ಜಿಎಸ್ ಎಲ್ ವಿ- ಇಸ್ರೋ ಪಾಲಿನ ತಂಟೆಯ ಹುಡುಗ, ಮುಂದಿನ 50 ಯೋಜನೆ
ಇಸ್ರೋ ಏಕಕಾಲಕ್ಕೆ 104 ಉಪಗ್ರಹ ಉಡಾವಣೆ ಮಾಡಿದೆ. ಇದು ದೇಶವೇ ಹೆಮ್ಮೆ ಪಡುವ ಸಾಧನೆ. ಆದರೆ ಇಸ್ರೋ ಪಾಲಿಗೆ ಜಿಎಸ್ ಎಲ್ ವಿ ಉಡಾವಣೆ ಸವಾಲಾಗಿ ಉಳಿದಿದೆ. ಅದರೆ 2019ರ ವೇಳೆಗೆ 500ಕ್ಕೂ ಹೆಚ್ಚು ಉಪಗ್ರಹ ಕಕ್ಷೆಗೆ ಸೇರಿಸುವ ಯೋಜನೆ ಹಾಕಿಕೊಂಡಿದೆ
ಬೆಂಗಳೂರು, ಫೆಬ್ರವರಿ 17: ಪಿಎಸ್ಎಲ್ವಿ ರಾಕೆಟ್ ಬಳಸಿ 104 ಉಪಗ್ರಹಗಳನ್ನು ಭಾರತದ ಹೆಮ್ಮೆಯ ಇಸ್ರೋ ಯಶಸ್ವಿಯಾಗಿ ವಿವಿಧ ಕಕ್ಷೆಗಳಲ್ಲಿ ಸೇರಿಸಿದೆ. ಪಿಎಸ್ಎಲ್ವಿ ರಾಕೆಟ್ ಇದು 2000 ಕೆಜಿಗಳಷ್ಟು ತೂಕದ ಉಪಗ್ರಹಗಳನ್ನು ಕಕ್ಷೆಗೆ ಒಯ್ಯಬಹುದಾದ ಸಾಮರ್ಥ್ಯ ಹೊಂದಿದ್ದು.ಇಸ್ರೋ ಇದನ್ನು 1994ರಿಂದ 40 ಬಾರಿ ಯಶಸ್ವಿಯಾಗಿ ಉಡಾವಣೆ ಮಾಡಿದ್ದು, ವಿವಿಧ ಕಕ್ಷೆಗಳಿಗೆ ಉಪಗ್ರಹಗಳನ್ನು ಸೇರಿಸಿದೆ.
ಇನ್ನು 4500-5000 ಕೆಜಿ ತೂಕದ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಬಳಸುವ ಜಿಎಸ್ಎಲ್ವಿ (ಭಾರತ ನಿರ್ಮಿತ) ಕ್ರಯೋಜನಿಕ್ ಎಂಜಿನ್ ಇರುವ ರಾಕೆಟ್ ಅನ್ನು ಭಾರತ ಎರಡು ಬಾರಿ ಮಾತ್ರ ಯಶಸ್ವಿಯಾಗಿ ಬಳಸಿದ್ದು, ಹಲವಾರು ಬಾರಿ ವಿಫಲವಾಗಿದೆ. ಇದನ್ನು ತಂಟೆಯ ಹುಡುಗ' ಎಂದೇ ಕರೆಯುತ್ತಾರೆ.[ವಿಶ್ವದಾಖಲೆ ಬರೆದ ಇಸ್ರೊಗೆ ಟ್ವಿಟ್ಟರಿನಲ್ಲಿ ಅಭಿನಂದನೆಗಳ ಮಹಾಪೂರ]

ಇದಾದ ನಂತರ ವಿಜ್ಞಾನಿಗಳ ಪರಿಶ್ರಮದಿಂದ 2014ರ ಜನವರಿಯಲ್ಲಿ ಜಿಎಸ್ಎಲ್ ವಿ-ಡಿ5 ಬಳಸಿ ಮಾಡಿದ್ದು ಯಶಸ್ವಿ ಉಡಾವಣೆ. ಭಾರತವನ್ನು 5000 ಕೆಜಿ ತೂಕದ ಉಪಗ್ರಹ ಉಡಾವಣೆ ಮಾಡುವ ಪ್ರತಿಷ್ಠಿತ ದೇಶಗಳ ಗುಂಪಿಗೆ ಸೇರಿಸಿತು. ಇದಾದ ನಂತರ ಕಳೆದ ಸೆಪ್ಟೆಂಬರ್ ನಲ್ಲಿ ಜಿಎಸ್ಎಲ್ ವಿ-ಮಾರ್ಕ್ 2 ಬಳಸಿ ಮಾಡಿದ ಯಶಸ್ವಿ ಉಡಾವಣೆ ದೇಶದ ಕೀರ್ತಿ ಇಮ್ಮಡಿಗೊಳಿಸಿತ್ತು.

ಅಂದಹಾಗೆ 5000 ಕೆಜಿ ತೂಕದ ಉಪಗ್ರಹ ಉಡಾವಣೆ ದೇಶದ ವಾಣಿಜ್ಯ ಉಪಗ್ರಹಗಳ ಉಡಾವಣೆ ದೃಷ್ಟಿಯಿಂದಲೂ ಉತ್ತಮವಾಗಿದ್ದು, ಹೆಚ್ಚು ಲಾಭ ತರಲಿದೆ. ಭಾರತದ ಖಗೋಳವಿಜ್ಞಾನಿಗಳು 5000 ಕೆಜಿ ತೂಕದ ರಾಕೆಟ್ ಗಳ ತಂತ್ರಜ್ಞಾನದ ಮೇಲೆ ಹೆಚ್ಚು ದೃಷ್ಟಿ ನೆಟ್ಟಿದ್ದು, ಜಿಎಸ್ ಎಲ್ ವಿ-ಮಾರ್ಕ್ 3 ಯೋಜನೆಯಲ್ಲಿ ತೊಡಗಿದ್ದಾರೆ. ಇದು ಮೊನ್ನೆಯ ಉಡಾವಣೆ ನಂತರ ಇಸ್ರೋ ಮುಖ್ಯಸ್ಥ ಕೆ.ಎಸ್.ಕಿರಣ್ಕುಮಾರ್ ಅವರು ಹೇಳಿದ ಮಾತುಗಳು ಸ್ಪಷ್ಟವಾಗುತ್ತದೆ.[ನಭಕ್ಕೆ ಹಾರಿದ 104 ಉಪಗ್ರಹಗಳ ಕಾರ್ಯ ಯೋಜನೆಯೇನು?]

2019ರ ಒಳಗೆ ಇಸ್ರೋ 50 ಯೋಜನೆಯನ್ನು ಹಾಕಿಕೊಂಡಿದ್ದು, 500ಕ್ಕೂ ಅಧಿಕ ಉಪಗ್ರಹ ಕಕ್ಷೆಗೆ ಸೇರಿಸುವ ಗುರಿ ಹೊಂದಿದೆ. ಜಿಎಸ್ಎಲ್ ವಿ ಉಡಾವಣೆ ಜಾಗತಿಕ ಖಗೋಳ ವಾಣಿಜ್ಯದಲ್ಲಿ ಯೂರೋಪ್ ದೇಶಗಳ ಎರಿಯನ್' ಹಾಗೂ ರಷ್ಯಾದ ಪ್ರೋಟಾನ್'ಗಳಿಗೆ ಪೈಪೋಟಿ ನೀಡುವುದರಲ್ಲಿ ಸಂದೇಹವೇ ಇಲ್ಲ.

ವಿವಿಧ ರಾಕೆಟ್ಗಳು ಮತ್ತದರ ಸಾಮರ್ಥ್ಯ:
ಎಸ್ ಎಲ್ ವಿ-40 ಕೆಜಿ-500 ಕಿ.ಮೀ ಎತ್ತರದ ಕಕ್ಷೆ
ಎಎಸ್ ಎಲ್ ವಿ- 150 ಕೆಜಿ- 160ಕಿ.ಮೀ - 2000 ಕಿ.ಮೀ
ಪಿಎಸ್ ಎಲ್ ವಿ-2000 ಕೆಜಿ-160 ಕಿ.ಮೀ- 2000 ಕಿ.ಮೀ
ಜಿ ಎಸ್ ಎಲ್ ವಿ-4500-5000 ಕೆಜಿ-160 ಕಿ.ಮೀ-2000 ಕಿ.ಮೀ
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications