ಶ್ರೀಲಂಕಾ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭ: ಇಲ್ಲಿಯವರೆಗೆ ನಡೆದಿದ್ದೇನು?

ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ಪರಿಸ್ಥಿತಿಯ ನಡುವೆ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ದೇಶದಿಂದ ಪಲಾಯನ ಮಾಡಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನೂತನ ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆ ಚುರುಕುಗೊಂಡಿದೆ. ಗಂಭೀರ ಆರ್ಥಿಕ ಮತ್ತು ರಾಜಕೀಯ ಪ್ರಕ್ಷುಬ್ಧತೆಯಿಂದ ಪ್ರಚೋದಿಸಲ್ಪಟ್ಟ ಸಾಮೂಹಿಕ ಪ್ರತಿಭಟನೆಗಳ ನಡುವೆ ಗೊಟಬಯ ರಾಜೀನಾಮೆ ನೀಡಿದರು. ಹೀಗಾಗಿ ಇಂದು ಶ್ರೀಲಂಕಾದ ಸಂಸತ್ತಿನಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡಲು ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ.

225 ಸದಸ್ಯರ ಸಂಸತ್ತು ಜುಲೈ 20 ರಂದು ರಹಸ್ಯ ಮತದಾನದ ಮೂಲಕ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಿದೆ ಎಂದು ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಶುಕ್ರವಾರ ತಿಳಿಸಿದ್ದಾರೆ. 1978 ರಿಂದ ಅಧ್ಯಕ್ಷರ ಇತಿಹಾಸದಲ್ಲಿ ಎಂದಿಗೂ ಸಂಸತ್ತು ಅಧ್ಯಕ್ಷರನ್ನು ಆಯ್ಕೆ ಮಾಡಲು ಮತ ಚಲಾಯಿಸಿಲ್ಲ. ಆದರೆ ಈ ಬಾರಿ ಮತದಾನ ನಡೆಯಲಿದೆ. ಆಯ್ಕೆಯಾಗುವ ಹೊಸ ಅಧ್ಯಕ್ಷರು ನವೆಂಬರ್ 2024 ರವರೆಗೆ ಗೊಟಬಯ ರಾಜಪಕ್ಸೆ ಅವರ ಉಳಿದ ಅಧಿಕಾರಾವಧಿಯನ್ನು ಪೂರೈಸಲಿದ್ದಾರೆ.

ಅಲ್ಲಿಯವರೆಗೆ, ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಹಂಗಾಮಿ ಅಧ್ಯಕ್ಷರಾಗಿರುತ್ತಾರೆ. ಆದರೆ, ಪ್ರತಿಭಟನಾಕಾರರು ಅವರನ್ನೂ ಹೋಗಬೇಕೆಂದು ಬಯಸಿದ್ದರು. ಶುಕ್ರವಾರ ಹಂಗಾಮಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, "ಸಂವಿಧಾನವನ್ನು ರಕ್ಷಿಸಲು ನಾನು ಬದ್ಧನಾಗಿದ್ದೇನೆ" ಎಂದು ಹೇಳಿದ ವಿಕ್ರಮಸಿಂಘೆ, ಅಧ್ಯಕ್ಷರ ಅಧಿಕಾರವನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ಸಾರ್ವಜನಿಕರಿಗೆ ಭರವಸೆ ನೀಡುವ ಕ್ರಮಗಳನ್ನು ಘೋಷಿಸಿದರು.

Election process for Sri Lankas new president begins: What has happened so far?

ಆಳವಾದ ಆರ್ಥಿಕ ಬಿಕ್ಕಟ್ಟು ಶ್ರೀಲಂಕಾವನ್ನು ದಿವಾಳಿ ಮಾಡಿದೆ. ಆಹಾರ, ಔಷಧ ಮತ್ತು ಇಂಧನಕ್ಕಾಗಿ ಪಾವತಿಸಲು ಶ್ರೀಲಂಕಾ ಹೆಣಗಾಡುತ್ತಿದೆ. ಹೀಗಾಗಿ ಹಲವು ದಿನಗಳಿಂದ ಗೊಟಬಯ ಆಡಳಿತ ಬದಲಾವಣೆಗೆ ಒತ್ತಾಯಿಸಿ ಸಾವಿರಾರು ಪ್ರತಿಭಟನಾಕಾರರು ತೀವ್ರ ಪ್ರತಿಭಟನೆಗೆ ಮುಂದಾಗಿದ್ದಾರೆ. ರಾಜಪಕ್ಸೆ ಅವರ ರಾಜೀನಾಮೆ ಬಳಿಕ ಜನರು ಸಂಭ್ರಮಿಸಿದ್ದಾರೆ.

ಶ್ರೀಲಂಕಾದಲ್ಲಿನ ಬಿಕ್ಕಟ್ಟು ಹೇಗೆ ತೆರೆದುಕೊಂಡಿತು ಎಂಬುದನ್ನು ಇಲ್ಲಿ ಹಿಂತಿರುಗಿ ನೋಡೋಣ:

ಮಾರ್ಚ್ 31, 2022: ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಪ್ರತಿಭಟಿಸಲು ಪ್ರತಿಭಟನಾಕಾರರು ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ಖಾಸಗಿ ನಿವಾಸಕ್ಕೆ ಮೆರವಣಿಗೆ ನಡೆಸಿದರು.

ಏಪ್ರಿಲ್ 3: ಗೊಟಬಯ ಅವರು ತಮ್ಮ ಕಿರಿಯ ಸಹೋದರ ಬಸಿಲ್ ರಾಜಪಕ್ಸೆ ಅವರನ್ನು ಹಣಕಾಸು ಸಚಿವರನ್ನಾಗಿ ಒಳಗೊಂಡಿರುವ ಸಂಪುಟವನ್ನು ವಿಸರ್ಜಿಸಿದರು. ಹಿರಿಯ ಸಹೋದರ ಮಹಿಂದ ರಾಜಪಕ್ಸೆ ಅವರು ಪ್ರಧಾನಿಯಾಗಿ ಮುಂದುವರಿದರು.

Election process for Sri Lankas new president begins: What has happened so far?

ಏಪ್ರಿಲ್ 9: ರಾಜಕೀಯ ಸುಧಾರಣೆಗಳಿಗೆ ದಾರಿ ಮಾಡಿಕೊಡಲು ಮತ್ತು ಅಧ್ಯಕ್ಷರನ್ನು ತೆಗೆದುಹಾಕುವ ಗುರಿಯೊಂದಿಗೆ ಗೊಟಬಯ ಅವರ ಕಚೇರಿಯ ಹೊರಗೆ ಧರಣಿ ಪ್ರತಿಭಟನೆಗಳು ಉಲ್ಬಣಗೊಂಡವು.

ಮೇ 9: ಸರ್ಕಾರದ ಪರ ಮತ್ತು ವಿರೋಧಿ ಪ್ರತಿಭಟನಾಕಾರರ ನಡುವೆ ವ್ಯಾಪಕ ಘರ್ಷಣೆಯ ನಂತರ, ಪ್ರಧಾನಿ ಮಹಿಂದ ರಾಜಪಕ್ಸೆ ರಾಜೀನಾಮೆ ನೀಡಿದರು. ದೇಶಾದ್ಯಂತ ಹಿಂಸಾಚಾರದಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಸುಮಾರು 300 ಮಂದಿ ಗಾಯಗೊಂಡಿದ್ದಾರೆ.

ಮೇ 10: ಪ್ರತಿಭಟನಾಕಾರರು ಕರ್ಫ್ಯೂ ಅನ್ನು ಧಿಕ್ಕರಿಸುತ್ತಾರೆ. ರಕ್ಷಣಾ ಸಚಿವಾಲಯ ಗುಂಡು ಹಾರಿಸುವ ಆದೇಶಗಳನ್ನು ಹೊರಡಿಸುತ್ತದೆ.

ಜೂನ್ 27: ಆರ್ಥಿಕ ಬಿಕ್ಕಟ್ಟು ತೀವ್ರಗೊಳ್ಳುತ್ತಿದ್ದಂತೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇಂಧನ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ.

ಜುಲೈ 9: ನೂರಾರು ಪ್ರತಿಭಟನಾಕಾರರು ಅಧ್ಯಕ್ಷರ ಭವನಕ್ಕೆ ಹಾಗೂ ಮನೆಗೆ ನುಗ್ಗಿದರು. ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಮನೆಗೆ ಬೆಂಕಿ ಹಚ್ಚಲಾಯಿತು ಇಬ್ಬರೂ ಕೆಳಗಿಳಿಯುವವರೆಗೂ ಪ್ರಮುಖ ಸರ್ಕಾರಿ ಕಟ್ಟಡಗಳನ್ನು ಆಕ್ರಮಿಸುವುದಾಗಿ ಪ್ರತಿಭಟನಾಕಾರರು ಘೋಷಿಸಿದರು. ಅಧ್ಯಕ್ಷರ ನಿವಾಸದ ಕೊಳದಲ್ಲಿ ನಾಗರಿಕರು ಈಜುವುದು, ಜಿಮ್ ಅನ್ನು ಬಳಸುವುದು ಇತ್ಯಾದಿಗಳ ಫೋಟೋಗಳು ಪ್ರಪಂಚದಾದ್ಯಂತ ಸಂಚಲನವನ್ನು ಸೃಷ್ಟಿಸುತ್ತವೆ.

ಜುಲೈ 9: ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಅವರು ಜುಲೈ 13 ರಂದು ರಾಜೀನಾಮೆ ನೀಡಲು ಯೋಜಿಸಿದ್ದಾರೆ ಎಂದು ಸಂಸದೀಯ ಸ್ಪೀಕರ್‌ಗೆ ತಿಳಿಸಿದರು. ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ರಾಜೀನಾಮೆ ನೀಡಲು ಸಿದ್ಧರಿದ್ದಾರೆ ಎಂದು ಹೇಳಿದರು.

ಜುಲೈ 12: ಗೊಟಬಯ ಅವರ ಸಹೋದರ ಮತ್ತು ಮಾಜಿ ಹಣಕಾಸು ಸಚಿವ ಬಸಿಲ್ ರಾಜಪಕ್ಸೆ ಅವರು ದೇಶವನ್ನು ತೊರೆಯಲು ಪ್ರಯತ್ನಿಸಿದರು. ಆದರೆ ಅವರನ್ನು ತಡೆಯಲಾಯಿತು.

ಜುಲೈ 13: ಗೊಟಬಯ ಪತ್ನಿ ಮತ್ತು ವೈಯಕ್ತಿಕ ಭದ್ರತೆಗಳೊಂದಿಗೆ ಶ್ರೀಲಂಕಾದಿಂದ ಮಾಲ್ಡೀವ್ಸ್‌ಗೆ ಪಲಾಯನ ಮಾಡುತ್ತಾರೆ. ಪ್ರತಿಭಟನಾಕಾರರು ಪ್ರಧಾನಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿ ಇಬ್ಬರು ನಾಯಕರ ರಾಜೀನಾಮೆಗೆ ಒತ್ತಾಯಿಸಿದರು.

ಜುಲೈ 14: ಗೋಟಾಬಯ ಅವರು ಸಿಂಗಾಪುರಕ್ಕೆ ಹಾರಿದರು, ಅಲ್ಲಿಂದ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ಕಳುಹಿಸಿದರು.

ಜುಲೈ 15: ರಾಜಪಕ್ಸೆ ಅವರ ರಾಜೀನಾಮೆಯನ್ನು ಅಧಿಕೃತವಾಗಿ ಅಂಗೀಕರಿಸಲಾಗಿದೆ ಮತ್ತು ಮುಂದಿನ ವಾರದಲ್ಲಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದು ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಘೋಷಿಸಿದರು. ಹಂಗಾಮಿ ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘೆ ಪ್ರಮಾಣ ವಚನ ಸ್ವೀಕರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+