Reduce Age: ವಯಸ್ಸು ಕಡಿಮೆಗೊಳಿಸಲು ದಿನಕ್ಕೆ 111 ಮಾತ್ರೆ ತೆಗೆದುಕೊಳ್ಳುತ್ತಿರುವ ಅಮೆರಿಕಾದ ಕೋಟ್ಯಾಧಿಪತಿ!
ಅಮೆರಿಕಾದ ಕೋಟ್ಯಾಧಿಪತಿಯೊಬ್ಬರು ವಯಸ್ಸು ಕಡಿಮೆಗೊಳಿಸಲು ದಿನಕ್ಕೆ 111 ಮಾತ್ರೆ ತೆಗೆದುಕೊಳ್ಳುತ್ತಿರುವ ಅಪರೂಪದ ಘಟನೆ ವರದಿಯಾಗಿದೆ. ಕೇಲವ ಮಾತ್ರ ಮಾತ್ರವಲ್ಲದೆ ಅದಕ್ಕೆ ಬೇಕಾದ ಬ್ಲೂಪ್ರಿಂಟ್ ಎಂದು ಕರೆಯಲ್ಪಡುವ ಅದ್ಭುತ ಫಿಟ್ನೆಸ್ ದಿನಚರಿಯನ್ನು ಇವರು ಅನುಸರಿಸುತ್ತಾರೆ.
46 ವರ್ಷದ ಉದ್ಯಮಿ ಟೆಕ್ ಮ್ಯಾಗ್ನೇಟ್ ಬ್ರಿಯಾನ್ ಜಾನ್ಸನ್ ಎಂಬುವವರು ದಿನಕ್ಕೆ 111 ಮಾತ್ರೆ ತೆಗೆದುಕೊಳ್ಳುತ್ತಿರುವ ವ್ಯಕ್ತಿ. ಇವರು ವಯಸ್ಸನ್ನು ಕಡಿಮೆ ಮಾಡಲು ಬ್ಲೂಪ್ರಿಂಟ್ ಅನ್ನು ಅನುಸರಿಸುತ್ತಾರೆ. ಈ ಬ್ಲೂಪ್ರಿಂಟ್ನಲ್ಲಿ ಮಾತ್ರೆಗಳ ಸೇವನೆ, ಕಠಿಣ ಆಹಾರದ ನಿರ್ಬಂಧಗಳು ಮತ್ತು ವ್ಯಾಯಾಮಕ್ಕೆ ಅಚಲವಾದ ಬದ್ಧತೆ ಸೇರಿವೆ.

ಅಮರತ್ವಕ್ಕಾಗಿ ನೀಲನಕ್ಷೆ
ಬ್ರಿಯಾನ್ ಜಾನ್ಸನ್ ಅವರು ಮರಣವನ್ನು ಮೀರಿಸುವ ಅಂದರೆ ಅವರ ವಯಸ್ಸನ್ನು ಕಡಿಮೆ ಮಾಡುವ ಬ್ಲೂಪ್ರಿಂಟ್ ಎಂದು ಸೂಕ್ಷ್ಮವಾಗಿ ರಚಿಸಲಾದ ಯೋಜನೆಯನ್ನು ಅನುಸರಿಸುತ್ತಿದ್ದಾರೆ. ಈ ಯೋಜನೆ ಪ್ರಕಾರ ಅವರು ದಿನಕ್ಕೆ 111 ಮಾತ್ರೆಗಳನ್ನು ಸೂಚನೆಯಂತೆ ತಪ್ಪದೆ ಸೇವನೆ ಮಾಡಬೇಕು. ಮಾತ್ರವಲ್ಲದೆ ಇದು ಕಟ್ಟುನಿಟ್ಟಾದ ಆಹಾರ ಪದ್ಧತಿಯನ್ನು ಮತ್ತು ಫಿಟ್ನೆಸ್ ದಿನಚರಿಯನ್ನು ಒಳಗೊಂಡಿದೆ. ಜಾನ್ಸನ್ ಅತ್ಯಾಧುನಿಕ ಆರೋಗ್ಯ-ಮೇಲ್ವಿಚಾರಣಾ ಸಾಧನಗಳನ್ನು ಬಳಸಿಕೊಳ್ಳುವ ಮೂಲಕ ತಮ್ಮ ಅನ್ವೇಷಣೆಯನ್ನು ಮಾಡಿಕೊಳ್ಳುತ್ತಾರೆ.
ಈ ಅತ್ಯಾಧುನಿಕ ಅಲ್ಗಾರಿದಮ್ಗೆ ತನ್ನ ದೇಹದ ನಿರ್ವಹಣೆಯನ್ನು ಹೊರಗುತ್ತಿಗೆ ನೀಡುವ ಮೂಲಕ, ಜಾನ್ಸನ್ ಅವರು ಅಮರತ್ವದ ರಹಸ್ಯಗಳನ್ನು ಅನ್ಲಾಕ್ ಮಾಡಲು ಬಯಸುತ್ತಾರೆ. ಅದೇನೇ ಇದ್ದರೂ, ವಿಮರ್ಶಕರು ಸಂಬಂಧಿತ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಮರಣವು ಮಾನವ ಅಸ್ತಿತ್ವದ ಅಂತರ್ಗತ ಅಂಶವಾಗಿದೆ. ಜಾನ್ಸನ್ ಅವರ ವಿಧಾನವು ಪ್ರಮುಖ ಮಾನವ ಅನುಭವಗಳು ಮತ್ತು ಭಾವನೆಗಳನ್ನು ತೆಗೆದುಹಾಕಬಹುದು ಎಂದು ಪ್ರತಿಪಾದಿಸುತ್ತಾರೆ.
ಜಾನ್ಸ್ನ್ ಯಾರು?
ವಯಸ್ಸು ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ಜಾನ್ಸನ್ ಅಧಿಕ ಹಣ ಖರ್ಚು ಮಾಡುತ್ತಿದ್ದಾರೆ. ಅಷ್ಟಕ್ಕೂ ಜಾನ್ಸ್ನ್ ಒಬ್ಬ ಸಾಮಾನ್ಯ ವ್ಯಕ್ತಿಯಲ್ಲ. ಆತ ಕ್ಯಾಲಿಫೋರ್ನಿಯಾದ ಕೋರ್ಟಾಧಿಪತಿ ಉದ್ಯಮಿ. ಅವರು ಬ್ರೈನ್ಟ್ರೀ ಅನ್ನು ಸ್ಥಾಪಿಸುವ ಮೂಲಕ ಖ್ಯಾತಿಯನ್ನು ಗಳಿಸಿದ್ದಾರೆ. ನಂತರ ವೆನ್ಮೊವನ್ನು ಸ್ವಾಧೀನಪಡಿಸಿಕೊಂಡು ಅದನ್ನು 800 ಮಿಲಿಯನ್ ಮೊತ್ತಕ್ಕೆ ನೀಡಿದರು. ಜಾನ್ಸನ್ ಅವರ ವ್ಯಾಲೆಟ್ 300 ಮಿಲಿಯನ್ ಎಂದು ಹೇಳಲಾಗುತ್ತದೆ. ಆದರೂ ಅವರ ಇಂತೆಲ್ಲಾ ಪ್ರಯತ್ನಗಳಿಂದಾಗಿ 2004 ರ ವೇಳೆ ಅವರ ಆರ್ಥಿಕ ಯಶಸ್ಸು ಇಳಿಮುಖವಾಗಿದೆ.
ಹದಿನೇಳು ವಯಸ್ಸಿನ ಮಗ ಕೂಡ ಇದ್ದಾನೆ. ಈಗಾಲೇ ತನ್ನ ಎಪಿನೆಟಿಕ್ ವಯಸ್ಸನ್ನು 5.1 ವರ್ಷಗಳನ್ನು ಕಡಿಮೆಗೊಳಿಸಿದೆ ಎಂದು ಆತ ಹೇಳಿಕೊಂಡಿದ್ದಾನೆ. ಮತ್ತೆ ಹದಿನೆಂಟರ ಯುವಕನಾಗಲು ಇವರು ಬಯಸುತ್ತಾರೆ. ಅದನ್ನು ಸಾಧಿಸಲು ಆರೋಗ್ಯ ವೃತ್ತಿಪರರು, ವೈದ್ಯರು ಮತ್ತು ಹಲವಾರು ಯಂತ್ರಗಳ ಮೊರೆಹೋಗಿದ್ದಾರೆ.
ದಿನಚರಿಯಲ್ಲಿ ರಾತ್ರಿ 8.30ಕ್ಕೆಲ್ಲಾ ಮಲಗಿಡುತ್ತಾರೆ. ಬೆಳಗ್ಗೆ 6 ಗಂಟೆಯಿಂದ 11 ರವರೆಗೆ ದಿನಕ್ಕೆ 2250 ಕ್ಯಾಲೊರಿಗಳನ್ನು ಸೇವಿಸುವರು. ನಾಲ್ಕರಿಂದ ಐದು ಗಮಟೆಗಳ ಕಾಲ 'ಏಕಾಗ್ರಚಿತ್ತದೊಂದಿಗೆ ಕೇಂದ್ರೀಕೃತ ಆಲೋಚನೆ'ಗಾಗಿ ಮೀಸಲಿಡುತ್ತಾನೆ. ಇನ್ನು ಈತ ಡ್ರಿಂಕ್ಸ್ ತೆಗೆದುಕೊಳ್ಳುವುದಿಲ್ಲ. ಹೆಣ್ಮಕ್ಕಳ ಸಹವಾಸ ಮಾಡುವುದಿಲ್ಲ. ಸಂಗಾತಿಯಿಂದಲೂ ದೂರವಿರುತ್ತಾರೆ. ತಪ್ಪದೇ ದಿನಕ್ಕೆ 111 ಮಾತ್ರೆ ತೆಗೆದುಕೊಳ್ಳುತ್ತಾನೆ. ಇದರಿಂದಾಗಿ ನಾನು ಒಬ್ಬೊಂಟಿಯಾಗಿಬಿಟ್ಟಿದ್ದೇನೆ ಎನ್ನುತ್ತಾರೆ ಜಾನ್ಸನ್.
ಆಮೂಲಾಗ್ರವಾಗಿ ಜೀವನದಲ್ಲಾದ ಬದಲಾವಣೆಗಳು
ಅವರ ಕಂಪನಿಯ ಮಾರಾಟದ ನಂತರ ಜಾನ್ಸನ್ ಅವರು ಹಿಂದೆ ಅಧಿಕ ವೈಯಕ್ತಿಕ ಜೀವನದಲ್ಲಿ ಬದಲಾವಣೆಗಳಿಗೆ ಒಳಗಾದರು. ಇದು ಅವರ ವಯಸ್ಸು ಕಡಿಮೆ ಮಾಡಿಕೊಳ್ಳಲು ಬಯಸಲು ಗಮನಾರ್ಹ ಕಾರಣವಾಗಿದೆ. 2014 ರಲ್ಲಿ ಅವರು AI, OS ನಿಧಿಯನ್ನು ಸ್ಥಾಪಿಸಲು $ 100 ಮಿಲಿಯನ್ ಅನ್ನು ಸಿದ್ಧಗೊಳಿಸಿದರು. 2016 ರಲ್ಲಿ ಅವರು ಮೆದುಳಿನ ಚಟುವಟಿಕೆಯನ್ನು ಅಳೆಯುವ ಮತ್ತು ಅರಿವಿನ ದುರ್ಬಲತೆಯನ್ನು ಪತ್ತೆಹಚ್ಚುವ ಗುರಿಯನ್ನು ಹೊಂದಿರುವ ನರತಂತ್ರಜ್ಞಾನ ಸಂಸ್ಥೆಯಾದ ಕರ್ನಲ್ ಅನ್ನು ಸ್ಥಾಪಿಸಿದರು.
ಈ ಪ್ರಕ್ರಿಯೆ ಅಪಾಯ
ಈ ಪ್ರಕ್ರಿಯೆ ನಿಸರ್ಗಕ್ಕೆ ವಿರುದ್ಧವಾದದ್ದು. ಇದರಿಂದ ಅಪಾಯ ಕಟ್ಟಿಟ್ಟಬುತ್ತಿ. ಹಾಗಂತ ಈ ಬಗ್ಗೆ ಜಾನ್ಸನ್ಗೆ ತಿಳಿದಿಲ್ಲವೆಂದು ಭಾವಿಸಬೇಡಿ. ಅವರು ಇದೆಲ್ಲದರ ಅರಿವಿನ ಹೊರತಾಗಿಯೂ ತಮ್ಮ ವಯಸ್ಸನ್ನು ಕಡಿಮೆ ಮಾಡಿಕೊಳ್ಳಲು ಅಮರತ್ವದ ಅನ್ವೇಷಣೆಗೆ ಮುಂದಾಗಿದ್ದಾರೆ. ಅವರು ತಮ್ಮ ಅನ್ವೇಷಣೆಯಲ್ಲಿ ಒಳಗೊಂಡಿರುವ ಅಪಾಯಗಳನ್ನು ಒಪ್ಪಿಕೊಳ್ಳುತ್ತಾರೆ. ಅವರಿಗೆ ತಮ್ಮ ವಯಸ್ಸು ಕಡಿಮೆ ಮಾಡಿಕೊಳ್ಳುವ ಆಸೆ ಎಷ್ಟಿದೆ ಅಂದರೆ ಎಲ್ಲಕ್ಕಿಂತ ಹೆಚ್ಚಾಗಿ ಅವರು ತಮ್ಮ ಅನ್ವೇಷಣೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಸವಾಲಿನ ಡೇಟಿಂಗ್ ಅನ್ನು ಅನುಸರಿಸುತ್ತಾರೆ.
ಜಾನ್ಸನ್ ತಮ್ಮ ಈ ಅನ್ವೇಷಣೆಯ ಬಗ್ಗೆ ತುಂಬಾ ಜಾಗರೂಕರಾಗಿದ್ದಾರೆ. ಆ ಬಗ್ಗೆ ಅವರು ಆನ್ಲೈನ್ನಲ್ಲಿ ವೀಡಿಯೊಗಳು ಮತ್ತು ಸುದ್ದಿಪತ್ರಗಳ ಮೂಲಕ ತಮ್ಮ ಜೈವಿಕ ಮೆಟ್ರಿಕ್ಗಳು, ಆಹಾರ ಪದ್ಧತಿಗಳು ಮತ್ತು ಚಿಕಿತ್ಸಕ ಪ್ರಯೋಗಗಳನ್ನು ಬಹಿರಂಗವಾಗಿ ಹಂಚಿಕೊಳ್ಳುತ್ತಾರೆ. ಸಾವು ಅನಿವಾರ್ಯವಲ್ಲ ಎಂಬ ಅವರ ನಂಬಿಕೆಯು ಅವರ ಉದ್ದೇಶಕ್ಕೆ ಬಲ ನೀಡಿದೆ.
ಬ್ರಿಯಾನ್ ಜಾನ್ಸನ್ ಅವರ ಪಟ್ಟುಬಿಡದ ಪ್ರಯಾಣ ಮಿತಿಯಿಲ್ಲದ ಸಾಧ್ಯತೆಗಳಿಗೆ ಸಾಕ್ಷಿಯಾಗಿದೆ. ಅವರ ಅಸಾಂಪ್ರದಾಯಿಕ ಜೀವನಶೈಲಿ, ಕಟ್ಟುನಿಟ್ಟಾದ ಆಹಾರ ಪದ್ಧತಿ, ವ್ಯಾಪಕವಾದ ಮಾತ್ರೆ ಸೇವನೆ ಮತ್ತು ಅತ್ಯಾಧುನಿಕ ಆರೋಗ್ಯ ಮೇಲ್ವಿಚಾರಣೆಯನ್ನು ಒಳಗೊಂಡಿರುತ್ತದೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು












Click it and Unblock the Notifications