Viral Video: ಜೀವಂತ ಆಕ್ಟೋಪಸ್ ಗುಳುಂ ಮಾಡಿದ ವ್ಯಕ್ತಿ, ಇಲ್ಲಿದೆ ವೈರಲ್ ವಿಡಿಯೋ!
Viral Video: ಸೋಷಿಯಲ್ ಮೀಡಿಯಾದಲ್ಲಿ ಚಿತ್ರವಿಚಿತ್ರ ವಿಡಿಯೋಗಳು ವೈರಲ್ ಆಗುತ್ತವೆ. ಇದರಲ್ಲಿ ಇದೀಗ ಕೊರಿಯನ್ ವ್ಯಕ್ತಿಯ ಚೇಷ್ಟೆ ವಿಡಿಯೋ ಸಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೊರಿಯನ್ ವ್ಯಕ್ತಿ ಜೀವಂತವಾಗಿರುವ ಆಕ್ಟೋಪಸ್ಗಳನ್ನು ಗುಳುಂ ಮಾಡಿದ್ದಾನೆ. ಈ ವಿಡಿಯೋದಲ್ಲಿ ವ್ಯಕ್ತಿ ಹಿಂದಿಯಲ್ಲಿ ಮಾತನಾಡಿದ್ದು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಾನು ಮೊದಲ ಬಾರಿಗೆ ಈ ಆಹಾರವನ್ನು ಸೇವನೆ ಮಾಡುತ್ತಿದ್ದೇನೆ ಎಂದು ವ್ಯಕ್ತಿ ಹೇಳಿದ್ದು. ಈ ವಿಡಿಯೋಗೆ ಚಿತ್ರವಿಚಿತ್ರವಾದ ಕಮೆಂಟ್ಗಳು ಬಂದಿವೆ.
ಜನ ವೈರಲ್ ಆಗುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಚಿತ್ರವಿಚಿತ್ರವಾದ ಕೆಲಸಗಳನ್ನು ಮಾಡುತ್ತಿರುತ್ತಾರೆ. ಜೀವಂತ ಆಕ್ಟೋಪಸ್ ಅನ್ನು ಗುಳುಂ ಮಾಡುವುದಕ್ಕೆ ಪ್ರಯತ್ನಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲವನ್ನೇ ಸೃಷ್ಟಿ ಮಾಡಿದೆ. ಮೊದಲ ಬಾರಿಗೆ ಈ ರೀತಿ ಆಹಾರವನ್ನು ಪ್ರಯತ್ನಿಸುತ್ತಿದ್ದಾನೆ. ಇದು ಅತ್ಯಂತ ಖುಷಿ ಕೊಡ್ತಿದೆ. ನೋಡಿ ಅಂತಾ ಕೊರಿಯಲ್ ವ್ಯಕ್ತಿ ಹೇಳಿಕೊಂಡಿದ್ದಾನೆ.

ಚೀನಿಯರು ಹಾಗೂ ಕೊರಿಯನ್ ಅವರು ವಿಚಿತ್ರವಾದ ಆಹಾರಗಳನ್ನು ಸೇವಿಸುತ್ತಾರೆ ಎನ್ನುವ ಆರೋಪವು ಮೊದಲಿನಿಂದಲೂ ಇದೆ. ಚೀನಾದವರು ವಿಚಿತ್ರವಾದ ಆಹಾರ ಹಾಗೂ ಬಾವುಲಿಯಂತಹ ಆಹಾರಗಳನ್ನು ಸೇವನೆ ಮಾಡಿರುವುದರಿಂದಲೇ ಕೊರೊನಾದಂತಹ ಗಂಭೀರವಾದ ಸಾಂಕ್ರಾಮಿಕ ರೋಗ ಬಂದಿತ್ತು ಎನ್ನುವ ಭಾವನೆ ಹಲವರಲ್ಲಿ ಇದೆ. ಆದರೆ ಕೊರಿಯನ್ ವ್ಯಕ್ತಿಯ ಆಹಾರದ ಶೈಲಿ ಹೊಸದೊಂದು ಚರ್ಚೆಗೆ ಕಾರಣವಾಗಿದೆ. ಈಚೆಗೆ ಕೊರಿಯನ್ ವ್ಯಕ್ತಿ ಜೀವಂತವಾಗಿರುವ ಆಕ್ಟೋಪಸ್ ತಿನ್ನುವ ವಿಡಿಯೋವನ್ನೂ ಮಾಡಿದ್ದು ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಆಕ್ಟೋಪಸ್ ಅನ್ನು ಎಳ್ಳೆಣ್ಣೆಯಿಂದ ತೆಗೆದು ಹಸಿ..ಹಸಿಯಾಗಿ ಬಡಿಸಲಾಗಿದೆ. ನೋಡುವುದಕ್ಕೆ ವಿಚಿತ್ರವಾಗಿರುವ ಈ ವಿಡಿಯೋ ಹಲವರನ್ನು ಕೆರಳಿಸಿದೆ. ಮೊದಲ ಬಾರಿಗೆ ಸಮುದ್ರದ ಆಹಾರವನ್ನು ಸೇವಿಸುತ್ತಿದ್ದೇನೆ ಹೇಗಿದೆಯೋ ಗೊತ್ತಿಲ್ಲ ಎಂದು ಹೇಳಿದ್ದಾರೆ. ಮುಂದುವರಿದು ಕೊರಿಯನ್ ವ್ಯಕ್ತಿ ವಿಡಿಯೋದಲ್ಲಿ "ಕಭಿ ಆಪ್ನೆ ಲೈವ್ ಆಕ್ಟೋಪಸ್ ಖಾಯಾ ಹೈ ಕ್ಯಾ? ಯೇ ಲೈವ್ ಆಕ್ಟೋಪಸ್ ಹೈ, ಯೇ ದೇಖೋ, ನಾಚ್ ರಹಾ ಹೈ. ಓ ದೇವರೇ. ಇಸ್ಕೋ ಕೈಸೆ ಖಾಯೇಂಗೆ " ಎಂದು ಹೇಳಿದ್ದಾರೆ. (ನೀವು ಎಂದಾದರೂ ಲೈವ್ ಆಕ್ಟೋಪಸ್ ತಿಂದಿದ್ದೀರಾ? ಇದು ಲೈವ್ ಆಕ್ಟೋಪಸ್, ನೋಡಿ, ಇದು ಡ್ಯಾನ್ಸ್ ಮಾಡುತ್ತಿದೆ. ದೇವರೇ. ನಾವು ಇದನ್ನು ಹೇಗೆ ತಿನ್ನುವುದು, ತಿನ್ನುವ ಮೊದಲು ನಾವು ಅದನ್ನು ಎಳ್ಳೆಣ್ಣೆಯಲ್ಲಿ ಮುಳುಗಿಸಬೇಕು) ಎಂದು ಹೇಳಲಾಗಿದೆ.
ಜನ ಹೇಳಿದ್ದೇನು ?
ಭಾರತದಲ್ಲಿದ್ದು ಈ ವ್ಯಕ್ತಿ ಕೊರಿಯನ್ ಭಾಷೆಯನ್ನೇ ಮರೆತಿರುವಂತಿದೆ. ನಾವು ನೂಡಲ್ಸ್ ಬಿಟ್ಟು ಮುಂದಕ್ಕೆ ಬೇರೆ ಯಾವ ಆಹಾರವನ್ನೂ ಸೇವಿಸಿಲ್ಲ. ಇದೆಲ್ಲಾ ಯಾಕೆ ಬ್ರೋ ಟ್ರೈ ಮಾಡ್ತೀರಿ ಎಂದು ಮತ್ತೊಬ್ಬ ವ್ಯಕ್ತಿ ಪೋಸ್ಟ್ ಮಾಡಿದ್ದಾರೆ. ಒಟ್ಟಾರೆ ಕೊರಿಯನ್ ವ್ಯಕ್ತಿಯ ಪ್ರಯತ್ನಕ್ಕೆ ಮಿಶ್ರ ಪ್ರತಿಕ್ರಿಯೆ ಲಭ್ಯವಾಗಿದೆ.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ












Click it and Unblock the Notifications