ಕ್ಯಾನ್ಸರ್ ಪೀಡಿತ ಸೋನಾಲಿ ಬೇಂದ್ರೆಯವರ ಭಾವುಕ ಸಾಲು ಮತ್ತು ಹೊಸ ವಿಡಿಯೋ
ಮುಂಬೈ, ಸೆಪ್ಟೆಂಬರ್ 05: ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ತಮ್ಮ ಹೊಸ ಫೋಟೊದ ಜೊತೆಯಲ್ಲಿ ವಿಡಿಯೋವೊಂದರನ್ನು ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದರೊಟ್ಟಿಗೆ ಅವರು ಬರೆದ ಭಾವುಕ ಸಾಲುಗಳು ಅವರ ಅಭಿಮಾನಿಗಳಲ್ಲಿ ಕಣ್ಣೀರುಕ್ಕಿಸುವುದು ಖಂಡಿತ.
1990 ರ ದಶಕದಲ್ಲಿ ಬಾಲಿವುಡ್ ಸಿನಿಮಾ ಲೋಕದಲ್ಲಿ ಖ್ಯಾತ ನಟಿಯಾಗಿ ಮೆರೆದ ಸೋನಾಲಿ ಬೇಂದ್ರೆ ಅವರು ಕ್ಯಾನ್ಸರ್ ನಿಂದ ಬಳಲುತ್ತಿರುವುದು ಇತ್ತೀಚೆಗೆ ಪತ್ತೆಯಾಗಿತ್ತು.
ಕ್ಯಾನ್ಸರ್ ಪತ್ತೆಯಾಗುತ್ತಿದ್ದಂತೆಯೇ ನ್ಯೂಯಾರ್ಕ್ ಗೆ ತೆರಳಿ ಚಿಕಿತ್ಸೆ ಪಡೆಯುತ್ತಿರುವ ಸೋನಾಲಿ ಬೇಂದ್ರೆ ಅವರು ಸದ್ಯಕ್ಕೆ ವಿಗ್ ಧರಿಸಿದ ತಮ್ಮ ಹೊಸ ಫೋಟೋವನ್ನು ಇನ್ ಸ್ಟಾಗ್ರಾಂ ನಲ್ಲಿ ಹಾಕಿದ್ದಾರೆ. ಜೊತೆಗೆ ತಮ್ಮ ಹೊಸ ಲುಕ್ಕಿಗೆ ಶಾಯ ಮಾಡಿದ್ದಕ್ಕೆ ನಟಿ ಪ್ರಿಯಾಂಕಾ ಚೋಪ್ರಾ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
|
ಸೋನಾಲಿ ಬರೆದ ಭಾವುಕ ಸಾಲುಗಳು
'ವಯ್ಯಾರ ನನಗಿಷ್ಟ. ಸುಂದರವಾಗಿ ಕಾಣುವುದು ಯಾರಿಗೆ ಇಷ್ಟವಿಲ್ಲ? ನಾವು ಹೇಗೆ ಕಾಣುತ್ತೇವೆ ಎಂಬುದು ನಮ್ಮ ಮನಸ್ಸನ್ನು ತೋರಿಸಿಕೊಡುತ್ತದೆ. ನಮ್ಮ ಮನಸ್ಸನ್ನು ಉಲ್ಲಸಿತವಾಗಿಡುತ್ತದೆ. ಇದರಿಂದ ಬೇರೆ ಯಾರಿಗೂ ನೋವಾಗುವುದೂ ಇಲ್ಲ. ನಮ್ಮನ್ನು ಯಾವುದು ಖುಷಿಯಾಗಿಡುತ್ತದೋ ಅದನ್ನು ಮಾಡುವುದು ಬಹಳ ಮುಖ್ಯ. ನಾನು ಹಿಗ್ ಧರಿಸಿ, ಲಿಪ್ ಸ್ಟಿಕ್ ಹಚ್ಚಿಕೊಂಡು, ಹೈ ಹೀಲ್ಸ್ ಧರಿಸಿದರೆ ಯಾರು ಏನೂ ಹೇಳುವುದಿಲ್ಲ. ಇದರಲ್ಲಿ ತಪ್ಪು ಯಾವುದು, ಸರಿಯಾವುದು ಯಾರಿಗೂ ಗೊತ್ತಿಲ್ಲ.' ಎಂದು ಸೋನಾಲಿ ಪತ್ರದಲ್ಲಿ ಬರೆದಿದ್ದಾರೆ.

'ಸುಂದರವಾಗಿ ಕಾಣುವ ದುರಾಸೆಗೆ ಬಿದ್ದೆನೇ?!'
'ಕಿಮೋಥೆರಪಿಯಿಂದ ಕೂದಲು ಉದುರಿ ವಿಗ್ ಗಾಘಿ ಹುಡುಕುವಾಗ ನನಗೆ ಅನುಮಾನವಾಯ್ತು. ನಾನು ಸುಂದರವಾಗಿ ಕಾಣಬೇಕೆಂಬ ದುರಾಸೆಗೆ ಬಿದ್ದೆನೇ ಎಂದು. ನಾನು ಎಂಟರ್ಟೇನ್ ಮೆಂಟ್ ಇಂಡಸ್ಟ್ರಿಯಲ್ಲಿದ್ದಿದ್ದುದರಿಂದ ಸುಂದರವಾಗಿ ಕಾಣುವುದು ನನಗೆ ತುಂಬಾ ಮುಖ್ಯವೆನ್ನಿಸಿತು. ನಂತರ ಅನ್ನಿಸಿತು, ನಾನು ನನಗಾಗಿ ಸುಂದರವಾಗಿ ಕಾಣಬೇಕು, ಇನ್ನ್ಯಾರಿಗಾಗೋ ಅಲ್ಲ ಎಂದು. ನಮಗೆ ಯಾವುದು ಸರಿ ಕಾಣುತ್ತದೆಯೋ ಅದನ್ನೇ ಮಾಡಬೇಕು ಎಂದು ನನಗನ್ನಿಸುತ್ತಿದೆ' ಹೀಗೇ ಸಾಗುತ್ತದೆ ಸೋನಾಲಿ ಅವರ ಸಾಲುಗಳು.

ಪ್ರಿಯಾಂಕಾ ಚೋಪ್ರಾ ಅವರಿಗೆ ಧನ್ಯವಾದಗಳು
ಅಷ್ಟೇ ಅಲ್ಲ, ಸೋನಾಲಿ ಬೇಂದ್ರೆ ಅವರ ಹೊಸ ಲುಕ್ಕಿಗೆ ಕಾರಣ ನಟಿ ಪ್ರಿಯಾಂಕಾ ಚೋಪ್ರಾ ಅಂತೆ. ಆದ್ದರಿಂದ ಅವರಿಗೆ ಈ ಸಾಲುಗಳ ಮೂಲಕ ಧನ್ಯವಾದ ಅರ್ಪಿಸಿದ್ದಾರೆ ಸೋನಾಲಿ ಬೇಂದ್ರೆ.
|
ಮಗನಿಗೆ ಕಣ್ಣೀರುಕ್ಕಿಸುವ ಪತ್ರ
ಇತ್ತೀಚೆಗಷ್ಟೇ ತಮ್ಮ ಮಗ ರಣ್ವೀರ್ ಅವರ ಹುಟ್ಟು ಹಬ್ಬದ ಸಮಯದಲ್ಲಿ ಸೋನಾಲಿ ಬೇಂದ್ರೆ ಅವರು ಮಗನಿಗೆ ಬರೆದ ಪತ್ರ ವೈರಲ್ ಆಗಿತ್ತು. ಕಣ್ನೀರುಕ್ಕಿಸುವಷ್ಟು ಭಾವುಕವಾಗಿದ್ದ ಈ ಪತ್ರದಲ್ಲಿ ಅವರು ತಮ್ಮ ಮಗನನ್ನು ತಾವು ಎಶಶ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬುದನ್ನು ಬರೆದಿದ್ದರು. ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಅವರು ತಮ್ಮ ಕುಟುಂಬದಿಂದ ದೂರವಿದ್ದಾರೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications