ಬಲೂಚಿಸ್ತಾನ ನೆಲ ಮತ್ತಷ್ಟು ಕೆಂಪು, ಈವರೆಗೂ 216 ಬಂಡುಕೋರರ ಕಥೆ ಮುಕ್ತಾಯ | Baloch Rebels
ಪಾಕಿಸ್ತಾನ ತಾನು ಮಾಡಿದ ಪಾಪ ತಾನೇ ಅನುಭವಿಸುವ ಪರಿಸ್ಥಿತಿ ಬಂದಿದ್ದು, ಬಲೂಚಿಸ್ತಾನದ ನೆಲದಲ್ಲಿ ಭುಗಿಲೆದ್ದ ಹಿಂಸಾಚಾರ ಕೈಮೀರಿ ಹೋಗಿದ್ದು ನೂರಾರು ಜನರ ಜೀವವೇ ಹೋಗಿದೆ. ಒಂದು ಕಡೆ ಪಾಕಿಸ್ತಾನ ಉಗ್ರರನ್ನು ಸಾಕುತ್ತಾ ಬೇರೆ ಬೇರೆ ದೇಶಗಳ ಮೇಲೆ ದ್ವೇಷ ಕಾರುತ್ತಿದ್ದು, ಇದರಿಂದ ಪಾಕಿಸ್ತಾನ ಅಕ್ಕಪಕ್ಕದ ದೇಶಗಳು ನೆಮ್ಮದಿ ಇಲ್ಲದೆ ನರಳುತ್ತಿವೆ. ಹೀಗೆಲ್ಲಾ ಪಾಕಿಸ್ತಾನ ತಾನು ಮಾಡಿದ ಪಾಪದ ಕೆಲಸಕ್ಕೆ ಇದೀಗ ತನ್ನದೇ ನೆಲದಲ್ಲಿ ಶಿಕ್ಷೆ ಅನುಭವಿಸುವ ವಾತಾವರಣ ನಿರ್ಮಾಣ ಆಗಿದೆ. ಬಲೂಚಿಸ್ತಾನ ನೆಲ ನೆತ್ತರಲ್ಲಿ ಮುಳುಗಿ ಹೋಗಿದ್ದು, ಸಾಮಾನ್ಯರ ಜೀವವೂ ಸಂಕಷ್ಟಕ್ಕೆ ಸಿಲುಕಿದೆ.
ಬಲೂಚಿಸ್ತಾನ ಭಾಗದಲ್ಲಿ ಪದೇ ಪದೇ ಕಿರಿಕ್ ಆಗುತ್ತಲೇ ಇರುತ್ತದೆ, ಇದಕ್ಕೆ ಪಾಕಿಸ್ತಾನ ಸರ್ಕಾರವೇ ಕಾರಣ ಎಂಬ ಆರೋಪ ಕೂಡ ಇದೆ. ಬಲೂಚ್ ಲಿಬರೇಶನ್ ಆರ್ಮಿ ಬಂಡುಕೋರರು ದೊಡ್ಡ ತಲೆನೋವು ತಂದಿದ್ದಾರೆ ಪಾಕಿಸ್ತಾನಕ್ಕೆ. ಪಾಕ್ ಸೇನೆ ಈಗಾಗಲೇ ಬಲೂಚಿಸ್ತಾನಕ್ಕೆ ನುಗ್ಗಿ ಅಟ್ಯಾಕ್ ಮಾಡಿ, ಈವರೆಗೂ 216 ಬಂಡುಕೋರರ ಹತ್ಯೆ ಮಾಡಿದೆಯಂತೆ. 36 ಸಾಮಾನ್ಯ ಜನರ ಜೀವವೂ ಹೋಗಿದ್ದು, ಇದರ ಜೊತೆಗೆ ಪಾಕಿಸ್ತಾನ ಸೇನೆಯ 22 ಸಿಬ್ಬಂದಿ ಕೂಡ ಜೀವ ಬಿಟ್ಟಿದ್ದಾರೆ. ಹೀಗೆ ಸಾವಿನ ಸೂತಕ ಬಲೂಚಿಸ್ತಾನ ಭಾಗದಲ್ಲಿ ಸಂಚಲನ ಸೃಷ್ಟಿಮಾಡಿದೆ.

ಒಟ್ಟು 216 ಬಂಡುಕೋರರ ಹತ್ಯೆ
ಪಾಕಿಸ್ತಾನ ಸರ್ಕಾರ ತಮ್ಮ ಪ್ರದೇಶದ ಬಗ್ಗೆ ತಾತ್ಸಾರ ಮಾಡುತ್ತಿದ್ದು, ಇದರಿಂದ ಅಭಿವೃದ್ಧಿ ಕೂಡ ಆಗುತ್ತಿಲ್ಲ ಎಂಬ ಆರೋಪ ಬಲೂಚಿಸ್ತಾನ ಜನರದ್ದು. ಹಾಗೇ ತಮ್ಮ ಮೇಲೆ ಬೇಕು ಅಂತಾ ಪಾಕ್ ಸರ್ಕಾರ ಶೋಷಣೆ ಮಾಡುತ್ತಿದೆ ಎಂಬ ಆರೋಪವನ್ನು ಕೂಡ ಮಾಡುತ್ತಾರೆ. ಇಷ್ಟೆಲ್ಲದರ ನಡುವೆ, ದಿಢೀರ್ ಬಲೂಚಿಸ್ತಾನ ಬಂಡುಕೋರರು ಪಾಕ್ ಸೇನೆ ವಿರುದ್ಧ ಹಾಗೂ ಸರ್ಕಾರದ ವಿರುದ್ಧ ದೊಡ್ಡ ಪ್ರಮಾಣದಲ್ಲಿ ತಿಕ್ಕಾಟಕ್ಕೆ ಇಳಿದ್ದರು. ಹೀಗಾಗಿ ಬಲೂಚಿಸ್ತಾನದಲ್ಲಿ ಗುಪ್ತಚರ ಕಾರ್ಯಾಚರಣೆ ಮೂಲಕ ಪಾಕ್ ಸೇನೆ ಬಂಡುಕೋರರ ಹತ್ಯೆಗೆ ಇಳಿದಿದೆ.
ಗಡಿ ಭಾಗದಲ್ಲಿ ಸೇನೆ ನಿಯೋಜನೆ
ಮತ್ತೊಂದು ಕಡೆ ಪಾಕಿಸ್ತಾನ ಸೇನೆಯ ಈ ಕ್ರಮವನ್ನು ಬಲೂಚಿಸ್ತಾನ ಬಂಡುಕೋರರ ನಾಯಕರು ಹಾಗೂ ಬಲೂಚಿಸ್ತಾನ ನಿವಾಸಿಗಳು ಖಂಡಿಸಿದ್ದಾರೆ. ಹೀಗೆ ಎಲ್ಲಾ ತಿಕ್ಕಾಟದ ನಡುವೆ ಈವರೆಗೂ 216 ಬಂಡುಕೋರರ ಹತ್ಯೆ ಮಾಡಿದೆಯಂತೆ ಪಾಕ್. ಗಡಿ ಭಾಗದಲ್ಲಿ ಪಾಕಿಸ್ತಾನಕ್ಕೆ ದೊಡ್ಡ ತಲೆನೋವು ಶುರುವಾದ ಹಿನ್ನೆಲೆ ಈಗಾಗಲೇ ಸೇನಾ ಪರಿಕರಗಳನ್ನು ನಿಯೋಜನೆ ಮಾಡಿದೆ. ಆದರೆ ಇದನ್ನೆಲ್ಲಾ ಬಿಟ್ಟು ಪಾಕ್ ಸರ್ಕಾರ ಬಲೂಚ್ ಭಾಗದಲ್ಲಿ ಅಭಿವೃದ್ಧಿ ಮಾಡಿದ್ದರೆ ಸ್ವತಃ ಅಲ್ಲಿನ ಜನರೇ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದ್ದರು ಎಂಬುದು ಸ್ಥಳೀಯರ ಮಾತಾಗಿದೆ.
ಆದರೆ ಅದನ್ನೆಲ್ಲಾ ಬಿಟ್ಟು ಉಗ್ರರಿಗೆ ಬೆಂಬಲ ನೀಡುತ್ತಾ, ತನ್ನ ಗುಂಡಿಯನ್ನು ತಾನೇ ತೋಡಿಕೊಂಡಿರುವ ಪಾಪಿ ಪಾಕಿಸ್ತಾನಕ್ಕೆ ಇದೀಗ ಬಲೂಚ್ ಭಾಗದ ಬಂಡುಕೋರರನ್ನು ನಿಭಾಯಿಸುವುದು ದೊಡ್ಡ ಸವಾಲಾಗಿದೆ. ಹಾಗೇ ಈ ದಾಳಿ ಇನ್ನಷ್ಟು ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇದ್ದು, ಸಾಮಾನ್ಯ ಜನರು ಕೂಡ ಹಿಂಸಾಚಾರಕ್ಕೆ ಬಲಿ ಆಗಿದ್ದು ಜಾಗತಿಕ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
-
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL












Click it and Unblock the Notifications