ಸದನದಲ್ಲೇ ಗಳ-ಗಳನೇ ಅತ್ತ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು
Recommended Video
ನವದೆಹಲಿ, ಜುಲೈ 29: ಹಳೆಯ ಗೆಳೆಯನನ್ನು ನೆನೆದು ಸದನದ ಪೀಠದಲ್ಲಿ ಕುಳಿತುಕೊಂಡೇ ಉಪರಾಷ್ಟ್ರಪತಿ, ರಾಜ್ಯಸಭೆ ಸಭಾದ್ಯಕ್ಷ ವೆಂಕಯ್ಯನಾಯ್ಡು ಅವರು ಭಾವುಕರಾಗಿ ಗಳಗಳನೆ ಅತ್ತರು.
ನಿನ್ನೆ ನಿಧನರಾದ ಕಾಂಗ್ರೆಸ್ನ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಅವರಿಗೆ ಇಂದು ರಾಜ್ಯಸಭೆಯಲ್ಲಿ ಗೌರವ ಸಲ್ಲಿಸುವ ಸಂದರ್ಭದಲ್ಲಿ ವೆಂಕಯ್ಯ ನಾಯ್ಡು ಅವರು ಭಾವುಕರಾಗಿ ಪೀಠದಲ್ಲಿ ಕುಳಿತುಕೊಂಡೇ ಅತ್ತುಬಿಟ್ಟರು. ಪಕ್ಕದಲ್ಲಿ ನಿಂತಿದ್ದ ರಾಜ್ಯಸಭೆ ಸಿಬ್ಬಂದಿ ವೆಂಕಯ್ಯ ಅವರಿಗೆ ನೀರು ಕೊಟ್ಟು ಉಪಚರಿಸಿದರು.
ಜೈಪಾಲ್ ರೆಡ್ಡಿ ಅವರು ವೆಂಕಯ್ಯ ನಾಯ್ಡು ಅವರಿಗೆ ಹಳೆಯ ಆತ್ಮೀಯ ಮಿತ್ರರು. ಇಬ್ಬರೂ ವಿರುದ್ಧ ಪಕ್ಷದಲ್ಲಿ ಇದ್ದರೂ ಸಹ ಅತ್ಯಂತ ಆತ್ಮೀಯ ಗೆಳೆಯರಾಗಿದ್ದರು. 1970 ರಲ್ಲಿ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದನ್ನು ನೆನಪಿಸಿಕೊಂಡ ವೆಂಕಯ್ಯನಾಯ್ಡು, 'ಬೆಳಿಗ್ಗೆ 7 ಗಂಟೆಗೆ ಒಟ್ಟಿಗೆ ತಿಂಡಿ ತಿನ್ನುತ್ತಾ ಎಷ್ಟೋಂದು ವಿಷಯಗಳನ್ನು ನಾವು ಚರ್ಚೆ ಮಾಡುತ್ತಿದ್ದೆವು' ಎಂದು ಹೇಳಿ ಗದ್ಗದಿತರಾದರು.

ಜೈಪಾಲ್ ರೆಡ್ಡಿ ಅವರೊಂದಿಗಿನ ಗೆಳೆತನ, ಒಡನಾಟದ ಬಗ್ಗೆ ರಾಜ್ಯಸಭೆಯಲ್ಲಿ ಭಾವುಕರಾಗಿ ಮಾತನಾಡಿದ ವೆಂಕಯ್ಯ ನಾಯ್ಡು, 'ಅವರೊಬ್ಬ ಅದ್ಭುತ ಗೆಳೆಯ, ಮಾರ್ಗದರ್ಶಕ, ನಾನು ಅವರಿಗಿಂತಲೂ 6 ವರ್ಷ ಕಿರಿಯ, ನನಗೆ ದುಃಖ ತಡೆದುಕೊಳ್ಳಲಾಗಲಿಲ್ಲ' ಎಂದು ಕಣ್ಣೀರು ಒರೆಸಿಕೊಂಡ ವೆಂಕಯ್ಯ ನಾಯ್ಡು ಸದನದ ಕ್ಷಮೆ ಕೋರಿದರು.

'ಜೈಪಾಲ್ ರೆಡ್ಡಿ ಅವರೊಬ್ಬ ಅದ್ಭುತ ಆಡಳಿತಗಾರ, ಅವರಿಗೆ ಅದ್ಬುತವಾದ ಮುಂದಾಲೋಚನೆ ಇತ್ತು, ಅವರಿಗೆ ಬಡವರ ಪರ ಕಾಳಜಿ ಇತ್ತು ಎಂದು ಮನಸಾರೆ ಹೊಗಳಿದ ವೆಂಕಯ್ಯ ನಾಯ್ಡು, ಜೈಪಾಲ್ ರೆಡ್ಡಿ ಅವರ ಅಗಲಿಕೆ ತಮಗೆ ತೀವ್ರ ನೋವುಂಟು ಮಾಡಿದೆ' ಎಂದು ಸದನದಲ್ಲಿ ಹೇಳಿದರು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications