ಬೈಡನ್ ಸಂಪುಟದಲ್ಲಿ ಮತ್ತೊಬ್ಬ ಭಾರತೀಯೆ; ಆರತಿ ಪ್ರಭಾಕರ್ ವಿಜ್ಞಾನ ಸಲಹೆಗಾರ್ತಿ
ವಾಷಿಂಗ್ಟನ್, ಜೂನ್ 22: ಭಾರತ ಮೂಲದ ಡಾ. ಆರತಿ ಪ್ರಭಾಕರ್ ಅವರನ್ನು ಅಮೆರಿಕ ಸರಕಾರದ ವಿಜ್ಞಾನ ಸಲಹೆಗಾರ್ತಿಯಾಗಿ ಜೋ ಬೈಡನ್ ನಾಮನಿರ್ದೇಶನ ಮಾಡಿದ್ದಾರೆ.
"ಆಫೀಸ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಪಾಲಿಸಿಯ (OSTP) ನಿರ್ದೇಶಕಿಯಾಗಿ ಸೇವೆ ಸಲ್ಲಿಸಲು ಮತ್ತು ಅಧ್ಯಕ್ಷರಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯಕಿಯಾಗಿ ಡಾ. ಆರತಿ ಪ್ರಭಾಕರ್ ಅವರನ್ನು ನಾಮನಿರ್ದೇಶನ ಮಾಡುವ ಉದ್ದೇಶವನ್ನು ಅಧ್ಯಕ್ಷ ಬೈಡನ್ ಇಂದು ಪ್ರಕಟಿಸಿದ್ದಾರೆ," ಎಂದು ಶ್ವೇತಭನವದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
"ಭಾರತೀಯ ಅಮೆರಿಕನ್ ಸಮುದಾಯದವರು ಒಎಸ್ಟಿಪಿಯನ್ನು ಮುನ್ನಡೆಸಿ ವಿಜ್ಞಾನ, ತಂತ್ರಜ್ಞಾನಕ್ಕೆ ಪುಷ್ಟಿ ಕೊಡುತ್ತಾರೆ. ನಮ್ಮ ಅತ್ಯಂತ ಕಠಿಣ ಸವಾಲುಗಳಿಗೆ ಪರಿಹಾರ ಹುಡುಕುತ್ತಾರೆ, ಅಸಾಧ್ಯವಾದದ್ದನ್ನು ಸಾಧ್ಯವಾಗಿಸುತ್ತಾರೆ" ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಇದೇ ವೇಳೆ ಭಾರತೀಯ ಅಮೆರಿಕನ್ ಸಮುದಾಯದವರ ಗುಣಗಾನ ಮಾಡಿದ್ದಾರೆ.

ಆರತಿ ಪ್ರಭಾಕರ್ ಯಾವ ಊರಿನವರು?
1959, ಫೆಬ್ರವರಿ 2ರಂದು ದೆಹಲಿಯಲ್ಲಿ ಹುಟ್ಟಿದ ಆರತಿ ಪ್ರಭಾಕರ್ ಮೂರು ವರ್ಷದವರಿದ್ದಾಗ ಅಮೆರಿಕಕ್ಕೆ ತಮ್ಮ ಕುಟುಂಬದ ಜೊತೆ ಹೋಗಿ ಅಲ್ಲಿಯೇ ನೆಲಸಿದ್ಧಾರೆ. ಶಿಕಾಗೋದಲ್ಲಿ ಬಾಲ್ಯ ಕಳೆದ ಅವರು ೧೦ನೇ ವಯಸ್ಸಿನಲ್ಲಿ ಟೆಕ್ಸಾಸ್ ರಾಜ್ಯಕ್ಕೆ ಹೋದರು. ಅಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದರು.
ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಆರತಿ ಪ್ರಭಾಕರ್ ಅನ್ವಯಿಕ ಭೌತಶಾಸ್ತ್ರ (Applied Physics) ದಲ್ಲಿ ಪಿಎಚ್ಡಿ ಪಡೆದು ಡಾ. ಆರತಿ ಪ್ರಭಾಕರ್ ಎನಿಸಿದರು. ಇಲ್ಲಿ ಈ ಸಬ್ಜೆಕ್ಟ್ನಲ್ಲಿ ಪಿಎಚ್ಡಿ ಪಡೆದ ಮೊದಲ ಮಹಿಳೆ ಎಂಬ ಗೌರವವೂ ಅಗದ್ದಾಗಿದೆ. ಅದೇ ಶಿಕ್ಷಣ ಸಂಸ್ಥೆಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಎಂಎಸ್ ಕೂಡ ಮಾಡಿದರು.

ಡಾ. ಆರತಿ ಪ್ರಭಾಕರ್ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಾಕಷ್ಟು ಪಕ್ವತೆ ಮತ್ತು ಅನುಭವ ಹೊಂದಿದ್ದಾರೆ. ಅಮೆರಿಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಟ್ಯಾಂಡರ್ಸ್ ಅಂಡ್ ಟೆಕ್ನಾಲಜಿ ಸಂಸ್ಥೆಯ ಮುಖ್ಯಸ್ಥೆಯಾಗಿ ಕೆಲಸ ಮಾಡಿದ್ದಾರೆ. ಅಂಥದ್ದೊಂದು ಹುದ್ದೆ ನಿಭಾಯಿಸಿದ ಮೊದಲ ಮಹಿಳೆ ಅವರು. ರಕ್ಷಣಾ ಯೋಜನೆಯ ಡಿಎಆರ್ಪಿಎ ಸಂಸ್ಥೆಯ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ಸ್ಟೀಲ್ತ್ ಏರ್ಕ್ರಾಫ್ಟ್ (Stealth Aircraft) ಮೊದಲಾದ ಹೊಸ ತಂತ್ರಜ್ಞಾನ ಅಭಿವೃದ್ಧಿಯಾಗಿದ್ದು ಈ ಸಂಸ್ಥೆಯಲ್ಲೇ. ಸ್ಟೀಲ್ತ್ ಏರ್ಕ್ರಾಫ್ಟ್ ಎಂದರೆ ರಾಡಾರ್ ಕಣ್ಣಿಗೆ ಬೀಳದಂತೆ ಮುನ್ನುಗ್ಗಿ ಹೋಗಬಲ್ಲ ಯುದ್ಧವಿಮಾನ.
ಕ್ಯಾಬಿನೆಟ್ ಸ್ಥಾನ:
ಜೋ ಬೈಡನ್ ಸರಕಾರದ ಸಂಪುಟದಲ್ಲಿ ಡಾ. ಆರತಿ ಪ್ರಭಾಕರ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ಸಿಕ್ಕಿದೆ. ಬೈಡನ್ ಸಂಪುಟಕ್ಕೆ ಈಗ ಇಬ್ಬರು ಭಾರತೀಯ ಮೂಲದವರು ಸಿಕ್ಕಂತಾಗಿದೆ. ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿದ್ದಾರೆ.
(ಒನ್ಇಂಡಿಯಾ ಸುದ್ದಿ)
Recommended Video
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications