ಹೃದಯ ಸಮಸ್ಯೆ, ಕ್ಯಾನ್ಸರ್ ಶೀಘ್ರ ಗುರುತಿಸುವ ಇದು ಡಾಕ್ಟರ್ ಅಲ್ಲ!
ಲಂಡನ್, ಜನವರಿ 3 : ಯುನೈಟೆಡ್ ಕಿಂಗ್ ಡಮ್ ನ ಸಂಶೋಧಕರು ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಅಭಿವೃದ್ಧಿ ಪಡಿಸಿದ್ದು, ಅದರ ಮೂಲಕ ಹೃದಯ ಕಾಯಿಲೆ ಹಾಗೂ ಶ್ವಾಸಕೋಶ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿ ಹಾಗೂ ನಿಖರವಾಗಿ ಪತ್ತೆ ಹಚ್ಚಬಹುದು.
ಸದ್ಯಕ್ಕೆ ಹೃದಯ ತಜ್ಞರು ಸಮಸ್ಯೆ ಏನಾದರೂ ಕಂಡಬಂದಲ್ಲಿ ಸ್ಕ್ಯಾನ್ ಮೂಲಕ ಹೃದಯದ ಬಡಿತವನ್ನು ಪರಿಶೀಲಿಸುತ್ತಾರೆ. ಈ ರೀತಿಯ ಪರಿಶೀಲನೆ ಮಾಡಿದಾಗ ಅತ್ಯುತ್ತಮ ವೈದ್ಯರು ಎನಿಸಿಕೊಂಡವರು ಸಹ ಪ್ರತಿ ಐದು ಪ್ರಕರಣದಲ್ಲಿ ಒಂದರಲ್ಲಿ ತಪ್ಪಾದ ನಿರ್ಣಯ ಕೈಗೊಳ್ಳುವುದಿದೆ. ಏನೂ ತೊಂದರೆ ಇಲ್ಲ ಎಂದು ಮನೆಗೆ ವಾಪಸ್ ಕಳುಹಿಸಿ, ಆ ರೋಗಿಗೆ ಹೃದಯಾಘಾತ ಆದ ಸಂದರ್ಭವಿದೆ.
ಇನ್ನು ಅಗತ್ಯ ಇಲ್ಲದಿದ್ದರೂ ಆಪರೇಷನ್ ಮಾಡಿದಂಥ ಉದಾಹರಣೆಗಳು ಸಹ ಇವೆ. ಇದೀಗ ಜಾನ್ ರಾಡ್ ಕ್ಲಿಪ್ ಆಸ್ಪತ್ರೆಯಲ್ಲಿ ಅಭಿವೃದ್ಧಿ ಪಡಿಸಿದ ಕೃತಕ ಬುದ್ಧಿ ಮತ್ತೆ ಸಹಾಯದಿಂದ ವೈದ್ಯರು ಕೂಡ ನಿಖರವಾಗಿ ತಿಳಿಸಲಾಗದ ಅಂಶಗಳನ್ನು ಕೂಡ ಪತ್ತೆ ಹಚ್ಚಬಹುದು.

ಇದರ ಜತೆಗೆ ರೋಗಿಗೆ ಹೃದಯಾಘಾತದ ಸಂಭವ ಇರುವ ಬಗ್ಗೆ ಕೂಡ ತಿಳಿಸುತ್ತದೆ. ಇದನ್ನು ಪ್ರಾಯೋಗಿಕವಾಗಿ ಆರು ಹೃದಯ ಪರೀಕ್ಷೆ ಪ್ರಯೋಗಾಲಯಗಳಲ್ಲಿ ಬಳಸಲಾಗಿದೆ. ಈ ಕೃತಕ ಬುದ್ಧಿಮತ್ತೆಯನ್ನು ಸಂಶೋಧನೆ ಮಾಡಿದ ಪೌಲ್ ಲೀಸನ್ ಪ್ರಕಾರ, ಇದು ಕೊಡುವ ಮಾಹಿತಿ ಇತರ ಹೃದಯ ತಜ್ಞರಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.
ಅಲ್ಟ್ರೋಮಿಕ್ಸ್ ಎಂಬುದು ಇದರ ಹೆಸರು. ಸಾವಿರ ರೋಗಿಗಳ ಸ್ಕ್ಯಾನ್ ನ ಫಲಿತಾಂಶ ನೋಡಿ, ಸಮಸ್ಯೆಯನ್ನು ಮುಂಚೆಯೇ ಪತ್ತೆ ಹಚ್ಚುವಂತೆ ಇದನ್ನು ತರಬೇತುಗೊಳಿಸಲಾಗಿದೆ. ಯುಕೆನ ಮತ್ತೊಂದು ಸ್ಟಾರ್ಟ್ ಅಪ್ ಅಭಿವೃದ್ಧಿ ಪಡಿಸಿರುವ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ನಿಂದ ಶ್ವಾಸಕೋಶ ಕ್ಯಾನ್ಸರ್ ನ ಲಕ್ಷಣಗಳನ್ನು ಪತ್ತೆ ಹಚ್ಚಬಹುದು.
ದೇಹದಲ್ಲಿನ ಕೆಲ ಕಣಗಳು ಕ್ಯಾನ್ಸರ್ ಗೆ ತಿರುಗಬಹುದೇ ಎಂದು ವೈದ್ಯರು ಸಹ ಹೇಳಲಾಗದ್ದನ್ನು ಇದು ಪತ್ತೆ ಹಚ್ಚುತ್ತದೆ. ಪ್ರಾಯೋಗಿಕವಾಗಿ ಇದನ್ನು ಬಳಸುವಾಗ ತೊಂದರೆ ಇಲ್ಲದ ಪ್ರಕರಣವನ್ನು ಗುರುತಿಸುವಲ್ಲಿ ಹಾಗೂ ಶ್ವಾಸಕೋಶ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವಲ್ಲಿ ಇದು ಯಶಸ್ವಿಯಾಗಿದೆ.
-
ಮನೆಯಲ್ಲಿ ಕಸದ ಬುಟ್ಟಿ ಎಲ್ಲಿ ಇಡಬೇಕು? ಈ ವಾಸ್ತು ನಿಯಮಗಳು ತಿಳಿದುಕೊಳ್ಳಿ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ












Click it and Unblock the Notifications