ಫ್ಲೋರಿಡಾದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ 'ಇರ್ಮಾ'
ಮಿಯಾಮಿ, ಸೆಪ್ಟೆಂಬರ್ 11: ವೆನೆಜುವೆಲಾ, ಫ್ರಾನ್ಸ್, ಅಮೆರಿಕ ಸೇರಿದಂತೆ ಸುಮಾರು 5 ದೇಶಗಳಲ್ಲಿ ತನ್ನ ಆರ್ಭಟ ಮುಂದುವರಿಸಿರುವ ಇರ್ಮಾ ಚಂಡ ಮಾರುತವು, ಅಮೆರಿಕದ ಫ್ಲೋರಿಡಾದಲ್ಲಿ ಜನಜೀವನವನ್ನು ಭಾರೀ ಮಟ್ಟದಲ್ಲಿ ಅಲ್ಲೋಲ ಕಲ್ಲೋಲಗಳಿಸಿದೆ.
ಫ್ಲೋರಿಡಾದ 'ಕೀ' ದ್ವೀಪದ ಮೇಲೆ ಹರಿಕೇನ್ - 4ನೇ ಮಟ್ಟದಲ್ಲಿ ಭೀಕರ ಅವಗಢ ಸೃಷ್ಟಿಸಿರುವ ಇರ್ಮಾ ಭಾರತೀಯ ಕಾಲಮಾನ ಸೋಮವಾರ ಮಧ್ಯಾಹ್ನದ ಹೊತ್ತಿಗೆ, 'ಕೀ' ಪಶ್ಚಿಮ ದಿಕ್ಕಿನೆಡೆಗೆ ಇರುವ ಟಂಪಾಗೆ ಕಾಲಿಟ್ಟಿದೆ. ಇರ್ಮಾದ ಆರ್ಭಟಕ್ಕೆ ಫ್ಲೋರಿಡಾದಲ್ಲಿ ಎರಡು ಕಡೆಗೆ ಭೂಕುಸಿತ ಸಂಭವ.

ತೀವ್ರ ಮಳೆಯಿಂದಾಗಿ, ಕೆಲವು ಎತ್ತರದ ಪ್ರದೇಶಗಳು ದ್ವೀಪಗಳಂತಾಗಿವೆ. ಇದರಿಂದಾಗಿ, ಈ ಪ್ರದೇಶಗಳಲ್ಲಿರುವ ಜನರು ತಮ್ಮ ಮನೆಗಳಿಂದ ಹೊರಬರಲು ಆಗದೆ ನರಳಾಡುವಂಥ ಪರಿಸ್ಥಿತಿ ಉದ್ಭವವಾಗಿದೆ.
ಎಷ್ಟೋ ಮನೆಗಳಲ್ಲಿ ಅವರ ಆಹಾರ ಸಂಗ್ರಹಣೆಯು ಕ್ಷೀಣಿಸುತ್ತಿದ್ದು, ಇದರಿಂದ ಜನರು ಆತಂಕಗೊಂಡಿದ್ದಾರೆ. ಅಲ್ಲದೆ, ಅವರಿಗೆ ವಿದ್ಯುತ್ ಸೌಕರ್ಯವಿಲ್ಲದಂತಾಗಿದೆ. ಮೊಬೈಲ್, ಇಂಟರ್ನೆಂಟ್ ಸಂಪರ್ಕ ಸಂಪೂರ್ಣವಾಗಿ ನಿಂತು ಹೋಗಿರುವುದರಿಂದಾಗಿ ಅವರು ಯಾರನ್ನೂ ಸಂಪರ್ಕಿಸಿ ಸಹಾಯ ಕೋರದ ಪರಿಸ್ಥಿತಿಗೆ ಬಂದು ತಲುಪಿದ್ದಾರೆ.
ಮನೆಯಿಂದ ಹೊರಗೆ ದೃಷ್ಟಿ ಹಾಯಿಸಿದರೆ, ದೃಷ್ಟಿ ಹರಿಯುವವರೆಗೂ ನೀರು.. ನೀರು... ನೀರು. ಅದು ಬಿಟ್ಟರೆ ಮುರಿದುಬಿದ್ದ, ಉರುಳಿಬಿದ್ದ ಕಟ್ಟಡಗಳ ಅವಶೇಷಗಳು ಕಾಣ ಸಿಗುತ್ತಿವೆ.
ಇದಲ್ಲದೆ, ಮನೆಯ ಮುಂದೆ ನಿಂತ ನೀರಿನಲ್ಲಿ ಹಾವು ಮುಂತಾದ ಪ್ರಾಣಿಗಳನ್ನು ಕಂಡು ಬಾಗಿಲು ತೆರೆಯಲೂ ಹೆದರಿ ಕೂತಿದ್ದಾರೆ ಇಲ್ಲಿನ ಜನ.
ಈಗಾಗಲೇ ಇರ್ಮಾ ಚಂಡ ಮಾರುತವು ಫ್ಲೋರಿಡಾಕ್ಕೆ ಸೇರಿದ ಕೀ ದ್ವೀಪದಲ್ಲಿ ಹಲವಾರು ರಾದ್ಧಾಂತವನ್ನು ಸೃಷ್ಟಿಸಿದೆ. ಗಂಟೆಗೆ 130 ಮೇಲುಗಳ ವೇಗದಲ್ಲಿ ಸಾಗಿ ಬಂದ ಬಿರುಗಾಳಿ, ಚಂಡಮಾರುತವು ಇಲ್ಲಿನ ನಿವಾಸಿಗಳಿಗೆ ಅಪಾರ ಸಂಖ್ಯೆಯಲ್ಲಿ ಹಾನಿ ಮಾಡಿದೆ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications