ಹೆಣ್ಣುಮಕ್ಕಳೇ ಇಲ್ಲಿ ಕೇಳಿ..! ನೇಲ್ ಪಾಲಿಶ್ ರಿಮೂವರ್ ಬಾಟಲ್ ಸ್ಫೋಟ, ಬಾಲಕಿ ಸ್ಥಿತಿ ಗಂಭೀರ
ಸೌಂದರ್ಯ ವರ್ಧಕಗಳನ್ನು ಬಳಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಕೆಲವು ಸೌಂದರ್ಯ ವರ್ಧಕಗಳನ್ನು ಬಳಸಿ ನಿಮ್ಮ ಚರ್ಮಕ್ಕೆ ಹಾನಿಯಾದರೆ, ಇನ್ನೂ ಕೆಲವೊಮ್ಮೆ ಬಳಸುವ ರೀತಿ ತಪ್ಪಿದರೆ ಜೀವಕ್ಕೆ ಆಪತ್ತು ತರಬಹುದು. ಇಂತಹದ್ದೇ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ನೇಲ್ ಪಾಲಿಶ್ ರಿಮೂವರ್ ಬಾಲಕಿಯ ಜೀವಕ್ಕೆ ಆಪತ್ತು ತಂದಿದೆ.
ಅಮೆರಿಕದ ಓಹಿಯೋದಲ್ಲಿ ಈ ಘಟನೆ ನಡೆದಿದ್ದ ಕೆನಡಿ ಎಂಬ 14 ವರ್ಷದ ಬಾಲಕಿ ಗಂಭೀರ ಗಾಯಗೊಂಡಿದ್ದಾಳೆ. ಕೆನಡಿ ಸೌಂದರ್ಯ ವರ್ಧಕಗಳ ಬಗ್ಗೆ ಆಸ್ತಿ ಇರುವ ಬಾಲಕಿಯಾಗಿದ್ದು, ತಾನು ಮೊದಲು ಹಚ್ಚಿದ ನೇಲ್ ಪಾಲಿಶ್ ತೆಗೆದು, ಹೊಸದಾದ ಬಣ್ಣ ಹಚ್ಚಬೇಕು ಎಂದುಕೊಂಡಿದ್ದಾಳೆ. ಹೀಗಾಗಿ ಮನೆಯಲ್ಲಿದ್ದ ನೇಲ್ ಪಾಲಿಶ್ ರಿಮೂವರ್ ತೆಗೆದುಕೊಂಡು ತನ್ನ ಬೆಡ್ ಮೇಲೆ ಕಳಿತು ನೇಲ್ ಪಾಲಿಶ್ ರಿಮೂವರ್ ಬಳಸಿದ್ದಾಳೆ.

ಈ ಸಂದರ್ಭದಲ್ಲಿ ಕೆನಡಿ ಮಾಡಿದ ಒಂದು ಚಿಕ್ಕ ತಪ್ಪು ಆಕೆಯ ಜೀವಕ್ಕೆ ಸಂಚಕಾರ ತಂದಿತ್ತು. ಕೆನಡಿ ನೇಲ್ ಪಾಲಿಶ್ ರಿಮೂವರ್ ಬಳಸುವ ವೇಳೆ ತನ್ನ ಬೆಡ್ ಬಳಿ ಮೇಣದ ಬತ್ತಿಯೊಂದನ್ನು ಹಚ್ಚಿಟ್ಟುಕೊಂಡಿದ್ದಾಳೆ. ನೇಲ್ ಪಾಲಿಶ್ ರಿಮೂವರ್ ಮೇಣದ ಬತ್ತಿ ಸಮೀಪವೇ ಇದ್ದು, ಅದೇನಾಯ್ತೋ ಗೊತ್ತಲ್ಲ. ಕೇವಲ ಬಳಿ ಮೇಣದ ಬತ್ತಿ ಬಿಸಿಗೆ ನೇಲ್ ಪಾಲಿಶ್ ರಿಮೂವರ್ ಬಾಟಲಿ ಏಕಾಏಕಿ ಸ್ಫೋಟಗೊಂಡಿದೆ. ಇದಾದ ಬಳಿಕ ನಡೆದ ಘಟನೆ ನಿಜಕ್ಕೂ ದುರಂತ.
ನೇಲ್ ಪಾಲಿಶ್ ರಿಮೂವರ್ ಬಾಟಲಿ ಸ್ಫೋಟಗೊಳ್ಳುತ್ತಿದ್ದಂತೆ ಅದರ ಒಳಗಿದ್ದ ಲಿಕ್ವೀಡ್ ಬೆಡ್ ಮೇಲೆ ಬಿದ್ದಿದ್ದು, ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ನೋಡನೋಡುತ್ತಿದ್ದಂತೆ ಸಂಪೂರ್ಣ ಬೆಡ್ ಹೊತ್ತಿ ಉರಿದಿದ್ದು, ಬೆಡ್ ಮೇಲೆ ಕುಳಿತಿದ್ದ ಕೆನಡಿ ಬೆಂಕಿಯಲ್ಲಿ ಬೆಂದು ಹೋಗಿದ್ದಾಳೆ. ಮನೆಯಲ್ಲಿ ಅಗ್ನಿಅವಘಡ ಸಂಭವಿಸುತ್ತಿದ್ದಂತೆ ಆಕೆಯ ಪೋಷಕರು ಆಕೆಯನ್ನು ರಕ್ಷಿಸಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಬೆಂಕಿಯಲ್ಲಿ ಸಿಲುಕಿ ಗಾಯಗೊಂಡಿದ್ದ ಕೆನಡಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಕಂಡು ವೈದ್ಯರೇ ಹೌಹಾರಿದ್ದಾರೆ. ಕೂಡಲೇ ವೈದ್ಯರು ಆಕೆಯ ಚಿಕಿತ್ಸೆ ಆರಂಭಿಸಿದ್ದು, ಎರಡು ತಿಂಗಳುಗಳ ಕಾಲ ನಿರಂತರ ಚಿಕಿತ್ಸೆ ನೀಡಿದ್ದಾರೆ. ಸುಮಾರು ಆರರಿಂದ ಹತ್ತು ವಿವಿಧ ಚಿಕಿತ್ಸೆಯನ್ನು ಕೆನಡಿಗೆ ವೈದ್ಯರು ನೀಡಿದ್ದು, ಎರಡು ತಿಂಗಳ ಬಳಿಕ ಬಾಲಕಿ ಸುಧಾರಿಸಿಕೊಂಡಿದ್ದಾಳೆ. ಆದರೆ ಆಕೆಯ ಒಂದು ಭಾಗ ಸಂಪೂರ್ಣ ಸುಟ್ಟುಹೋಗಿದ್ದು, ಕೈಗೆ ಗಂಭೀರ ಗಾಯವಾಗಿದೆ. ಸದ್ಯ ಕೆನಡಿಗೆ ಚಿಕಿತ್ಸೆ ಮುಂದುವರಿದಿದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications