16 ತಿಂಗಳ ಹಸುಗೂಸನ್ನು ಒಂಟಿಯಾಗಿ ಬಿಟ್ಟು 10 ದಿನ ಪ್ರವಾಸ ತೆರಳಿದ ತಾಯಿ, ಹಸಿವಿನಿಂದ ಮಗು ಸಾವು
ಕ್ಲೀವ್ಲ್ಯಾಂಡ್, ಜೂನ್. 27: ಜಗತ್ತಿನಲ್ಲಿ ಕೆಟ್ಟ ಮಕ್ಕಳಿದ್ದರೂ ಕೆಟ್ಟ ತಾಯಿ ಇರುವುದಿಲ್ಲ ಎಂಬ ಮಾತಿದೆ. ಇದಕ್ಕೆ ಕೋಟ್ಯಾಂತರ ತಾಯಂದಿರು ಜೀವಂತ ಸಾಕ್ಷಿಯಾಗಿದ್ದಾರೆ. ಆದರೆ, ಇಲ್ಲೊಂದು ಘಟನೆಯಲ್ಲಿ ಹೆತ್ತ ತಾಯಿಯೇ ತನ್ನ ಹಸುಗೂಸಿನ ಸಾವಿಗೆ ಕಾರಣರಾಗಿದ್ದಾರೆ. ತಾನು ಪ್ರವಾಸ ಮಾಡಬೇಕು ಎನ್ನುವ ಕಾರಣದಿಂದ ಮಗುವನ್ನು ಸಾವಿನ ದವಡೆಗೆ ನೂಕಿದ್ದಾರೆ.
ಕ್ಲೀವ್ಲ್ಯಾಂಡ್ನ ಓಹಿಯೋ ನಗರದ ತಾಯಿಯೊಬ್ಬರು ತನ್ನ 16 ತಿಂಗಳ ಮಗು ಮಗಳನ್ನು ಮನೆಯಲ್ಲಿ ಒಂಟಿಯಾಗಿ ಬಿಟ್ಟು 10 ದಿನಗಳ ಕಾಲ ರಜೆಯ ಮೇಲೆ ಪ್ರವಾಸಕ್ಕೆ ತೆರಳಿದ್ದಾರೆ. ಮನೆಯಲ್ಲಿ ಒಬ್ಬಂಟಿಯಾಗಿ ಮಗುವನ್ನು ಬಿಟ್ಟು ಹೋಗಿದ್ದರಿಂದ ಹಸಿವು, ಬಾಯಾರಿಕೆಯಿಂದ ಮಗು ಸಾವನ್ನಪ್ಪಿದೆ. ಹೀಗಾಗಿ ತಾಯಿಯ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ.

ಕ್ರಿಸ್ಟೆಲ್ ಕ್ಯಾಂಡೆಲಾರಿಯೊ ಎಂಬ 31 ವರ್ಷ ಮಹಿಳೆ ತನ್ನ 16 ತಿಂಗಳ ಹೆಣ್ಣು ಮಗು ಜೈಲಿನ್ ಅವರನ್ನು ಕ್ಲೀವ್ಲ್ಯಾಂಡ್ ಮನೆಯಲ್ಲಿ ಒಬ್ಬಂಟಿಯಾಗಿ ಬಿಟ್ಟು ಹೋಗಿರುವ ಕಾರಣ ಅವರ ಮೇಲೆ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯುಯಾಹೋಗಾ ಕೌಂಟಿ ವೈದ್ಯಕೀಯ ಪರೀಕ್ಷಕರ ಕಚೇರಿಯ ಪ್ರಕಾರ, "ಮಗುವಿನ ದೇಹದ ಮೇಲೆ ಯಾವುದೇ ಗಾಯಗಳು ಕಂಡುಬಂದಿಲ್ಲ. ಮಗುವನ್ನು ಸುಮಾರು 10 ದಿನಗಳ ಕಾಲ ಏಕಾಂಗಿಯಾಗಿ ಬಿಡಲಾಗಿತ್ತು ಮತ್ತು ನಂತರ ಅದು ಸಾವನ್ನಪ್ಪಿದೆ" ಎಂದು ಹೇಳಿದ್ದಾರೆ.
ಡಿಟೆಕ್ಟಿವ್ ಥೆಲೆಮನ್ ಪೊವೆಲ್ ಜೂನಿಯರ್ ಅಫಿಡವಿಟ್ನಲ್ಲಿ ಕ್ರಿಸ್ಟೆಲ್ ಕ್ಯಾಂಡೆಲಾರಿಯೊ ಅವರು ತಮ್ಮ ಮಗಳನ್ನು ಮನೆಯಲ್ಲಿ ಏಕಾಂಗಿಯಾಗಿ ಮತ್ತು ಗಮನಿಸದೆ ಬಿಟ್ಟಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ತನಿಖಾಧಿಕಾರಿಗಳು ಮತ್ತು ಅಕ್ಕ ಪಕ್ಕಷ ಶಂಕಿತರು ಅವರು ಮನೆಗೆ ಬಂದಾಗ ಅವರು ಹಸುಗೂಸು "ಅತ್ಯಂತ ನಿರ್ಜಲೀಕರಣಗೊಂಡಿದ್ದಾರೆ" ಎಂದು ಹೇಳಿದ್ದಾರೆ
ಮಗುವಿನ ಹಾಸಿಗೆಗಳು ಕೋಳಕಾಗಿದ್ದವು. ಹೊದಿಕೆಗಳು ಮೂತ್ರ ಮತ್ತು ಮಲದಿಂದ ತುಂಬಿದ್ದವು. ಮಗು ಊಟ, ನೀರಿಲ್ಲದೆ ಅತ್ತೂ ಅತ್ತೂ ಸಾವನ್ನಪ್ಪಿದೆ ಎಂದು ಡಿಟೆಕ್ಟಿವ್ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಆರೋಪಿ ತಾಯಿ ಕ್ರಿಸ್ಟೆಲ್ ಕ್ಯಾಂಡೆಲಾರಿಯೊ ಅವರನ್ನು 1 ಮಿಲಿಯನ್ ಡಾಲರ್ ಬಾಂಡ್ನಲ್ಲಿ ಕ್ಯುಯಾಹೋಗಾ ಕೌಂಟಿ ಜೈಲಿನಲ್ಲಿ ಇರಿಸಲಾಗಿದೆ ಎಂದು ನ್ಯಾಯಾಲಯದ ದಾಖಲೆಗಳು ತೋರಿಸಿವೆ.
ಆರೋಪಿ ನವೆಂಬರ್ 2022 ರಿಂದ ಕ್ಲೀವ್ಲ್ಯಾಂಡ್ನ ಪ್ರಾಥಮಿಕ ಶಾಲೆಯಾದ ಸಿಟಿಜನ್ಸ್ ಅಕಾಡೆಮಿ ಗ್ಲೆನ್ವಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ಆಕೆಯನ್ನು ಶಾಲೆಯಲ್ಲಿ ಕೆಲಸದಿಂದ ವಜಾ ಮಾಡಲಾಗಿದೆ.
ಆಕೆ ಪ್ರವಾಸಕ್ಕೆ ಮಗುವನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಕೊಂಡಿದ್ದೇವು. ಆಕೆ ಮನೆಯಲ್ಲಿ ಬಿಟ್ಟು ಹೋಗಿದ್ದಾಳೆಂದು ನಮಗೆ ನಂಬಲಾಗಲಿಲ್ಲ. ಆ ಮಗು ಯಾವಾಗಲೂ ನಗುತ್ತಿರುವ,ಕುತೂಹಲದಿಂದ ಕೂಡಿದ್ದ ಅದ್ಭುತ ಮಗು ಎಂದು ನೆರೆ ಹೊರೆಯವರು ಹೇಳಿದ್ದಾರೆ. ಇನ್ನೊಬ್ಬರು ಮಗುವನ್ನು ಆಕೆ ಒಬ್ಬಂಟಿಯಾಗಿ ಬಿಟ್ಟಿರುವುದು ಇದೇ ಮೊದಲಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications