ಕೊರೊನಾ ನರಕದಿಂದ ಪಾರಾಗಲು, ನೆಮ್ಮದಿ ನೆಲೆಸಲು ಇನ್ನೂ 10 ವರ್ಷ ಬೇಕೆ?
ಬ್ರಿಟನ್, ಏಪ್ರಿಲ್ 29: ಡೆಡ್ಲಿ ಕೊರೊನಾ ವೈರಸ್ ಸೋಂಕಿತರ ಪ್ರಮಾಣ ಈಗಾಗಲೇ 30 ಲಕ್ಷ ಗಡಿ ದಾಟಿದೆ. ಸಾವಿನ ಸಂಖ್ಯೆ ಕೂಡ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಿರುವಾಗಲೇ, ಇಡೀ ವಿಶ್ವಕ್ಕೆ ವ್ಯಾಪಿಸಿರುವ ಕೊರೊನಾಗೆ ಕೊನೆ ಎಂದು? ಎಂಬ ಪ್ರಶ್ನೆ ಎಲ್ಲರ ತಲೆಯಲ್ಲೂ ಕೊರೆಯುತ್ತಿದೆ.
Recommended Video
ಕೊರೊನಾ ಅಟ್ಟಹಾಸ ನಿಯಂತ್ರಣಕ್ಕೆ ಬರುವುದು ಯಾವಾಗ.? ಈ ನರಕದಿಂದ ಪಾರಾಗಿ ಜಗತ್ತು ಮತ್ತೆ ಮೊದಲಿನಂತೆ ಆಗುವುದು ಯಾವಾಗ.? ವಿಶ್ವದಲ್ಲಿ ಮತ್ತೆ ನೆಮ್ಮದಿ ನೆಲೆಸಲು ಎಷ್ಟು ವರ್ಷ ಬೇಕು.? ಈ ಪ್ರಶ್ನೆಗಳಿಗೆ ನಿಖರವಾದ ಉತ್ತರ ಇಲ್ಲ. ಆದರೆ, ಕೋವಿಡ್-19ಗೆ ಪರಿಣಾಮಕಾರಿ ಲಸಿಕೆ ಸಿಗುವವರೆಗೂ ಯಾವುದೂ ಮತ್ತೆ ಮೊದಲಿನಂತಾಗಲು ಸಾಧ್ಯವೇ ಇಲ್ಲ ಎಂಬುದನ್ನು ತಳ್ಳಿಹಾಕುವಂತಿಲ್ಲ.
ಈ ನಡುವೆ ''ಜಗತ್ತು ಮತ್ತೆ ಮೊದಲಿನಂತಾಗಲು ಕನಿಷ್ಟ ಅಂದರೂ 5 ರಿಂದ 10 ವರ್ಷ ಬೇಕಾಗಬಹುದು'' ಎಂದು ಇಂಟರ್ ನ್ಯಾಷನಲ್ ರೆಸ್ಕ್ಯೂ ಕಮಿಟಿಯ ಅಧ್ಯಕ್ಷ ಮತ್ತು ಸಿಇಒ ಡೇವಿಡ್ ಮಿಲಿಬ್ಯಾಂಡ್ ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಲಸಿಕೆಯನ್ನು ಬೇಗ ಕಂಡುಹಿಡಿಯುವಂತೆ ತಮ್ಮ ಸಂಸ್ಥೆ ಸಹಾಯ ಮಾಡಲಿದೆ ಎಂದೂ ತಿಳಿಸಿದ್ದಾರೆ.

ವಿಜ್ಞಾನಿಗಳ ಆಘಾತಕಾರಿ ಹೇಳಿಕೆ
ಕೊರೊನಾ ವೈರಸ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಪ್ರತಿ ವರ್ಷ ಅದು 'ಸೀಸನಲ್ ಫ್ಲೂ' ತರಹ ಮರಳಬಹುದು ಎಂದು ವಿಜ್ಞಾನಿಗಳು ಹೇಳಿದ ಬಳಿಕ, ''ಜಗತ್ತು ಮತ್ತೆ ಮೊದಲಿನಂತಾಗಲು 5-10 ವರ್ಷ ಬೇಕಾಗಬಹುದು'' ಎಂದು ಡೇವಿಡ್ ಮಿಲಿಬ್ಯಾಂಡ್ ಆತಂಕ ವ್ಯಕ್ತಪಡಿಸಿದ್ದಾರೆ.

1 ಬಿಲಿಯನ್ ಜನರಿಗೆ ಸೋಂಕು?
ಡೇವಿಡ್ ಮಿಲಿಬ್ಯಾಂಡ್ ನೇತೃತ್ವದ ಇಂಟರ್ ನ್ಯಾಷನಲ್ ರೆಸ್ಕ್ಯೂ ಕಮಿಟಿ ಸದ್ಯ 34 ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಂಪೀರಿಯಲ್ ಕಾಲೇಜ್ ಆಫ್ ಲಂಡನ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಇಂಟರ್ ನ್ಯಾಷನಲ್ ರೆಸ್ಕ್ಯೂ ಕಮಿಟಿ ನಡೆಸಿರುವ ಸಂಶೋಧನೆಯೊಂದರ ಪ್ರಕಾರ, ವಿಶ್ವದಲ್ಲಿ 500 ಮಿಲಿಯನ್ ನಿಂದ 1 ಬಿಲಿಯನ್ ಜನರಿಗೆ ಕೊರೊನಾ ಸೋಂಕು ತಗುಲಲಿದ್ದು, 1.5 ಮಿಲಿಯನ್ ನಿಂದ 3 ಮಿಲಿಯನ್ ಜನರು ಸಾವನ್ನಪ್ಪುತ್ತಾರೆ ಎಂದು ಅಂದಾಜಿಸಲಾಗಿದೆ.

ಲಸಿಕೆ ಬರಬೇಕು
''ಕೋವಿಡ್-19 ಗೆ ಪರಿಣಾಮಕಾರಿ ಲಸಿಕೆ ಸಿಗುವವರೆಗೂ, ಜಗತ್ತಿನಲ್ಲಿ ನೆಮ್ಮದಿ ನೆಲೆಸುವುದಿಲ್ಲ'' ಎಂದು ಕಳೆದ ವಾರವಷ್ಟೇ ಪ್ರೊಫೆಸರ್ ಕ್ರಿಸ್ ವಿಟ್ಟಿ ಹೇಳಿದ್ದರು.

ಲಕ್ಷಣ ಇಲ್ಲದ ಸೋಂಕು ಪೀಡಿತರಿಂದ ಆಪತ್ತು
''ಸಾರ್ಸ್' ನಂತೆ ಈ ನೋವೆಲ್ ಕೊರೊನಾ ವೈರಸ್ ಮಾಯವಾಗುವುದಿಲ್ಲ. ಯಾಕಂದ್ರೆ, ಕೋವಿಡ್-19 ರೋಗ ಹೊಂದಿದ್ದರೂ, ಎಷ್ಟೋ ಮಂದಿಯಲ್ಲಿ ರೋಗದ ಲಕ್ಷಣಗಳು ಕಾಣಿಸುತ್ತಿಲ್ಲ. ಅಂಥವರು ಸೈಲೆಂಟ್ ಆಗಿ ವೈರಸ್ ಅನ್ನು ಹರಡುತ್ತಲೇ ಇರುತ್ತಾರೆ'' ಎಂದು ಬೀಜಿಂಗ್ ನಲ್ಲಿ ಚೀನಾದ ವೈರಲ್ ಮತ್ತು ವೈದ್ಯಕೀಯ ಸಂಶೋಧಕರು ತಿಳಿಸಿದ್ದರು. ಮತ್ತೊಂದು ಬೆಚ್ಚಿ ಬೀಳುವ ಅಂಶ ಏನಂದರೆ, ಚೀನಾದಲ್ಲಿ ಈಗಲೂ ಡಜನ್ ಗಟ್ಟಲೆ ಲಕ್ಷಣಗಳು ಹೊಂದಿಲ್ಲದ ಸೋಂಕು ಪೀಡಿತರು ಪತ್ತೆಯಾಗುತ್ತಿದ್ದಾರೆ.
-
ಬೇಸಿಗೆಯಲ್ಲಿ ಸೌತೆಕಾಯಿ ತಿನ್ನಲು ಟಾಪ್ 5 ಕಾರಣಗಳು: ಆರೋಗ್ಯಕ್ಕೆ ಅದ್ಭುತ ಲಾಭಗಳು -
ಮೊಡವೆ ಕಲೆಗಳನ್ನು ಸಂಪೂರ್ಣವಾಗಿ ತೆಗೆದುಹಾಕುವ ಸಿಂಪಲ್ ಟ್ರಿಕ್ಸ್ : ಬೇಸಿಗೆಯಲ್ಲಿ ಅನುಸರಿಸಿ ಈ 9 ಟಿಪ್ಸ್ -
ಮನೆ ಕಟ್ಟುವಾಗ ವಾಸ್ತು ಪಾಲಿಸದಿದ್ದರೆ ಏನಾಗುತ್ತದೆ? ಇಲ್ಲಿವೆ 5 ಪ್ರಮುಖ ನಿಯಮಗಳು -
Summer Heat Alert: ಮಕ್ಕಳ ಆರೋಗ್ಯ ಕಾಪಾಡಲು ಪೋಷಕರಿಗೆ 7 ಮುಖ್ಯ ಸಲಹೆಗಳು -
ನಿಮ್ಮ ಮನೆ ದಿಕ್ಕು ಸರಿಯೇ? ರಾಶಿ ಪ್ರಕಾರ ವಾಸ್ತು ಸೂಚನೆಗಳು ಇಲ್ಲಿವೆ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು












Click it and Unblock the Notifications