆ.
ಕೋವಿಡ್-19 ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂಡೋನೇಷ್ಯಾದ ಬಾಲಿ ದ್ವೀಪದ ಅಧಿಕಾರಿಗಳು ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ತೊಡುವುದನ್ನು ಕಳೆದ ವರ್ಷ ಕಡ್ಡಾಯಗೊಳಿಸಿದ್ದರು. ಅನೇಕ ಪ್ರವಾಸಿಗರು ಭದ್ರತಾ ಅಧಿಕಾರಿಗಳ ನಡುವೆ ಪುಶ್ ಅಪ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂದೆ ಓದಿ.

ದಂಡ ಇಲ್ಲದಿದ್ದರೆ ಪುಶ್-ಅಪ್
ಇತ್ತೀಚಿನ ದಿನಗಳಲ್ಲಿ ಮುಖಕ್ಕೆ ಯಾವುದೇ ರೀತಿ ರಕ್ಷಣೆ ಹೊಂದಿರದ ಅನೇಕ ವಿದೇಶಿ ಪ್ರವಾಸಿಗರನ್ನು ಅಧಿಕಾರಿಗಳು ಹಿಡಿದಿದ್ದಾರೆ. ಇಲ್ಲಿನ ಕಾನೂನು ಪಾಲಿಸದ ವಿದೇಶಿಗರಿಗೆ ದಂಡ ವಿಧಿಸಲಾಗುತ್ತಿದೆ. ಆದರೆ ಕೆಲವರು ತಮ್ಮ ಬಳಿ ಅಷ್ಟು ಪ್ರಮಾಣದ ನಗದು ಇಲ್ಲ ಎಂದು ತಪ್ಪಿಸಿಕೊಳ್ಳಲು ನೋಡುತ್ತಾರೆ. ಅಂತಹವರಿಗೆ ಪುಶ್-ಅಪ್ ಮಾಡುವ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ಭದ್ರತಾ ಅಧಿಕಾರಿ ಗಸ್ಟಿ ಅಗುಂಗ್ ಕೆಟುಟ್ ಸೂರ್ಯನೆಗರ ತಿಳಿಸಿದ್ದಾರೆ.

ಏಳು ಡಾಲರ್ ದಂಡ
70ಕ್ಕೂ ಅಧಿಕ ವಿದೇಶಿಗರು 100,000 ರೂಪಾಯಿ (7 ಡಾಲರ್) ದಂಡವನ್ನು ತೆತ್ತಿದ್ದಾರೆ. ಇನ್ನು ಹಣವಿಲ್ಲ ಎಂದ ಸುಮಾರು 30 ಮಂದಿಗೆ ಪುಶ್ ಅಪ್ ಶಿಕ್ಷೆ ನೀಡಲಾಗಿದೆ. ತಮ್ಮೊಂದಿಗೆ ಮಾಸ್ಕ್ ಕೊಂಡೊಯ್ಯದ ಜನರಿಗೆ 50ರವರೆಗೂ ಪುಶ್ಅಪ್ ಮಾಡುವ ಶಿಕ್ಷೆ ವಿಧಿಸಿದರೆ, ಸೂಕ್ತ ರೀತಿಯಲ್ಲಿ ಮಾಸ್ಕ್ ಧರಿಸದ ಜನರಿಗೆ 15 ಪುಶ್ಅಪ್ ಮಾಡುವಂತೆ ಸೂಚಿಸಲಾಗುತ್ತಿದೆ.

ನೆಪಗಳನ್ನು ಹೇಳುವ ಜನರು
ತಮಗೆ ಈ ನಿಯಮ ತಿಳಿದಿಲ್ಲ, ಮಾಸ್ಕ್ ತರಲು ಮರೆತು ಹೋಯಿತು, ಮಾಸ್ಕ್ ಒದ್ದೆಯಾಗಿದೆ ಅಥವಾ ಹರಿದುಹೋಗಿದೆ ಹೀಗೆ ಅನೇಕರು ಒಂದೊಂದು ನೆಪಗಳನ್ನು ಹೇಳುತ್ತಿದ್ದಾರೆ. ಆದರೆ ಈ ಎಲ್ಲ ಕಾರಣಗಳಿಗೆ ಮಾನ್ಯತೆ ನೀಡುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇಶದಿಂದ ಹೊರದಬ್ಬುವ ಎಚ್ಚರಿಕೆ
ಇಂಡೋನೇಷ್ಯಾದಲ್ಲಿ ಕೋವಿಡ್ ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬಂದಿದ್ದರೂ ಸಂಪೂರ್ಣವಾಗಿ ಮುಕ್ತವಾಗಿಲ್ಲ. ಪ್ರವಾಸೋದ್ಯಮ ಆಧಾರಿತ ಆರ್ಥಿಕತೆಯಾಗಿರುವುದರಿಂದ ಪ್ರವಾಸಿ ತಾಣಗಳು ವಿದೇಶಿಗರಿಗೆ ತೆರೆದಿವೆ. ಆದರೆ ಕೋವಿಡ್ ನಿಯಮಗಳನ್ನು ಪಾಲಿಸದ ವಿದೇಶಿಗರನ್ನು ಮುಲಾಜಿಲ್ಲದೆ ದೇಶದಿಂದ ಹೊರಹಾಕುವುದಾಗಿ ಬಾಲಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications