Viral Video: ಜೀವಂತ ಆಕ್ಟೋಪಸ್ ಗುಳುಂ ಮಾಡಿದ ವ್ಯಕ್ತಿ, ಇಲ್ಲಿದೆ ವೈರಲ್ ವಿಡಿಯೋ!
Viral Video: ಸೋಷಿಯಲ್ ಮೀಡಿಯಾದಲ್ಲಿ ಚಿತ್ರವಿಚಿತ್ರ ವಿಡಿಯೋಗಳು ವೈರಲ್ ಆಗುತ್ತವೆ. ಇದರಲ್ಲಿ ಇದೀಗ ಕೊರಿಯನ್ ವ್ಯಕ್ತಿಯ ಚೇಷ್ಟೆ ವಿಡಿಯೋ ಸಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೊರಿಯನ್ ವ್ಯಕ್ತಿ ಜೀವಂತವಾಗಿರುವ ಆಕ್ಟೋಪಸ್ಗಳನ್ನು ಗುಳುಂ ಮಾಡಿದ್ದಾನೆ. ಈ ವಿಡಿಯೋದಲ್ಲಿ ವ್ಯಕ್ತಿ ಹಿಂದಿಯಲ್ಲಿ ಮಾತನಾಡಿದ್ದು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಾನು ಮೊದಲ ಬಾರಿಗೆ ಈ ಆಹಾರವನ್ನು ಸೇವನೆ ಮಾಡುತ್ತಿದ್ದೇನೆ ಎಂದು ವ್ಯಕ್ತಿ ಹೇಳಿದ್ದು. ಈ ವಿಡಿಯೋಗೆ ಚಿತ್ರವಿಚಿತ್ರವಾದ ಕಮೆಂಟ್ಗಳು ಬಂದಿವೆ.
ಜನ ವೈರಲ್ ಆಗುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಚಿತ್ರವಿಚಿತ್ರವಾದ ಕೆಲಸಗಳನ್ನು ಮಾಡುತ್ತಿರುತ್ತಾರೆ. ಜೀವಂತ ಆಕ್ಟೋಪಸ್ ಅನ್ನು ಗುಳುಂ ಮಾಡುವುದಕ್ಕೆ ಪ್ರಯತ್ನಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲವನ್ನೇ ಸೃಷ್ಟಿ ಮಾಡಿದೆ. ಮೊದಲ ಬಾರಿಗೆ ಈ ರೀತಿ ಆಹಾರವನ್ನು ಪ್ರಯತ್ನಿಸುತ್ತಿದ್ದಾನೆ. ಇದು ಅತ್ಯಂತ ಖುಷಿ ಕೊಡ್ತಿದೆ. ನೋಡಿ ಅಂತಾ ಕೊರಿಯಲ್ ವ್ಯಕ್ತಿ ಹೇಳಿಕೊಂಡಿದ್ದಾನೆ.

ಚೀನಿಯರು ಹಾಗೂ ಕೊರಿಯನ್ ಅವರು ವಿಚಿತ್ರವಾದ ಆಹಾರಗಳನ್ನು ಸೇವಿಸುತ್ತಾರೆ ಎನ್ನುವ ಆರೋಪವು ಮೊದಲಿನಿಂದಲೂ ಇದೆ. ಚೀನಾದವರು ವಿಚಿತ್ರವಾದ ಆಹಾರ ಹಾಗೂ ಬಾವುಲಿಯಂತಹ ಆಹಾರಗಳನ್ನು ಸೇವನೆ ಮಾಡಿರುವುದರಿಂದಲೇ ಕೊರೊನಾದಂತಹ ಗಂಭೀರವಾದ ಸಾಂಕ್ರಾಮಿಕ ರೋಗ ಬಂದಿತ್ತು ಎನ್ನುವ ಭಾವನೆ ಹಲವರಲ್ಲಿ ಇದೆ. ಆದರೆ ಕೊರಿಯನ್ ವ್ಯಕ್ತಿಯ ಆಹಾರದ ಶೈಲಿ ಹೊಸದೊಂದು ಚರ್ಚೆಗೆ ಕಾರಣವಾಗಿದೆ. ಈಚೆಗೆ ಕೊರಿಯನ್ ವ್ಯಕ್ತಿ ಜೀವಂತವಾಗಿರುವ ಆಕ್ಟೋಪಸ್ ತಿನ್ನುವ ವಿಡಿಯೋವನ್ನೂ ಮಾಡಿದ್ದು ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಆಕ್ಟೋಪಸ್ ಅನ್ನು ಎಳ್ಳೆಣ್ಣೆಯಿಂದ ತೆಗೆದು ಹಸಿ..ಹಸಿಯಾಗಿ ಬಡಿಸಲಾಗಿದೆ. ನೋಡುವುದಕ್ಕೆ ವಿಚಿತ್ರವಾಗಿರುವ ಈ ವಿಡಿಯೋ ಹಲವರನ್ನು ಕೆರಳಿಸಿದೆ. ಮೊದಲ ಬಾರಿಗೆ ಸಮುದ್ರದ ಆಹಾರವನ್ನು ಸೇವಿಸುತ್ತಿದ್ದೇನೆ ಹೇಗಿದೆಯೋ ಗೊತ್ತಿಲ್ಲ ಎಂದು ಹೇಳಿದ್ದಾರೆ. ಮುಂದುವರಿದು ಕೊರಿಯನ್ ವ್ಯಕ್ತಿ ವಿಡಿಯೋದಲ್ಲಿ "ಕಭಿ ಆಪ್ನೆ ಲೈವ್ ಆಕ್ಟೋಪಸ್ ಖಾಯಾ ಹೈ ಕ್ಯಾ? ಯೇ ಲೈವ್ ಆಕ್ಟೋಪಸ್ ಹೈ, ಯೇ ದೇಖೋ, ನಾಚ್ ರಹಾ ಹೈ. ಓ ದೇವರೇ. ಇಸ್ಕೋ ಕೈಸೆ ಖಾಯೇಂಗೆ " ಎಂದು ಹೇಳಿದ್ದಾರೆ. (ನೀವು ಎಂದಾದರೂ ಲೈವ್ ಆಕ್ಟೋಪಸ್ ತಿಂದಿದ್ದೀರಾ? ಇದು ಲೈವ್ ಆಕ್ಟೋಪಸ್, ನೋಡಿ, ಇದು ಡ್ಯಾನ್ಸ್ ಮಾಡುತ್ತಿದೆ. ದೇವರೇ. ನಾವು ಇದನ್ನು ಹೇಗೆ ತಿನ್ನುವುದು, ತಿನ್ನುವ ಮೊದಲು ನಾವು ಅದನ್ನು ಎಳ್ಳೆಣ್ಣೆಯಲ್ಲಿ ಮುಳುಗಿಸಬೇಕು) ಎಂದು ಹೇಳಲಾಗಿದೆ.
ಜನ ಹೇಳಿದ್ದೇನು ?
ಭಾರತದಲ್ಲಿದ್ದು ಈ ವ್ಯಕ್ತಿ ಕೊರಿಯನ್ ಭಾಷೆಯನ್ನೇ ಮರೆತಿರುವಂತಿದೆ. ನಾವು ನೂಡಲ್ಸ್ ಬಿಟ್ಟು ಮುಂದಕ್ಕೆ ಬೇರೆ ಯಾವ ಆಹಾರವನ್ನೂ ಸೇವಿಸಿಲ್ಲ. ಇದೆಲ್ಲಾ ಯಾಕೆ ಬ್ರೋ ಟ್ರೈ ಮಾಡ್ತೀರಿ ಎಂದು ಮತ್ತೊಬ್ಬ ವ್ಯಕ್ತಿ ಪೋಸ್ಟ್ ಮಾಡಿದ್ದಾರೆ. ಒಟ್ಟಾರೆ ಕೊರಿಯನ್ ವ್ಯಕ್ತಿಯ ಪ್ರಯತ್ನಕ್ಕೆ ಮಿಶ್ರ ಪ್ರತಿಕ್ರಿಯೆ ಲಭ್ಯವಾಗಿದೆ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ












Click it and Unblock the Notifications