40 ಕೊಲೆಗೈದ ಗ್ಯಾಂಗ್ ಸ್ಟರ್ ಬಜರಂಗಿ ಹಿಂದಿನ ಕಥೆ!
ಲಕ್ನೋ, ಜುಲೈ 09 : ಬಾಘ್ಪತ್ ಜಿಲ್ಲಾ ಕಾರಾಗೃಹದಲ್ಲಿಂದು ಕುಖ್ಯಾತ ಗ್ಯಾಂಗ್ ಸ್ಟರ್ ಪ್ರೇಮ್ ಪ್ರಕಾಶ್ ಸಿಂಗ್ ಅಲಿಯಾಸ್ ಮುನ್ನಾ ಬಜರಂಗಿಯನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಈ ಮೂಲಕ ಎರಡು ದಶಕಗಳ ಕಾಲದ ರಕ್ತಚರಿತ್ರೆಗೆ ಫುಲ್ ಸ್ಟಾಪ್ ಬಿದ್ದಿದೆ.
ಸುಲಿಗೆ ಪ್ರಕರಣವೊಂದರಲ್ಲಿ ಝಾನ್ಸಿ ಜೈಲಿನಲ್ಲಿದ್ದ ಜರಂಗಿಯನ್ನು ಬಾಘ್ಪತ್ ನ್ಯಾಯಾಲಯಕ್ಕೆ ಒಪ್ಪಿಸುವ ಸಲುವಾಗಿ ಜು.07 ರಂದು ಝಾನ್ಸಿಯಿಂದ ಕರೆತರಲಾಗಿತ್ತು. ಆದರೆ, ಇಂದು ಜೈಲಿನಲ್ಲೇ ಸಂಚು ಮಾಡಿ, ಕೊಲೆ ಮಾಡಲಾಗಿದೆ.
ಜೈಲಿನಲ್ಲೇ ಗ್ಯಾಂಗ್ ಸ್ಟರ್ ಮುನ್ನಾ ಬಜರಂಗಿಯ ಬರ್ಬರ ಹತ್ಯೆ
ಕೆಲವು ದಿನಗಳ ಹಿಂದಷ್ಟೇ ಬಜರಂಗಿಯ ಪತ್ನಿ ಸೀಮಾ ಸಿಂಗ್, ತಮ್ಮ ಪತಿಯ ಪ್ರಾಣಕ್ಕೆ ಅಪಾಯವಿದೆ, ಅವರಿಗೆ ರಕ್ಷಣೆ ನೀಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಳಿ ಮನವಿ ಮಾಡಿಕೊಂಡಿದ್ದರು.
ಯಾರು ಈ ಮುನ್ನಾ ಬಜರಂಗಿ? ಬಿಎಸ್ಪಿ ಶಾಸಕ ಲೋಕೇಶ್ ದೀಕ್ಷಿತ್ ಗೆ ಜೀವ ಬೆದರಿಕೆ, ಬಿಜೆಪಿ ಶಾಸಕ ಕೃಷ್ಣಾನಂದ ರಾಯ್ ಕೊಲೆ ಕೇಸಿನಲ್ಲಿ ಬಜರಂಗಿ ಆರೋಪಿಯಾಗಿ ಜೈಲು ಸೇರಿದ್ದ.
1984ರಲ್ಲಿ ಮೊದಲ ಕೊಲೆ
*
ಗ್ಯಾಂಗ್
ಸ್ಟರ್
ಪ್ರೇಮ್
ಪ್ರಕಾಶ್
ಸಿಂಗ್
ಅಲಿಯಾಸ್
ಮುನ್ನಾ
ಬಜರಂಗಿ,
ಉತ್ತರಪ್ರದೇಶದ
ಜುನಾಪುರದಲ್ಲಿ
1967ರಲ್ಲಿ
ಜನಿಸಿದರು.
*
5ನೇ
ತರಗತಿ
ತನಕ
ಮಾತ್ರ
ಓದಿದ್ದ
ಮುನ್ನಾ
ಬಜರಂಗಿಗೆ
ಚಿಕ್ಕಂದಿನಿಂದಲೇ
ಶಸ್ತ್ರಾಸ್ತ್ರಗಳ
ಬಗ್ಗೆ
ಒಲವಿತ್ತು.
*
ಮುನ್ನಾ
ಬಜರಂಗಿಗೆ
17ನೇ
ವಯಸ್ಸಿದ್ದಾಗ,
ಆತನ
ಮೇಲೆ
ಮೊದಲ
ಕೇಸ್
ಬಿತ್ತು.
1984ರಲ್ಲಿ
ಮೊದಲ
ಕೊಲೆ
ಮಾಡಿ,
ಜೈಲು
ಸೇರಿದ್ದ.
ಸಾವಿನ ದವಡೆಯಿಂದ ಪಾರಾಗಿದ್ದ
*
1998ರಲ್ಲಿ
ಮುನ್ನ
ಬಜರಂಗಿ
ಮೇಲೆ
ದೆಹಲಿ
ಪೊಲೀಸರು
ಗುಂಡಿನ
ಮಳೆಗೈದಿದ್ದರು.
ಬಜರಂಗಿ
ಕಥೆ
ಮುಗಿಯಿತು
ಎಂದು
ಶವಾಗಾರಕ್ಕೂ
ಕಳಿಸಲಾಗಿತ್ತು.
ಆದರೆ,
ಅಚ್ಚರಿಯ
ರೀತಿಯಲ್ಲಿ
ಬದುಕುಳಿದಿದ್ದರು.
*
2012ರಲ್ಲಿ
ಅಪ್ನಾದಳ
ಪಕ್ಷದಿಂದ
ಟಿಕೆಟ್
ಪಡೆದು,
ಜನಾಪುರದ
ಅರಿಯಾಹು
ಕ್ಷೇತ್ರದಿಂದ
ಸ್ಪರ್ಧಿಸಿದ್ದ.
*
ಅಪ್ನಾದಳ
ಹಾಗೂ
ದಿ
ಪೀಸ್
ಪಾರ್ಟಿಯ
ಬೆಂಬಲದಿಂದ
ಜಂಟಿ
ಅಭ್ಯರ್ಥಿಯಾಗಿ
ಯುಪಿ
ಅಸೆಂಬ್ಲಿಗೆ
ಸ್ಪರ್ಧಿಸಿದ್ದ
ಬಜರಂಗಿ,
ಅಭ್ಯರ್ಥಿಯಾದ
ಸಂದರ್ಭದಲ್ಲಿ
ಜೈಲಿನಲ್ಲಿದ್ದ.
ರಾಜಕೀಯರಂಗಕ್ಕೂ ಧುಮುಕಿದ್ದ ಬಜರಂಗಿ
*
2013ರಲ್ಲಿ
ಭೂಗತ
ಲೋಕದಿಂದ
ರಾಜಕೀಯರಂಗಕ್ಕೆ
ಧುಮುಕಿದ
ಮುಖ್ತಾರ್
ಅನ್ಸಾರಿ
ಅವರ
ಜತೆ
ಬಜರಂಗಿ
ಕೈ
ಜೋಡಿಸಿದ್ದ.
*
2016ರಲ್ಲಿ
ಮಾರ್ಚ್
ನಲ್ಲಿ
ಬಜರಂಗಿಯ
ಅಳಿಯ
ಪುಷ್ಪಜೀತ್
ನನ್ನು
ಲಕ್ನೋದ
ವಿಕಾಸ್
ನಗರ
ಕಾಲೋನಿಯಲ್ಲಿ
ಗುಂಡಿಕ್ಕಿ
ಕೊಲ್ಲಲಾಯಿತು.
*
ಜೂನ್
29ರಂದು
ಬಜರಂಗಿಯ
ಪತ್ನಿ
ಸೀಮಾ
ಸಿಂಗ್,
ತಮ್ಮ
ಪತಿಯ
ಪ್ರಾಣಕ್ಕೆ
ಅಪಾಯವಿದೆ
ಎಂದು
ಸುದ್ದಿಗೋಷ್ಠಿ
ಕರೆದು
ತಮ್ಮ
ಗೋಳು
ತೋಡಿಕೊಂಡಿದ್ದರು.
|
ಝಾನ್ಸಿಯ ಜೈಲಿನಲ್ಲಿ ನಡೆದ ಕೃತ್ಯ
ಜೈಲಿನಲ್ಲಿದ್ದ ಸಹ ಕೈದಿಯಿಂದ ನಡೆದ ಕೃತ್ಯ, ಕೃತ್ಯಕ್ಕೆ ಬಳಸಲಾದ ಪಿಸ್ತೂಲ್ ಅನ್ನು ಹತ್ತಿರದ ಮೋರಿಯೊಂದರಲ್ಲಿ ಎಸೆಯಲಾಗಿತ್ತು. ಸಿಎಂ ಕಚೇರಿಗೆ ಮನವಿ ಮಾಡಿ, ಬಜರಂಗಿಗೆ ರಕ್ಷಣೆ ನೀಡುವಂತೆ ಕೋರಲಾಗಿತ್ತು ಎಂದು ಮುನ್ನಾ ಬಜರಂಗಿ ಪರ ವಕೀಲ ಶ್ರೀವಾಸ್ತವ ಹೇಳಿದ್ದಾರೆ.