ಆರ್ಥಿಕ ಕುಸಿತ: ಮಂಗಳವಾರದಿಂದ ಗ್ರೀಸ್ ದಿವಾಳಿ ರಾಷ್ಟ್ರ?
ಅಥೆನ್ಸ್, ಜೂ. 29 : ಗ್ರೀಸ್ ಪಡೆದುಕೊಂಡಿರುವ ಸಾಲದ ಮರುಪಾವತಿ ಅವಧಿ ಜೂನ್ 30 ಕ್ಕೆ ಕೊನೆಯಾಗಲಿದ್ದು ನಂತರ ಯುರೋ ರಾಷ್ಟ್ರಗಳು ಗ್ರೀಸ್ ನ್ನು ದಿವಾಳಿ ದೇಶ ಎಂದು ಘೋಷಿಸುವ ಸಾಧ್ಯತೆ ಇದೆ.
ಆರ್ಥಿಕ ಪತನಕ್ಕೆ ಸಿಲುಕಿರುವ ಗ್ರೀಸ್ ನಲ್ಲಿ ಒಂದು ವಾರಗಳ ಕಾಲ ಬ್ಯಾಂಕ್ ಬಂದ ಮಾಡಲಾಗಿತ್ತದೆ. ಅಲ್ಲದೇ ಎಟಿಎಂನಿಂದ ಹಣ ತೆಗೆಯುವುದಕ್ಕೂ ನಿರ್ಬಂಧ ಹೇರಲಾಗಿದೆ. ಪರಿಣಾಮ ಜನರು ಒಮ್ಮೆಲೇ ಎಟಿಎಂಗಳ ಮೇಲೆ ಮುಗಿಬಿದ್ದಿದ್ದಾರೆ. ಕೆಲ ಎಟಿಎಂಗಳು ಮಾತ್ರ ಕಾರ್ಯನಿರ್ವಹಣೆ ಮಾಡುತ್ತಿದ್ದು ಮಂಗಳವಾರದಿಂದ ಎಲ್ಲವೂ ಬಂದ್ ಆಗಲಿದೆ.[ಗ್ರೀಸ್ ಸುಳಿಗೆ ಸಿಕ್ಕ ಷೇರು ಮಾರುಕಟ್ಟೆ ಪಾತಾಳಕ್ಕೆ]

ಜುಲೈ 6ರವರೆಗೆ ಬ್ಯಾಂಕ್ಗಳು ಬಾಗಿಲು ತೆರೆಯಲ್ಲ. ವಿದೇಶಿ ಪ್ರವಾಸಿಗರು, ಗ್ರೀಕ್ ಆರ್ಥಿಕತೆಯ ಪ್ರಮುಖ ಸಂಸ್ಥೆಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಗ್ರೀಸ್ ಸರ್ಕಾರದ ಪ್ರಕಟಣೆ ತಿಳಿಸಿದೆ.
ಗ್ರೀಕ್ ಪ್ರಧಾನ ಮಂತ್ರಿ ಅಲೆಕ್ಸಿಸ್ ಸಿಪ್ರಸ್, ಬ್ಯಾಂಕಿನಲ್ಲಿ ಹಣ ಇಟ್ಟವರು ಯಾವುದೇ ಆತಂಕಕ್ಕೀಡಾಗಬೇಕಿಲ್ಲ ಎಂದು ಜನತೆಗೆ ಅಭಯ ನೀಡಿದ್ದಾರೆ. ಈ ಪರಿಸ್ಥಿತಿಯನ್ನು ತಾಳ್ಮೆಯಿಂದ ಎದುರಿಸುವಂತೆ ಕೋರಿದ್ದಾರೆ.
ಯಾಕೆ ಹೀಗಾಯಿತು?
ಪ್ರಪಂಚದಾದ್ಯಂತ 1930ರ ಆರ್ಥಿಕ ಕುಸಿತ ಪರಿಸ್ಥಿತಿ ಎದಿರಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಯುರೊ ಕರೆನ್ಸಿ ವಲಯದ ಸದಸ್ಯ ರಾಷ್ಟ್ರಗಳು ಗ್ರೀಸ್ಗೆ ನೀಡಿದ್ದ ಸಾಲ ಮರುಪಾವತಿ ಗಡುವು ಮಂಗಳವಾರಕ್ಕೆ ಮುಕ್ತಾಯವಾಗಲಿದ್ದು ದಿವಾಳಿ ರಾಷ್ಟ್ರ ಎಂದು ಘೋಷಣೆ ಮಾಡುವ ಸಾಧ್ಯೆತೆ ಇದೆ. ಮತ್ತೆ ಸಾಲ ನೀಡಬೇಕಾದರೆ ಮಿತವ್ಯಯ ಮಾರ್ಗಗಳನ್ನು ಅನುಸಾರ ಮಾಡಬೇಕಾಗುತ್ತದೆ ಎಂದು ಸಾಲ ನೀಡಿದ ರಾಷ್ಟ್ರಗಳು ಈಗಾಗಲೇ ತಿಳಿಸಿವೆ.
ಆರ್ಥಿಕ ಪತನ ಭಾರತದ ಷೇರು ಮಾರುಕಟ್ಟೆ ಸೇರಿದಂತೆ ಏಷ್ಯಾ ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ. ಸೋಮವಾರ ಬೆಳಗ್ಗೆಯಿಂದಲೇ ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಉಂಟಾಗಿತ್ತು.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications