Windows Systems: ಜಗತ್ತಿನಾದ್ಯಂತ ವಿಂಡೋಸ್ ಕಂಪ್ಯೂಟರ್ ರೀಸ್ಟಾರ್ಟ್ ಸಮಸ್ಯೆ
ಜಗತ್ತಿನಾದ್ಯಂತ ಲಕ್ಷಾಂತರ ವಿಂಡೋಸ್ ಬಳಕೆದಾರರು ಬ್ಲೂ ಸ್ಕ್ರೀನ್ ಆಫ್ ಡೆತ್ (BSOD) ದೋಷವನ್ನು ಎದುರಿಸುತ್ತಿದ್ದಾರೆ, ಇದರಿಂದ ಪರ್ಸನಲ್ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಇದ್ದಕ್ಕಿದ್ದಂತೆ ಆಫ್ ಆಗಲು ಅಥವಾ ರೀಸ್ಟಾರ್ಟ್ ಆಗಲು ಕಾರಣವಾಗುತ್ತದೆ. ಕ್ರೌಡ್ಸ್ಟ್ರೈಕ್ (Crowdstrike) ಅಪ್ಡೇಟ್ನಿಂದ ಈ ಸಮಸ್ಯೆ ಉಂಟಾಗುತ್ತಿದೆ ಎಂದು ಮೈಕ್ರೋಸಾಫ್ಟ್ ಮಾಹಿತಿ ನೀಡಿದೆ.
ಈ ತಾಂತ್ರಿಕ ಸಮಸ್ಯೆಯಿಂದಾಗಿ ಜಗತ್ತಿನಾದ್ಯಂತ ಸಾಕಷ್ಟು ಸಮಸ್ಯೆ ಉಂಟಾಗಿದೆ. ಕಂಪನಿಗಳು, ಬ್ಯಾಂಕ್ಗಳು ಮತ್ತು ಸರ್ಕಾರಿ ಕಚೇರಿಗಳ ಮೇಲೆ ಭಾರಿ ಪರಿಣಾಮ ಬೀರಿದೆ. ವಿಮಾನಗಳು ಟೇಕಾಫ್ ಆಗಿಲ್ಲ, ಮಾಹಿತಿ ನೀಡಲು ವಿಮಾನಯಾನ ಸಂಸ್ಥೆಗಳು ಎಕ್ಸ್ನಲ್ಲಿ ಸಂದೇಶ ಹಂಚಿಕೊಂಡಿವೆ.

ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಜನ ಸಮಸ್ಯೆಯನ್ನು ಹಂಚಿಕೊಂಡಿದ್ದು, ವಿಂಡೋಸ್ ರೀಸ್ಟಾರ್ಟ್ ಆಗುತ್ತಿರುವ ಚಿತ್ರಗಳನ್ನು ಪೋಸ್ಟ್ ಮಾಡಿದ್ದು, "ವಿಂಡೋಸ್ ಸರಿಯಾಗಿ ಲೋಡ್ ಆಗಿಲ್ಲ ಎಂದು ತೋರುತ್ತಿದೆ. ನೀವು ಮರುಪ್ರಾರಂಭಿಸಲು ಮತ್ತು ಮತ್ತೆ ಪ್ರಯತ್ನಿಸಲು ಬಯಸಿದರೂ ಪ್ರಯೋಜನವಾಗಿಲ್ಲ" ಎಂದರು.
ಇದನ್ನು ಬ್ಲೂ ಸ್ಕ್ರೀನ್ ದೋಷಗಳು, ಕಪ್ಪು ಪರದೆಯ ದೋಷಗಳು ಅಥವಾ ಸ್ಟಾಪ್ (STOP) ಕೋಡ್ ದೋಷಗಳು ಎಂದೂ ಕರೆಯಲಾಗುತ್ತದೆ. ಅನಿರೀಕ್ಷಿತವಾಗಿ ಕಂಪ್ಯೂಟರ್ ಅನ್ನು ಸ್ಥಗಿತಗೊಳಿಸಿದಾಗ ಅಥವಾ ರೀಸ್ಟಾರ್ಟ್ ಮಾಡುವ ಸಂದರ್ಭದಲ್ಲಿ ಈ ಸಮಸ್ಯೆ ಉಂಟಾಗಿದೆ. "ನಿಮ್ಮ ಕಂಪ್ಯೂಟರ್ಗೆ ಹಾನಿಯಾಗುವುದನ್ನು ತಡೆಯಲು ವಿಂಡೋಸ್ ಅನ್ನು ಮುಚ್ಚಲಾಗಿದೆ" ಅಥವಾ ಅಂತಹುದೇ ಅಧಿಸೂಚನೆಯನ್ನು ಸೂಚಿಸುವ ಸಂದೇಶವನ್ನು ಪರದೆ ಮೇಲೆ ನೋಡಬಹುದಾಗಿದೆ.
ಸಮಸ್ಯೆಗೆ ಕಾರಣಗಳೇನು?
ಈ ದೋಷಗಳು ಹಾರ್ಡ್ವೇರ್ ಅಥವಾ ಸಾಫ್ಟ್ವೇರ್ ಸಮಸ್ಯೆಗಳಿಂದ ಉಂಟಾಗಬಹುದು. ನೀವು ಬ್ಲೂ ಸ್ಕ್ರೀನ್ ದೋಷವನ್ನು ಎದುರಿಸಿದರೆ, ನಿಮ್ಮ ಅನ್ನು ಸ್ಥಗಿತಗೊಳಿಸಲು ಪ್ರಯತ್ನಿಸಿ, ಹೊಸ ಹಾರ್ಡ್ವೇರ್ ಅನ್ನು ತೆಗೆದುಹಾಕಿ ಮತ್ತು ಮರುಪ್ರಾರಂಭಿಸಲು ಪ್ರಯತ್ನಿಸಿ. ಮರುಪ್ರಾರಂಭಿಸಲು ತೊಂದರೆ ಉಂಟಾದರೆ, ನೀವು ಸುರಕ್ಷಿತ ಮೋಡ್ನಲ್ಲಿ ನಿಮ್ಮ ಪಿಸಿಯನ್ನು ಪ್ರಾರಂಭಿಸಬಹುದು. ವಿವರವಾದ ಹಂತಗಳಿಗಾಗಿ, ವಿಂಡೋಸ್ನಲ್ಲಿ ಸುರಕ್ಷಿತ ಮೋಡ್ನಲ್ಲಿ ನಿಮ್ಮ ಪಿಸಿಯನ್ನು ಪ್ರಾರಂಭಿಸುವ ಸೂಚನೆಗಳನ್ನು ನೋಡಬಹುದು.
ಈ ಸಮಸ್ಯೆಯನ್ನು ಮೈಕ್ರೋಸಾಫ್ಟ್ ಕಂಪನಿ ಸರಿ ಮಾಡುವುದರಿಂದ ಬಳಕೆದಾರರು ಹೆಚ್ಚು ಆತಂಕಪಡುವ ಅಗತ್ಯವಿಲ್ಲ ಎನ್ನಲಾಗಿದೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications