ನೇಪಾಳದಲ್ಲಿ ವಿಶ್ವದ ಅತಿದೊಡ್ಡ ಪ್ರಾಣಿಬಲಿ ಉತ್ಸವ
ಕಠ್ಮಂಡು, ನ.30: ವಿಶ್ವದ ಅತಿ ದೊಡ್ಡ ಪ್ರಾಣಿಬಲಿ ಉತ್ಸವ ಎನ್ನಲಾಗುವ ಗಧಿಮಾಯಿ ಜಾತ್ರೆ ನೇಪಾಳದಲ್ಲಿ ಸಂಪನ್ನವಾಗಿದೆ. ಪ್ರಾಣಿಪ್ರಿಯರ ವಿರೋಧದ ನಡುವೆಯೂ ದಕ್ಷಿಣ ನೇಪಾಳದಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಎಮ್ಮೆಗಳನ್ನು ಬಲಿ ಹಾಕಲಾಗಿದೆ.
ದಕ್ಷಿಣ ನೇಪಾಳದ ಬರಿಯಾರ್ಪುರ್ ಗ್ರಾಮದಲ್ಲಿರುವ ಗಧಿಮಾಯಿ ದೇವಾಲಯದಲ್ಲಿ ನಡೆಯುವ ಎರಡು ದಿನಗಳ ಸಾಮೂಹಿಕ ಪ್ರಾಣಿ ಬಲಿ ಮೇಳ ಶುಕ್ರವಾರ ಆರಂಭಗೊಂಡಿದ್ದ್ದು, ಮೊದಲದಿನವೇ ಸುಮಾರು 400ಕ್ಕೂ ಅಧಿಕ ಕಟುಕರು 5 ಸಾವಿರಕ್ಕೂ ಅಧಿಕ ಎಮ್ಮೆಗಳನ್ನು ವಧಿಸಿದ್ದಾರೆ. ಪ್ರಾಣಿ ಹಕ್ಕು ಕಾರ್ಯಕರ್ತರ ತೀವ್ರ ವಿರೋಧದ ನಡುವೆಯೇ ಈ ಸಾಮೂಹಿಕ ಪ್ರಾಣಿ ಬಲಿ ನಡೆದಿದೆ.
ಐದು ವರ್ಷಗಳಿಗೊಮ್ಮೆ ನಡೆಯವ ಈ ಜಾತ್ರೆಯಲ್ಲಿ ಎಮ್ಮೆ, ಅದರಲ್ಲೂ ಮುಖ್ಯವಾಗಿ ಅವುಗಳ ಕರುಗಳನ್ನು ಸಾಮೂಹಿಕವಾಗಿ ಗಧಿಮಾಯಿ ದೇವತೆಗೆ ಬಲಿಕೊಡಲಾಗುತ್ತದೆ.
ಬಿಹಾರದ ಗಡಿಗೆ ಹೊಂದಿಕೊಂಡಿರುವ ಬಾರಾ ಜಿಲ್ಲೆಯಲ್ಲಿ ನಡೆಯುವ ಈ ಜಾತ್ರೆಗೆ ಭಾರತೀಯರು ಸೇರಿದಂತೆ ಸಾವಿರಾರು ಭಕ್ತರು ತೆರಳಿ ಬಲಿ ಸಮರ್ಪಿಸುತ್ತಾರೆ. ಇಲ್ಲಿ ಬಲಿ ನೀಡಲಾಗುವ ಎಮ್ಮೆ, ಮೇಕೆಗಳ ಪೈಕಿ ಶೇಕಡಾ 70ರಷ್ಟು ಭಾರತದಿಂದಲೇ ಸಾಗಾಟವಾಗುತ್ತದೆ.

ಶನಿವಾರ ಜಾತ್ರೆ ಮುಕ್ತಾಯಗೊಳ್ಳುವ ಮುನ್ನ ಸಾವಿರಾರು ಸಂಖ್ಯೆಯಲ್ಲಿ ಆಡು, ಹಂದಿ ಹಾಗೂ ಕೋಳಿಗಳನ್ನು ಬಲಿ ನೀಡಲಾಗುತ್ತದೆ. ಇದೊಂದು ತಲೆತಲಾಂತರದಿಂದ ಬಂಧಿರುವ ಧಾರ್ಮಿಕ ಸಂಪ್ರದಾಯವಾಗಿದೆ ಎಂದು ಈ ಕಾರ್ಯಕ್ರಮದ ಸಂಘಟಕರು ಸಮರ್ಥಿಸಿಕೊಂಡಿದ್ದಾರೆ.
ಜಾತ್ರೆಯ ಜನಜಂಗುಳಿಯ ವೇಳೆ ಬಿಹಾರದ ಓರ್ವ ವೃದ್ಧೆ ಹಾಗೂ ಒಂದು ವರ್ಷ ಪ್ರಾಯದ ಮಗು ಸಾವಿಗೀಡಾಗಿರುವ ಸುದ್ದಿಯೂ ಬಂದಿದೆ. 2009ರಲ್ಲಿ ನಡೆದ ಜಾತ್ರೆಯ ವೇಳೆ 25 ಸಾವಿರ ಎಮ್ಮೆಗಳನ್ನು ಬಲಿನೀಡಲಾಗಿದ್ದು, ಸಾಮೂಹಿಕ ಬಲಿಗೆ ಒಳಗಾಗಿರುವ ಇತರ ಪ್ರಾಣಿಪಕ್ಷಿಗಳ ಸಂಖ್ಯೆ ತಿಳಿದು ಬಂದಿಲ್ಲ.
ಈ ನಡುವೆ ಪ್ರಾಣಿಗಳನ್ನು ಬಲಿ ನೀಡುವುದರ ವಿರುದ್ಧ ಪ್ರಾಣಿ ದಯಾ ಸಂಘಗಳು ಸಾಕಷ್ಟು ಜಾಗೃತಿ ಮೂಡಿಸಿವೆ.ಬ್ರಿಟಿಷ್ ನಟಿ ಜೋಹಾನ್ನ ಲುಮ್ಲೆ, ಫ್ರೆಂಚ್ ನಟಿ ಬ್ರಿಗಿಟ್ಟೆ ಬಾರ್ಡಾಟ್ ಅವರು ನೇಪಾಳದ ಸರ್ಕಾರಕ್ಕೆ ಈ ಕ್ರೂರ ಕಾರ್ಯಕ್ರಮ ನಿಲ್ಲಿಸುವಂತೆ ಮನವಿ ಸಲ್ಲಿಸಿದ್ದಾರೆ.
ಭಾರತದಿಂದ ನೇಪಾಳಕ್ಕೆ ಪ್ರಾಣಿಗಳ ಸಾಗಣೆಗೆ ಕಳೆದ ತಿಂಗಳು ಸುಪ್ರೀಂಕೋರ್ಟ್ ನಿಷೇಧ ಹೇರಿತ್ತು. ಇದರಿಂದಾಗಿ ಈ ಬಾರಿ ಬಲಿಯಾಗಲಿರುವ ಪ್ರಾಣಿಗಳ ಸಂಖ್ಯೆಯಲ್ಲಿ ಇಳಿಕೆಯಾಗಲಿದೆ. ಆದರೆ, ಕಳೆದ ಮೂರು ತಿಂಗಳುಗಳಿಂದ ಮಾರುಕಟ್ಟೆಗಳಲ್ಲಿ ಜನರು ಬಲಿಗಾಗಿ 1.25 ಲಕ್ಷ ಮೇಕೆಗಳನ್ನು ಖರೀದಿಸಿರುವ ಮಾಹಿತಿ ಹೊರಬಿದ್ದಿದೆ.(ಪಿಟಿಐ)
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications