ಇರುವೆ ಇಟ್ಕೊಂಡ್ರೆ ತಂಪು ತಂಪು ಕೂಲ್!
ನ್ಯೂಯಾರ್ಕ್, ಆ.4: ಇರಲಾರದೆ ಇರುವೆ ಬಿಟ್ಕೊಂಡ್ರೆ ಎಲ್ಲೆಲ್ಲೋ ಉರಿ ಎಂಬ ಮಾತಿದೆ. ಆದರೆ, ಇರುವೆಗಳನ್ನು ಇಟ್ಕೊಂಡ್ರೆ ತಂಪು ತಂಪು ಕೂಲ್ ಕೂಲ್, ಜಾಗತಿಕ ತಾಪಮಾನ ತಗ್ಗಿಸಲು ಇರುವೆ ಪ್ರಬಲ ಅಸ್ತ್ರ ಎಂದು ಸಂಶೋಧಕರು ಹೇಳಿದ್ದಾರೆ.
ವಾತಾವರಣದಿಂದ ಇಂಗಾಲದ ಡೈಆಕ್ಸೈಡನ್ನು ಹೀರಲು ನೆರವಾಗುವ ಮೂಲಕ ಇರುವೆಗಳು ಭೂಮಿಯನ್ನು ತಂಪುಗೊಳಿಸುತ್ತವೆ ಎಂದು ಹೊಸ ಅಧ್ಯಯನದಿಂದ ತಿಳಿದು ಬಂದಿದೆ. ಮಣ್ಣಿನ ಮೇಲೆ ಇರುವೆಗಳ ಪ್ರಭಾವದ ಕುರಿತು ನಡೆಸಲಾದ ಸುದೀರ್ಘ ಪ್ರಯೋಗವೊಂದರಲ್ಲಿ ಇರುವೆಗಳ ಸಂಖ್ಯೆ ಹೆಚ್ಚಿದಂತೆ ಅವು ಭೂಮಿಯನ್ನು ತಂಪುಗೊಳಿಸುತ್ತವೆ ಎಂಬ ಅಂಶ ಬೆಳಕಿಗೆ ಬಂದಿದೆ.
ಇರುವೆಗಳು ವಾತಾವರಣವನ್ನು ಬದಲಾಯಿಸುತ್ತವೆ ಎಂದ ಈ ಅಧ್ಯಯನ ತಂಡದ ಮುಖ್ಯಸ್ಥ, ಟೆಂಪೆಯ ಅರಿರೊನಾ ಸ್ಟೇಟ್ ಯೂನಿವರ್ಸಿಟಿಯ ಲೇಖಕರೂ ಆಗಿರುವ ರೊನಾಲ್ಡ್ ಡೋರ್ನ್ ಹೇಳಿದ್ದಾರೆ.

ಕೆಲವು ಇರುವೆ ತಳಿಗಳು ಕ್ಯಾಲ್ಸಿಯಂ ಕಾರ್ಬೊನೇಟನ್ನು (ಸುಣ್ಣದ ಕಲ್ಲು) ಸ್ರವಿಸುವುದಕ್ಕಾಗಿ ಖನಿಜಗಳನ್ನು ತೇವಗೊಳಿಸುತ್ತವೆ. ಈ ಪ್ರಕ್ರಿಯೆಯಲ್ಲಿ ವಾತಾವರಣದಿಂದ ಅತ್ಯಲ್ಪ ಪ್ರಮಾಣದ ಇಂಗಾಲದ ಡೈ ಆಕ್ಸೈಡ್ ಹಿಡಿದಿಡಲ್ಪಡುತ್ತದೆ ಎಂದು ರೊನಾಲ್ಡ್ ತಿಳಿಸಿದ್ದಾರೆ.
ಇರುವೆಗಳ ಈ ಸುಣ್ಣದ ಕಲ್ಲಿನ ಕಾರ್ಖಾನೆ, ಸಾಗರಗಳಲ್ಲಿ ನಡೆಯುವ ಭಾರೀ ಪ್ರಮಾಣದ ಭೂಮಿ ತಂಪುಗೊಳಿಸುವ ಪ್ರಕ್ರಿಯೆಯ ಕಿರು ಮಾದರಿಯಾಗಿದೆ ಎಂದು 'ಲೈವ್ಸೈನ್ಸ್' ವರದಿ ಮಾಡಿದೆ. ಬಸಾಲ್ಟ್ ಮರಳಿನ ವಿಭಜನೆಯನ್ನು ಮಾಡುವ ಮೂಲಕ ಇರುವೆಗಳು ಶಕ್ತಿಶಾಲಿ ಹವಾಮಾನ ಏಜೆಂಟ್ಗಳಾಗಿ ಕೆಲಸ ಮಾಡುತ್ತವೆಂಬುದನ್ನು ಡೋರ್ನ್ ಕಂಡು ಹಿಡಿದಿದ್ದಾರೆ.
ಬರಿ ನೆಲದಲ್ಲಿರುವ ಮರಳು ವಿಭಜನೆಯಾಗುವುದಕ್ಕಿಂತ 50 ರಿಂದ 300 ಪಟ್ಟು ವೇಗದಲ್ಲಿ ಇರುವೆಗಳು ಖನಿಜಗಳನ್ನು ಒಡೆಯುತ್ತವೆ. ಇರುವೆಗಳು ಖನಿಜಗಳಿಂದ ಕ್ಯಾಲ್ಸಿಯಂ ಹಾಗೂ ಮೆಗ್ನೀಷಿಯಂಗಳನ್ನು ಹೊತ್ತು ಅವುಗಳನ್ನು ಸುಣ್ಣದ ಕಲ್ಲು ತಯಾರಿಸಲು ಬಳಸುತ್ತವೆಂದು ಡೋರ್ನ್ ಹೇಳಿದ್ದಾರೆ.
ಈ ಪ್ರಕ್ರಿಯೆಯಲ್ಲಿ ಕೀಟಗಳು ಹಸಿರುಮನೆ ಅನಿಲವಾದ ಕಾರ್ಬನ್ ಡೈಆಕ್ಸೈಡನ್ನು ಬಂಡೆಗಳಲ್ಲಿ ಹಿಡಿದಿರುತ್ತವೆ ಎಂದು ಹೇಳಿದೆ. ಇರುವೆಗಳು ಮರಳಿನ ಕಣಗಳನ್ನು ನೆಕ್ಕಿ ಅವುಗಳನ್ನು ತಮ್ಮ ಗೂಡಿನ ಗೋಡೆಗೆ ಅಂಟಿಸುವಾಗ ಈ ಬದಲಾವಣೆ ಸಂಭವಿಸುತ್ತಿರಬಹುದು. ಆದರೆ, ಈ ಪ್ರಕ್ರಿಯೆ ನಿಜವಾಗಿಯೂ ಒಂದು ವೈಜ್ಞಾನಿಕ ನಿಗೂಢ ಎಂದು ಡೋರ್ನ್ ತಿಳಿಸಿದ್ದಾರೆ. ಇರುವೆಗಿರುವ ಬಲದ ಮಹತ್ವ ಈಗ ವಿಜ್ಞಾನಿಗಳಿಗೆ ಅರಿವಾಗಿದೆ. (ಪಿಟಿಐ)
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications