ಕೊರಿಯಾ ಸರ್ವಾಧಿಕಾರಿಯ ಅಣ್ಣನ ಕೊಲೆ ಸುತ್ತಾ ಮುಂದುವರಿದ ನಿಗೂಢತೆ
ಬೆಂಗಳೂರು, ಫೆಬ್ರವರಿ 19: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅಣ್ಣ ಕಿಮ್ ಜಾಂಗ್ ನಾಮ್ ಕೊಲೆಯ ನಿಗೂಢತೆಯನ್ನು ಇನ್ನೂ ಬೇಧಿಸಲು ಸಾಧ್ಯವಾಗಿಲ್ಲ.
ಇದರ ಮಧ್ಯೆ ಸ್ವತಃ ಅಣ್ಣನನ್ನೇ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೊಲೆ ಮಾಡಿದ್ದಾನೆ ಎಂದು ನೆರೆಯ ರಾಷ್ಟ್ರ ದಕ್ಷಿಣ ಕೊರಿಯಾ ಮತ್ತೊಮ್ಮೆ ಆಪಾದಿಸಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕೊಲೆಯಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾದ 5 ಜನರು ಉತ್ತರ ಕೊರಿಯನ್ನರೇ ಆಗಿದ್ದಾರೆ. ಆದರೆ ಕೊಲೆ ಮಾಡಿದ್ದು ಉತ್ತರ ಕೊರಿಯಾವೇ ಎನ್ನಲು ಬಲವಾದ ಸಾಕ್ಷ್ಯಗಳು ಮಾತ್ರ ಇನ್ನೂ ಸಿಕ್ಕಿಲ್ಲ.[ಅಣ್ಣನನ್ನೇ ವಿಷವುಣಿಸಿ ಕೊಂದ ಉತ್ತರ ಕೊರಿಯಾ ಸರ್ವಾಧಿಕಾರಿ?]

ಕಿಮ್ ಜಾಂಗ್ ನಾಮ್ ಮಲೇಷ್ಯಾದ ಕೌಲಾಲಂಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫೆಬ್ರವರಿ 13ರಂದು ಸಾವನ್ನಪ್ಪಿದ್ದರು. ಅವರ ಮೇಲೆ ರಾಸಾಯನಿಕ ಸ್ಪ್ರೇ ಮಾಡಿ ಕೊಲೆ ಮಾಡಲಾಗಿತ್ತು. ಆದರೆ ಮಲೇಷ್ಯಾ ಸರಕಾರ ನಡೆಸಿದ ಮರಣೋತ್ತರ ವರದಿಯನ್ನೇ ತಿರಸ್ಕರಿಸುತ್ತಿರುವುದಾಗಿ ಹೇಳಿರುವ ಉತ್ತರ ಕೊರಿಯಾ ಮೃತ ದೇಹವನ್ನು ತನಗೊಪ್ಪಿಸುವಂತೆ ಕೇಳಿಕೊಂಡಿದೆ.
ಉತ್ತರ ಕೊರಿಯಾದಿಂದ ಗಡಿಪಾರಾಗಿ ಸರ್ವಾಧಿಕಾರಿ ತಮ್ಮನ ವಿರೋಧ ಕಟ್ಟಿಕೊಂಡಿದ್ದ ಕಿಮ್ ಜಾಂಗ್ ನಾಮ್ ಹೆಸರು ಬದಲಿಸಿಕೊಂಡು ಕಿಮ್ ಕೋಲ್ ಹೆಸರಿನಲ್ಲಿ ಜೀವಿಸುತ್ತಿದ್ದರು. ಚೀನಾದ ಆಡಳಿತಕೊಳಪಟ್ಟ ಮಕಾವ್, ಮಲೇಷ್ಯಾ ಮತ್ತು ಸಿಂಗಾಪುರಗಳಲ್ಲಿ ಓಡಾಡಿಕೊಂಡಿದ್ದ ಕಿಮ್ ಜಾಂಗ್ ನಾಮ್ ಚೀನಾದ ರಕ್ಷಣೆ ಪಡೆಯುತ್ತಿದ್ದರು ಎನ್ನಲಾಗಿದೆ.[ಪಾಕಿಸ್ತಾನ-ಅಫ್ಘಾನಿಸ್ತಾನ ಮಧ್ಯೆ 'ಉಗ್ರ' ಸಮರ]
ಕಿಮ್ ಜಾಂಗ್ ನಾಮ್ ಕೊಲೆ ಮಾಡಿದವರಿಗಾಗಿ ಮಲೇಷ್ಯಾ ಪೊಲೀಸರು ಬಲೆ ಬೀಸಿದ್ದು ಈಗಾಗಲೇ ನಾಲ್ವರನ್ನು ಬಂಧಿಸಿದ್ದಾರೆ. ಇದರಲ್ಲಿ ಓರ್ವ ಉತ್ತರ ಕೊರಿಯಾ ಪ್ರಜೆಯಾಗಿದ್ದು ಉಳಿದ ಮೂವರು ಮಲೇಷ್ಯಾ, ಇಂಡೋನೇಷ್ಯಾ, ವಿಯೆಟ್ನಾಂಗೆ ಸೇರಿದ್ದಾರೆ. ಕೃತ್ಯದಲ್ಲಿ ಇನ್ನೂ ನಾಲ್ವರು ಪಾಲ್ಗೊಂಡಿರುವ ಶಂಕೆ ಇದ್ದು ಇವರೆಲ್ಲಾ ಉತ್ತರ ಕೊರಿಯನ್ನರು ಎನ್ನಲಾಗಿದೆ. ಇವರಿಗಾಗಿ ಮಲೇಷ್ಯಾ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ವರದಿಗಳ ಪ್ರಕಾರ ಬಹಳ ಹಿಂದೆಯೇ ತನ್ನ ಅಣ್ಣನನ್ನು ಕೊಲೆ ಮಾಡುವಂತೆ ಕಿಮ್ ಜಾಂಗ್ ಗೂಢಚರರಿಗೆ ಸೂಚನೆ ನೀಡಿದ್ದರು. ಈ ಹಿಂದೆ 2011ರಲ್ಲೂ ಕಿಮ್ ಜಾಂಗ್ ನಾಮ್ ಕೊಲೆಗೆ ಪ್ರಯತ್ನ ನಡೆದಿತ್ತು. ಆದರೆ ಅವತ್ತು ಬದುಕುಳಿದಿದ್ದ ನಮ್ ಸೋಮವಾರ ಸಾವನ್ನಪ್ಪಿದ್ದಾರೆ.
ಕೊಲೆಯಲ್ಲಿ ಉತ್ತರ ಕೊರಿಯಾ ಗೂಢಚರರ ಕೈವಾಡ ಇರುವ ಸಾಧ್ಯತೆ ಇರುವುದರಿಂದ ಕೊಲೆಯನ್ನು ಸುಲಭವಾಗಿ ಬೇಧಿಸಲು ಸಾಧ್ಯವಾಗುತ್ತಿಲ್ಲ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications