ಲಿಬಿಯಾ: 7 ವರ್ಷಗಳ ಬಳಿಕ ಮುಅಮ್ಮರ್ ಗಡಾಫಿ ಪುತ್ರನ ಬಿಡುಗಡೆ
ಲಿಬಿಯಾ, ಸೆಪ್ಟೆಂಬರ್ 06: ಸತತ ಏಳು ವರ್ಷಗಳ ಬಳಿಕ ಲಿಬಿಯಾದ ವಿವಾದಾತ್ಮಕ ಸರ್ವಾಧಿಕಾರಿ ಮೊಅಮ್ಮರ್ ಗಡಾಫಿ ಪುತ್ರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಗಡಾಳಿ ಸರ್ಕಾರದಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದ ಹಲವು ಮಂದಿ ಅಧಿಕಾರಿಗಳು ಇನ್ನೂ ಜೈಲಿನಲ್ಲಿಯೇ ಕೊಳೆಯುತ್ತಿದ್ದು ನ್ಯಾಯಾಂಗ ವಿಚಾರಣೆ ನಡೆಯುತ್ತಿದೆ.
2011ರಲ್ಲಿ ಲಿಬಿಯಾದಲ್ಲಿ ನಾಗರಿಕ ದಂಗೆಯೆದ್ದು ದೀರ್ಘಕಾಲದಿಂದ ಅಧಿಕಾರದಲ್ಲಿದ್ದ ಗದ್ದಾಫಿ ಪದಚ್ಯುತಗೊಳ್ಳಲು ಕಾರಣವಾಗಿತ್ತು. ನಂತರ ಗಡಾಫಿ ಹತ್ಯೆಯಾಗಿತ್ತು.

2011ರ ದಂಗೆ ಸಮಯದಲ್ಲಿ ಗಡಾಫಿ ಪುತ್ರ ಅಲ್ ಸಾದ್ ಗಡಾಫಿ ಬಂಡುಕೋರರು ಹಾಗೂ ಪ್ರತಿಭಟನಾಕಾರರ ವಿರುದ್ಧ ವಿಶೇಷ ಭದ್ರತಾಪಡೆ ಕಟ್ಟಿಕೊಂಡು ದಾಳಿಯಲ್ಲಿ ತೊಡಗಿದ್ದರು. ಗಟಾಫಿಗೆ 8 ಮಂದಿ ಮಕ್ಕಳು. ಅವರಲ್ಲಿ ಮೂವರು ಹತ್ಯೆಯಾಗಿದ್ದಾರೆ. ಇಬ್ಬರು ಇನ್ನೂ ಬಂಧನದಲ್ಲಿದ್ದಾರೆ. ಉಳಿದವರು ಅಲ್ಜೀರಿಯ ಮತ್ತು ಓಮನ್ ಆಶ್ರಯದಲ್ಲಿದ್ದಾರೆ.
ಲಿಬಿಯಾದ ವಿವಾದಾತ್ಮಕ ಸರ್ವಾಧಿಕಾರಿಯಾಗಿದ್ದ ದಿ. ಮುಅಮ್ಮರ್ ಪುತ್ರನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಪ್ರಕಟಿಸಿದೆ. ಗದಾಫಿ ಪುತ್ರ ಅಲ್ ಸಾದಿ ಗದ್ದಾಫಿ ಕಳೆದ 7 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದರು.
ನ್ಯಾಯಾಲಯದ ಆದೇಶದ ಮೇರೆಗೆ ಈ ಬಿಡುಗಡೆ ನಡೆದಿರುವುದಾಗಿ ಲಿಬಿಯಾದ ಪ್ರಧಾನಿ ಅಬ್ದುಲ್ ಹಮೀದ್ ಟ್ವೀಟ್ ಮಾಡಿದ್ದಾರೆ. ಮಧ್ಯಂತರ ಸರ್ಕಾರದ ವಕ್ತಾರ ಮೊಹಮದ್ ಹಮೌದ್ ಈ ಬಗ್ಗೆ ಹೇಳಿಕೆ ನೀಡಿದ್ದು, ಅಲ್ ಸಾದಿ ಗದ್ದಾಫಿ ಟ್ರಿಪೋಲಿಯಲ್ಲಿನ ಅಲ್ ಹಡಬ ಬಂದೀಖಾನೆಯಿಂದ ಬಿಡುಗಡೆಯಾಗಿರುವುದನ್ನು ಖಚಿತ ಪಡಿಸಿದ್ದಾರೆ.
ತಂದೆಯ ಅಡಳಿತ ವಿರುದ್ದ ದಂಗೆ ಎದ್ದ ಅರೋಪದ ಮೇಲೆ ಏಳು ವರ್ಷಗಳ ಹಿಂದೆ ನೈಜೀರಿಯಾದಿಂದ ಗಡಿಪಾರಾಗಿ, ಟ್ರಿಪೋಲಿಯಲ್ಲಿ ಬಂಧಿಸಲ್ಪಟ್ಟ ಲಿಬಿಯಾದ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ಅವರ ಪುತ್ರ ಅಲ್-ಸಾದಿ ಗಡಾಫಿಯನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.
ರಾಜಧಾನಿ ಟ್ರಿಪೊಲಿಯ ಅಲ್-ಹದಬ ಜೈಲಿನಿಂದ ಅಲ್-ಸಾದಿ ಗಡಾಫಿಯನ್ನು ಬಿಡುಗಡೆ ಮಾಡಲಾಗಿದೆ. 2011ರ ದಂಗೆಯ ಸಂದರ್ಭ ಬಂಧಿಸಲ್ಪಟ್ಟಿರುವ ಗಡಾಫಿ ಆಡಳಿತದ ಅನೇಕ ಅಧಿಕಾರಿಗಳು ಇನ್ನೂ ಜೈಲಿನಲ್ಲಿದ್ದಾರೆ" ಎಂದು ಸರ್ಕಾರದ ಅಧಿಕಾರ ಹಸ್ತಾಂತರ ಪ್ರಕ್ರಿಯೆ ವಕ್ತಾರ ಮೊಹಮ್ಮದ್ ಹಮೌದಾ ಮಾಹಿತಿ ನೀಡಿದ್ದಾರೆ.
ತನ್ನ ತಂದೆಯ ಆಡಳಿತದ ವಿರುದ್ಧದ ದಂಗೆಯ ಆರೋಪದ ಮೇಲೆ ಆಲ್-ಸಾದಿ ಗಡಾಫಿಯನ್ನು ಬಂಧಿಸಲಾಗಿತ್ತು. ಈ ಆರೋಪದಿಂದ ಮುಕ್ತಗೊಳಿಸಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಬಿಡುಗಡೆಗೊಂಡ ಬಳಿಕ ಸಾದಿ ಗಡಾಫಿ ಅವರು ಟರ್ಕಿಗೆ ಪ್ರಯಾಣಿಸಿದರು ಎಂದು ವರದಿ ತಿಳಿಸಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications