ಜರ್ಮನಿಯಲ್ಲಿ ಹೆಚ್ಚುತ್ತಿದೆ ಇಸ್ಲಾಂ ವಿರೋಧಿ ಜಾಥಾ
ಬರ್ಲಿನ್, ಡಿ. 16: ಕೆಲವೇ ದಶಕಗಳ ಹಿಂದೆ ಹಿಟ್ಲರ್ ಎಂಬ ಮಾನವ ರೂಪಿ ರಾಕ್ಷಸನ ಆಡಳಿತದಲ್ಲಿ ಜನಾಂಗೀಯ ದ್ವೇಷದಿಂದ ನಲುಗಿಹೋಗಿದ್ದ ಜರ್ಮನಿ ಈಗ ಮತ್ತೆ ಅತ್ತ ಸಾಗುತ್ತಿದೆಯೇ..?
ಈ ಅನುಮಾನ ಹುಟ್ಟಲು ಕಾರಣವಾಗಿದ್ದು, ಜರ್ಮನಿಯಲ್ಲಿ ಈಗ ನಡೆಯುತ್ತಿರುವ ಇಸ್ಲಾಂ ವಿರೋಧಿ ಜಾಥಾ. ಆತಂಕಕಾರಿ ವಿಷಯವೆಂದರೆ ಈ ಜಾಥಾಕ್ಕೆ ದೇಶಾದ್ಯಂತ ಬೆಂಬಲ ಇನ್ನಷ್ಟು ಹೆಚ್ಚುತ್ತಿದೆ. ಇಸ್ಲಾಂ ಸೇರಿದಂತೆ ದೇಶದಲ್ಲಿರುವ ಇತರ ಅಲ್ಪಸಂಖ್ಯಾತರ ವಿರುದ್ಧ ಬಹುಸಂಖ್ಯಾತರ ಅಸಹನೆ ಹೆಚ್ಚುತ್ತಿದೆ. ದೇಶದ ವಲಸೆ ನೀತಿಯನ್ನು ಇನ್ನಷ್ಟು ಕಠಿಣಗೊಳಿಸಬೇಕೆಂಬ ಆಗ್ರಹ ಹೆಚ್ಚುತ್ತಿದೆ.
ಡ್ರೆಸ್ಡೆನ್ ನಗರದಲ್ಲಿ ಪ್ರತಿ ಸೋಮವಾರ ಇಸ್ಲಾಂ ವಿರೋಧಿ ಜಾಥಾ ಏರ್ಪಡಿಸಲಾಗುತ್ತಿದೆ. ದಿನ ಕಳೆದಂತೆ ಈ ಜಾಥಾ ಹೆಚ್ಚು ಜನಪ್ರಿಯತೆ ಗಳಿಸುತ್ತಿರುವ ಹಿನ್ನೆಲೆಯಲ್ಲಿ ಜರ್ಮನಿ ಛಾನ್ಸಲರ್ ಏಂಜೆಲಾ ಮರ್ಕೆಲ್ ಇಬ್ಬಂದಿ ಸ್ಥಿತಿ ಎದುರಿಸುತ್ತಿದ್ದಾರೆ. ಅವರ ಈ ಧೋರಣೆ ರಾಜಕೀಯ ವಲಯದಲ್ಲಿ ಅವರ ಸ್ನೇಹಿತರು ಹಾಗೂ ಪ್ರತಿಪಕ್ಷಗಳಿಂದ ತೀವ್ರ ಟೀಕೆಗೆ ಒಳಗಾಗಿದೆ.

ದೇಶದಲ್ಲಿ ತ್ವೇಷಮಯ ವಾತಾವರಣ : ಮುಂದಿನ ಸೋಮವಾರ ನಡೆಯಲಿರುವ ನಡಿಗೆಯಲ್ಲಿ ಕನಿಷ್ಠ ಒಂದು ಸಾವಿರ ಜನ ಭಾಗವಹಿಸಬಹುದೆಂದು ನಿರೀಕ್ಷಿಸಲಾಗಿದೆ. ಆದರೆ, ಈ ನಡಿಗೆಯಿಂದ ದೇಶದಲ್ಲಿ ಪರಸ್ಪರ ತ್ವೇಷಮಯ ವಾತಾವರಣ ನಿರ್ಮಾಣವಾಗಲಿದೆ ಎಂದು ಮರ್ಕೆಲ್ ಅವರ ಭದ್ರತಾ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
"ದೇಶದಲ್ಲಿ ಈಗಾಗಲೇ ಪರಸ್ಪರ ದ್ವೇಷಿಸುವ ಸ್ಥಿತಿ ಹೆಚ್ಚುತ್ತಿದೆ. ಇದಕ್ಕೆ ಸೋಮವಾರದ ಇಸ್ಲಾಂ ವಿರೋಧಿ ನಡಿಗೆಯೇ ಕಾರಣವೆಂದು ದೇಶದ ಅನೇಕ ಪತ್ರಿಕೆಗಳು ಆರೋಪಿಸಿವೆ" ಎಂದು ಪೊಲೀಸ್ ಮುಖ್ಯಸ್ಥ ಹೋಲ್ಗರ್ ಮುವೆಕ್ ತಿಳಿಸಿದ್ದಾರೆ.
ದೇಶದಲ್ಲಿ ಮುಸ್ಲಿಂ ವಿರೋಧಿ ಮನೋಭಾವನೆ ಹೆಚ್ಚುತ್ತಿದೆ. ಸಲಫಿಸ್ಟ್ ಮುಸ್ಲಿಮರ ವಿರುದ್ಧ ಹೋರಾಡಲು ಹಾಗೂ ಜ್ಯೂಗಳ ಮೇಲೆ ದಾಳಿ ನಡೆಸಲು ಬಲಪಂಥೀಯರು ಒಂದಾಗುತ್ತಿದ್ದಾರೆ. ಆದರೆ, ದೇಶದಲ್ಲಿ ಮುಸ್ಲಿಮರು ಸೇರಿದಂತೆ ಇನ್ಯಾವುದೇ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಸಾಧನೆಗೆ ಅವಕಾಶವಿಲ್ಲ ಎಂದು ಹೋಲ್ಗರ್ ಸ್ಪಷ್ಟಪಡಿಸಿದ್ದಾರೆ.
ನಡಿಗೆ ವಿರೋಧಿ ಪ್ರತಿಭಟನೆ : ಗ್ರೀನ್ಸ್ ಮುಖಂಡರಾದ ಸೆಮ್ ಓಡೆಮಿರ್ ಅವರು ಡೆಸ್ಡೆನ್ ನಗರದಲ್ಲಿ ಇಸ್ಲಾಂ ವಿರೋಧಿ ನಡಿಗೆಯನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಜರ್ಮನಿಯಲ್ಲಿ ವಲಸಿಗರಿಗೆ ರಕ್ಷಣೆಯ ಭರವಸೆ ನೀಡಬೇಕೆಂದು ಆಗ್ರಹಿಸಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications