India Global Forum: ದುಬೈನಲ್ಲಿ ಇಂಡಿಯಾ ಗ್ಲೋಬಲ್ ಫೋರಂ ಯಶಸ್ವಿ
ದುಬೈ: ಇಂಡಿಯಾ ಗ್ಲೋಬಲ್ ಫೋರಮ್ ಮಿಡಲ್ ಈಸ್ಟ್ & ಆಫ್ರಿಕಾದ (IGF ME&A) 4ನೇ ಆವೃತ್ತಿಯು ದುಬೈನಲ್ಲಿ ನಡೆದಿದೆ. ಇದರಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜಾಗತಿಕ ಭೂದೃಶ್ಯದಲ್ಲಿ ಹೊಸ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕ ಅವಕಾಶಗಳ ಅನ್ವೇಷಣೆ ಬಗ್ಗೆ ಚರ್ಚೆಗಳು ನಡೆದಿವೆ.
ಹೊಸದಾಗಿ ಚುನಾಯಿತ ಸರ್ಕಾರದ ಅಡಿಯಲ್ಲಿ ಭಾರತವು ತನ್ನ ಜಾಗತಿಕ ಪಥವನ್ನು ಮುನ್ನಡೆಸುತ್ತಿರುವ ಸಂದರ್ಭದಲ್ಲಿ ಈ ಇಂಡಿಯಾ ಗ್ಲೋಬಲ್ ಫೋರಮ್ ಮಿಡಲ್ ಈಸ್ಟ್ & ಆಫ್ರಿಕಾದ 2ನೇ ದಿನವು ಭಾರತ, ಯುಎಇ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ನಡುವಿನ ಭವಿಷ್ಯಕ್ಕಾಗಿ ಸಹಯೋಗ ಸಾಮರ್ಥ್ಯವನ್ನು ಗುರುತಿಸಲು ಮತ್ತು ಅನ್ಲಾಕ್ ಮಾಡಲು ಜಾಗತಿಕ ನಾಯಕರನ್ನು ಒಟ್ಟುಗೂಡಿಸಿದೆ.

ಈ ಆವೃತ್ತಿಯ ಎರಡನೇ ದಿನವು ಯುಎಇ ಮೂಲದ ಡುಬೊಮೆಡಿ ಸಹ-ಸಂಸ್ಥಾಪಕಿ ಹಾಗೂ ಹಾಸ್ಯಗಾರರಾದ ಮಿನಾ ಲಿಸಿಯೋನ್ ಅವರೊಂದಿಗಿನ ಚರ್ಚೆಯೊಂದಿಗೆ ಶುರುವಾಯಿತು. ಹಾಸ್ಯವು ಸ್ಟೀರಿಯೊಟೈಪ್ಗಳನ್ನು ಮತ್ತು ಸಾಮಾಜಿಕ ಸಮಸ್ಯೆಗಳ ಮುಕ್ತ ಸಂವಾದಗಳಿಗೆ ಹೇಗೆ ಸವಾಲಾಗಿದೆ ಎಂಬುದರ ಕುರಿತು ಚರ್ಚೆ ನಡೆಯಿತು.
ಜನರು ಹಾಸ್ಯಗಾರರ ಮಾತನ್ನು ಹೆಚ್ಚು ಕೇಳುತ್ತಾರೆ. ಏಕೆಂದರೆ ಅದರಲ್ಲಿ ಸತ್ಯವಿದೆ, ಮತ್ತು ಅದು ಸ್ವಲ್ಪ ಹಗುರವಾಗಿರುತ್ತದೆ. ನಮಗೆಲ್ಲರಿಗೂ ಸ್ವಲ್ಪ ಹಾಸ್ಯಪ್ರಜ್ಞೆ ಇರಬೇಕು. ಹೆಚ್ಚು ಪುರುಷರನ್ನು ಹೊಂದಿರುವ ಕ್ಷೇತ್ರದಲ್ಲಿ ನಾನು ವೈಯಕ್ತಿಕವಾಗಿ ಕಮಿಡಿಯನ್ ಎಂದು ಕರೆಯಲು ಇಷ್ಟಪಡುತ್ತೇನೆ. ಆದರೆ ಮಹಿಳಾ ಹಾಸ್ಯಗಾರ್ತಿ ಅಥವಾ ಹಾಸ್ಯದ ಮಹಿಳೆ ಎಂದು ಕರೆಯುವುದಿಲ್ಲ ಎಂದು ಮಿನಾ ಲಿಸಿಯೋನ್ ಅವರು ಹೇಳಿದರು.
ಬಳಿಕ ತಂತ್ರಜ್ಞಾನದಲ್ಲಿ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವ ಬಗ್ಗೆಯೂ ಚರ್ಚೆಗಳು ನಡೆದವು. ಡಿಪಿ ವರ್ಲ್ಡ್ ಜಿಸಿಸಿಯ ಡಿಜಿಟಲ್ ಟೆಕ್ನಾಲಜಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮೊಹಮದ್ ಅಬುಹಮ್ರಾ ಅವರು ಸಂಭಾವ್ಯ ಅಡೆತಡೆಗಳನ್ನು ಎದುರಿಸುವಲ್ಲಿ ಸನ್ನದ್ಧತೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.
ಇಂದು ಆರ್ಟಿಫಿಶಿಯಲ್ ಇಂಟಲಿಜೆನ್ಸ್ (AI) ಕೈಗಾರಿಕೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ? ನಾವು ವ್ಯಾಪಾರ ಮತ್ತು ಲಾಜಿಸ್ಟಿಕ್ಸ್ ಉದ್ಯಮಕ್ಕೆ ನಿರ್ದಿಷ್ಟವಾಗಿ ತರುವ ಬಹಳಷ್ಟು ಪ್ರಯೋಜನಗಳ ಬಗ್ಗೆ ಮಾತನಾಡುತ್ತಿದ್ದೇವೆ. ಡಿಜಿಟಲ್ ತಂತ್ರಜ್ಞಾನ ಮತ್ತು AI ಪೂರೈಕೆ ಸರಪಳಿಯ ಪ್ರತಿಯೊಂದು ಭಾಗದಲ್ಲೂ ಇದೆ. ಎಐ ಬೆಂಬಲದೊಂದಿಗೆ, ಆಮದು ಮತ್ತು ರಫ್ತು ಪ್ರಕ್ರಿಯೆಯನ್ನು ಸರಳಗೊಳಿಸುವುದು, ದುಬೈನಲ್ಲಿ ವ್ಯಾಪಾರ ಮತ್ತು ಲಾಜಿಸ್ಟಿಕ್ಸ್ ವಲಯವನ್ನು ಉತ್ತೇಜಿಸುವ ಡಿಜಿಟಲ್ ಕಾರಿಡಾರ್ಗಳನ್ನು ರಚಿಸುವುದು ನಮ್ಮ ಗುರಿಯಾಗಿದೆ ಎಂದು ಮೊಹಮ್ಮದ್ ಅಬುಹಮ್ರಾ ಹೇಳಿದರು. ಗುಂಪು ಚರ್ಚೆಯಲ್ಲಿ ದಕ್ಷಿಣ ಆಫ್ರಿಕಾದ ಕಾರ್ಟೆಕ್ಸ್ ಎಐ ಗ್ರೂಪ್ ಸ್ಥಾಪಕ ಡಾ.ಜಾಕ್ವೆಸ್ ಲುಡಿಕ್, ಭಾರತದ NASSCOM ಅಧ್ಯಕ್ಷ ರಾಜೇಶ್ ನಂಬಿಯಾರ್, ಯುಎಇ ಪಾಲಿನೋಮ್ ಗ್ರೂಪ್ನ ಸಿಇಒ ಅಲೆಕ್ಸಾಂಡರ್ ಖನಿನ್ ಇದ್ದರು.
ಏನೆಲ್ಲ ವಿಷಯಗಳ ಬಗ್ಗೆ ಚರ್ಚೆ?: AI ಮತ್ತು ಹೆಲ್ತ್ಕೇರ್ ಭವಿಷ್ಯದ ಕುರಿತ ಅಧಿವೇಶನಲ್ಲಿ AI ಆರೋಗ್ಯ ಕ್ಷೇತ್ರದಲ್ಲಿ ಹೇಗೆ ಕ್ರಾಂತಿಯನ್ನುಂಟು ಮಾಡುತ್ತಿದೆ ಎಂಬುದರ ಕುರಿತು ಚರ್ಚೆ ನಡೆಯಿತು. "ದಿ ಅನ್ಯಾಟಮಿ ಆಫ್ ಎ ವಿನ್ನಿಂಗ್ ಪಿಚ್" ಚರ್ಚೆಯಲ್ಲಿ ಉನ್ನತ ಉದ್ಯಮಿಗಳು ಮತ್ತು ಹೂಡಿಕೆದಾರರು ವ್ಯಾಪಾರ ಸಂವಹನದ ಕಲೆಯನ್ನು ಕರಗತ ಮಾಡಿಕೊಳ್ಳುವಲ್ಲಿ ತಮ್ಮ ಪರಿಣತಿಯನ್ನು ಹಂಚಿಕೊಂಡರು. ಗ್ರೀನಿಂಗ್ ದಿ ಬಾಟಮ್ ಲೈನ್-ಫೈನಾನ್ಷಿಯಲ್ ಸ್ಟ್ರಾಟಜೀಸ್ ಫಾರ್ ಎ ಸಸ್ಟೈನಬಲ್ ಫ್ಯೂಚರ್" ಕುರಿತಾದ ವಿಮರ್ಶಾತ್ಮಕ ಚರ್ಚೆಯಲ್ಲಿ ಸುಸ್ಥಿರತೆಯ ಗುರಿಗಳೊಂದಿಗೆ ವ್ಯಾಪಾರ ಉದ್ದೇಶಗಳ ಬಗ್ಗೆ ಮಾತುಕತೆ ನಡೆಯಿತು. ಭಾರತೀಯ ಕ್ರೀಡೆಗಳ ಭವಿಷ್ಯವನ್ನು ಬೆಳೆಸುವುದು ಎಂಬ ಅಧಿವೇಶನದಲ್ಲಿ ತಜ್ಞರು ಕ್ರೀಡಾ ಪ್ರತಿಭೆ ಮತ್ತು ಮೂಲಸೌಕರ್ಯವನ್ನು ಪೋಷಿಸುವ ಒಳನೋಟಗಳನ್ನು ಹಂಚಿಕೊಂಡರು.
ಯುಕೆಯ ಫೇಬಲ್ ಮತ್ತು ಮಾನೆ ಸಿಇಒ ಮತ್ತು ಸಹ-ಸಂಸ್ಥಾಪಕ ಆಕಾಶ್ ಮೆಹ್ತಾ ಅವರು "ಇಟ್ಸ್ ಮೈ ಲೈಫ್(ಸ್ಟೈಲ್)-ಚೇಂಜಿಂಗ್ ದಿ ಫೇಸ್ ಆಫ್ ಬ್ಯೂಟಿ ಅಂಡ್ ವೆಲ್ನೆಸ್ ಕುರಿತು ಜೀವನಶೈಲಿ ಉದ್ಯಮಗಳಲ್ಲಿ ನಾವೀನ್ಯತೆಯನ್ನು ಮರುವ್ಯಾಖ್ಯಾನಿಸುವುದರ ಕುರಿತು ಸಂವಾದ ನಡೆಸಿದರು. "ಕಂಟೆಂಟ್ ಈಸ್ ಕಿಂಗ್-ಕ್ರಿಯೇಟಿವಿಟಿ ಮತ್ತು ಇನ್ಫ್ಲುಯೆನ್ಸ್ ಇನ್ ಸೋಷಿಯಲ್ ಮೀಡಿಯಾ" ಎಂಬ ಚರ್ಚೆಯೊಂದಿಗೆ ಎರಡನೇ ದಿನವು ಮುಕ್ತಾಯವಾಯಿತು. 200ಕ್ಕೂ ಹೆಚ್ಚು ಮಂದಿ ಚರ್ಚೆಗಳನ್ನು ನಡೆಸಿದರು. 1,000ಕ್ಕೂ ಹೆಚ್ಚು ಮಂದಿ ಈ ಇಂಡಿಯಾ ಗ್ಲೋಬಲ್ ಫೋರಂನಲ್ಲಿ ಭಾಗವಹಿಸಿದ್ದರು.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications