ಕೀವ್ನಿಂದ ಹೊರಬರಲು ಯತ್ನಿಸುತ್ತಿದ್ದ ಭಾರತೀಯ ವಿದ್ಯಾರ್ಥಿಗೆ ಗುಂಡು
ಕೀವ್, ಮಾರ್ಚ್ 04: ಉಕ್ರೇನ್ ರಾಜಧಾನಿ ಕೀವ್ನಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ ಗಾಯಗೊಂಡಿದ್ದಾನೆ ಎಂದು ಕೇಂದ್ರ ಸಚಿವ ವಿಕೆ ಸಿಂಗ್ ಮಾಹಿತಿ ನೀಡಿದ್ದಾರೆ. ಇಂದು ಕೀವ್ನಿಂದ ಬರುತ್ತಿದ್ದ ವಿದ್ಯಾರ್ಥಿಯೊಬ್ಬನಿಗೆ ಗುಂಡು ಹಾರಿಸಲಾಗಿದೆ ಎಂದು ನನಗೆ ಮಾಹಿತಿ ಸಿಕ್ಕಿದ್ದು ಅವರನ್ನು ಮಧ್ಯದಲ್ಲಿ ವಾಪಸ್ ಕರೆದೊಯ್ದಿದ್ದಾರೆ ಎಂದು ಅವರು ಹೇಳಿದರು. ಸಾಧ್ಯವಾದಷ್ಟು ಜನರನ್ನು ಸ್ಥಳಾಂತರಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಪ್ರಸ್ತುತ ಪೋಲೆಂಡ್ನಲ್ಲಿರುವ ವಿಕೆ ಸಿಂಗ್ ಅವರು ಹೇಳಿದರು. ವಿಕೆ ಸಿಂಗ್ ಅವರು ಉಕ್ರೇನ್ನಿಂದ ಬರುವ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಸಹಾಯ ಮಾಡುತ್ತಿದ್ದಾರೆ.
I received info today that a student coming from Kyiv got shot and was taken back midway. We're trying for maximum evacuation in minimum loss: MoS Civil Aviation Gen (Retd) VK Singh, in Poland#RussiaUkraine pic.twitter.com/cggVEsqfEj
— ANI (@ANI) March 4, 2022
ನಾಳೆ ರೆಸ್ಜೋದಿಂದ 4 ವಿಮಾನಗಳು ಹೊರಡಲಿವೆ. ಒಂದು ವಿಮಾನ ವಾರ್ಶಾದಿಂದ ಹೊರಡಲಿದೆ ಎಂದು ವಿಕೆ ಸಿಂಗ್ ತಿಳಿಸಿದ್ದಾರೆ. ವಸತಿ ಸೌಕರ್ಯ ಇಲ್ಲದ ಕಾರಣ 800-900 ವಿದ್ಯಾರ್ಥಿಗಳನ್ನು ಕಳುಹಿಸಲು ಪ್ರಯತ್ನಿಸುತ್ತಿದ್ದೇವೆ. ಅವರಿಗೆ ಹೆಚ್ಚು ಆರಾಮದಾಯಕವಾಗಿರಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಕಳೆದ ಮೂರು ದಿನಗಳಲ್ಲಿ ನಾವು 7 ವಿಮಾನಗಳನ್ನು ಕಳುಹಿಸಿದ್ದೇವೆ. ಪ್ರತಿ ವಿಮಾನದಲ್ಲಿ ಸುಮಾರು 200 ವಿದ್ಯಾರ್ಥಿಗಳು ಇದ್ದರು ಎಂದು ವಿಕೆ ಸಿಂಗ್ ಹೇಳಿದರು. ಕೆಲವು ವಿದ್ಯಾರ್ಥಿಗಳು ತಮ್ಮ ಸ್ನೇಹಿತರು ತಮ್ಮ ಸಂಬಂಧಿಕರು ಇಲ್ಲಿರುವುದರಿಂದ ವಾರ್ಶಾದಲ್ಲಿ ಉಳಿದುಕೊಂಡಿದ್ದಾರೆ. ಈ ಜನರು ಪೋಲೆಂಡ್ನಲ್ಲಿ ಸುರಕ್ಷಿತವಾಗಿದ್ದಾರೆ ಎಂದಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಯುಎನ್ ವರದಿಯ ಪ್ರಕಾರ, ಒಂದು ಮಿಲಿಯನ್ಗಿಂತಲೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ಉಕ್ರೇನ್ ನಾಗರಿಕರಿಗೆ ಉಕ್ರೇನ್ನಿಂದ ಹೊರಬರಲು ಮತ್ತು ವೈದ್ಯಕೀಯ ಸೇವೆಗಳನ್ನು ಒದಗಿಸಲು ಸುರಕ್ಷಿತ ಕಾರಿಡಾರ್ ನಿರ್ಮಿಸಲಾಗಿದೆ. ಈ ಕಾರಿಡಾರ್ ಮೂಲಕ ಸಾಮಾನ್ಯ ನಾಗರಿಕರು ಉಕ್ರೇನ್ನಿಂದ ಹೊರಗೆ ಹೋಗಬಹುದು. ಇದಕ್ಕಾಗಿ ಉಭಯ ದೇಶಗಳು ಕಾರಿಡಾರ್ಗಳ ಮೇಲೆ ದಾಳಿ ನಡೆಸುವುದನ್ನು ನಿಲ್ಲಿಸಲು ಒಪ್ಪಿಕೊಂಡಿವೆ.

ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಮರಳಿ ಕರೆತರಲು ಭಾರತವು 'ಆಪರೇಷನ್ ಗಂಗಾ' ಹೆಸರಿನ ಬೃಹತ್ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನಾಗರಿಕ ವಿಮಾನಯಾನ ಸಚಿವಾಲಯದೊಂದಿಗೆ ನಿಕಟ ಸಮನ್ವಯದೊಂದಿಗೆ ಭಾರತೀಯ ವಿದ್ಯಾರ್ಥಿಗಳನ್ನು ಭಾರತಕ್ಕೆ ವೇಗವಾಗಿ ಕರೆತರಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಭಾರತೀಯ ವಿಮಾನಯಾನ ಸಂಸ್ಥೆಗಳು ತಮ್ಮ ಸಂಪನ್ಮೂಲಗಳನ್ನು ವೇಗವಾಗಿ ಸ್ಥಳಾಂತರಿಸುವ ಪ್ರಕ್ರಿಯೆಯಲ್ಲಿ ತೊಡಗಿಸುತ್ತಿವೆ. ನಾಲ್ವರು ಕೇಂದ್ರ ಸಚಿವರು- ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಎಂ ಸಿಂಧಿಯಾ, ಕಿರಣ್ ರಿಜಿಜು ಮತ್ತು ಜನರಲ್ (ನಿವೃತ್ತ) ವಿ ಕೆ ಸಿಂಗ್ ಅವರು ಈ ಕಾರ್ಯಾಚರಣೆಗಳನ್ನು ಬೆಂಬಲಿಸಲು ಮತ್ತು ಮೇಲ್ವಿಚಾರಣೆ ಮಾಡಲು ಉಕ್ರೇನ್ನ ಪಕ್ಕದ ದೇಶಗಳಿಗೆ ತೆರಳಿದ್ದಾರೆ.

ಭಾರತೀಯ ನಾಗರಿಕ ವಿಮಾನಗಳು ಮತ್ತು ಭಾರತೀಯ ವಾಯುಪಡೆಯ ವಿಮಾನಗಳು ನಿಯಮಿತವಾಗಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಮರಳಿ ಕರೆತರುತ್ತಿವೆ. ಫೆಬ್ರವರಿ 22 ರಂದು ಪ್ರಾರಂಭವಾದ ಸ್ಥಳಾಂತರಿಸುವ ಪ್ರಕ್ರಿಯೆಯು 10 ವಿಶೇಷ ನಾಗರಿಕ ವಿಮಾನಗಳ ಮೂಲಕ ಇಂದು ಬರುತ್ತಿರುವ 2185 ಜನರನ್ನು ಸೇರಿದಂತೆ ಇದುವರೆಗೆ 6200 ಜನರನ್ನು ಮರಳಿ ಕರೆತಂದಿದೆ. ಅವುಗಳಲ್ಲಿ ಬುಕಾರೆಸ್ಟ್ನಿಂದ 5, ಬುಡಾಪೆಸ್ಟ್ನಿಂದ 2, ಕೊಸಿಸ್ನಿಂದ 1 ಮತ್ತು ಸಿವಿಲಿಯನ್ ಏರ್ಲೈನ್ಸ್ನಿಂದ ರ್ಜೆಸ್ಜೋವ್ನಿಂದ 2 ವಿಮಾನಗಳಲ್ಲಿ ಭಾರತೀಯರು ತಾಯ್ನಾಡಿಗೆ ಬಂದಿದ್ದಾರೆ. ಇದಲ್ಲದೆ, 3 IAF ವಿಮಾನಗಳು ಇಂದು ಹೆಚ್ಚಿನ ಭಾರತೀಯರನ್ನು ಕರೆತರುತ್ತಿವೆ. ನಾಗರಿಕ ವಿಮಾನಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲಾಗುವುದು ಮತ್ತು ಮುಂದಿನ ಎರಡು ದಿನಗಳಲ್ಲಿ ವಿಶೇಷ ವಿಮಾನಗಳ ಮೂಲಕ 7400 ಕ್ಕೂ ಹೆಚ್ಚು ಜನರನ್ನು ಕರೆತರುವ ನಿರೀಕ್ಷೆಯಿದೆ. ನಾಳೆ 3500 ಮತ್ತು ಮಾರ್ಚ್ 5 ರಂದು 3900 ಕ್ಕೂ ಹೆಚ್ಚು ಜನರನ್ನು ಕರೆತರುವ ನಿರೀಕ್ಷೆಯಿದೆ.












Click it and Unblock the Notifications