Vanda Bharat Express: ಬೆಂಗಳೂರು-ಮಧುರೈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆ ಯಾವಾಗ?-ಸಂಪೂರ್ಣ ಮಾಹಿತಿ ತಿಳಿಯಿರಿ
ಮಧುರೈ, ಮಾರ್ಚ್, 06: ಐಸ್ಪೀಡ್ ರೈಲು ವಂದೇ ಭಾರತ್ ದೇಶಾದ್ಯಂತ ಸಂಚರಿಸುತ್ತದೆ. ಅಲ್ಲದೆ ಇನ್ನೂ ಹೊಸ ಹೊಸ ಮಾರ್ಗಗಳಲ್ಲೂ ಈ ರೈಲು ಬಿಡಲು ಇಲಾಖೆ ಮುಂದಾಗಿದೆ. ಹಾಗೆಯೇ ತಮಿಳುನಾರಿನ ಮುಧುರೈನಿಂದ ಹೈಟಿ ಹಬ್ ಅಂತಲೇ ಹೆಸರುವಾಸಿಯಾಗಿರುವ ಬೆಂಗಳೂರಿಗೆ ರೈಲು ಬಿಡಲು ನಿರ್ಧರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಯಾವಾಗ ಈ ಸೇವೆ ಹಾಗೂ ಟಿಕೆಟ್ ದರ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮಧುರೈ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಶೀಘ್ರದಲ್ಲೇ ಪರಿಚಯಿಸುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಮುಂದಿನ ವಾರ ಈ ರೈಲು ಸೇವೆಯನ್ನು ಉದ್ಘಾಟಿಸುವ ಸಾಧ್ಯತೆಯಿದೆ. ಮಧುರೈ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ಹೊಸ ಆರೆಂಜ್ ಕಲರ್ನಲ್ಲಿದೆ ಎಂದು ಹೇಳಲಾಗುತ್ತದೆ.

ಮಧುರೈ-ಬೆಂಗಳೂರು ಪ್ರಯಾಣದ ಸಮಯ 6 ಗಂಟೆಗಳಿಗೆ ಕಡಿತ: ಇತರ ರೈಲುಗಳು ಸಾಮಾನ್ಯವಾಗಿ 435 ಕಿಲೋ ಮೀಟರ್ ಇರುವ ಮಧುರೈ-ಬೆಂಗಳೂರು ದೂರವನ್ನು ಕ್ರಮಿಸಲು 7 ಗಂಟೆಗಳನ್ನು ತೆಗೆದುಕೊಂಡರೆ, ವಂದೇ ಭಾರತ್ 6 ಅಥವಾ 5:30 ಗಂಟೆಗಳಲ್ಲಿ ಕ್ರಮಿಸುತ್ತದೆ. ಮಧುರೈನಿಂದ ಬೆಂಗಳೂರಿಗೆ ಚಲಿಸುವ ಈ ವಂದೇ ಭಾರತ್ ರೈಲು 16 ಕೋಚ್ಗಳು ಅಥವಾ 8 ಕೋಚ್ಗಳ ಆರಂಭಿಕ ಯೋಜನೆಯನ್ನು ಹೊಂದಿದೆ.
ಅಲ್ಲದೆ, ಇದು ಹಗಲಿನ ರೈಲು ಆಗಿರುವುದರಿಂದ ಆರಂಭದಲ್ಲಿ ಎಂಟು ಬೋಗಿಗಳ ರೈಲಿನಂತೆ ಓಡುವ ನಿರೀಕ್ಷೆಯಿದೆ ಮತ್ತು ನಂತರ ಅಗತ್ಯಕ್ಕೆ ಅನುಗುಣವಾಗಿ ಕೋಚ್ಗಳನ್ನು ಸಂಪರ್ಕಿಸಲಾಗುತ್ತದೆ. ಇದು ವಂದೇ ಭಾರತ್ ರೈಲುಗಳಲ್ಲಿ ಎಂದಿನಂತೆ ಎಕ್ಸಿಕ್ಯೂಟಿವ್ ಕ್ಲಾಸ್ ಮತ್ತು ಚೇರ್ ಕ್ಲಾಸ್ ಎಂಬ ಎರಡು ಕೋಚ್ಗಳನ್ನು ಹೊಂದಿರುತ್ತದೆ.
ಎಲ್ಲೆಲ್ಲಿ ನಿಲುಗಡೆ?: ಮಧುರೈ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ದಿಂಡುಗಲ್, ಕರೂರ್, ಸೇಲಂ, ಧರ್ಮಪುರಿ ಮತ್ತು ಹೊಸೂರಿನಲ್ಲಿ ನಿಲುಗಡೆ ಆಗಲಿದೆ.
ಟಿಕೆಟ್ ದರ ಎಷ್ಟು?: ಈ ವಂದೇ ಭಾರತ್ ರೈಲಿನ ಟಿಕೆಟ್ ದರವನ್ನು ಇನ್ನೂ ಘೋಷಿಸಲಾಗಿಲ್ಲ. ಆದಾಗ್ಯೂ, ಸಾಮಾನ್ಯವಾಗಿ 400 ಕಿಲೋ ಮೀಟರ್ಗಿಂತ ಹೆಚ್ಚು ಓಡುವ ವಂದೇ ಭಾರತ್ ರೈಲುಗಳಲ್ಲಿ, ಎಸಿ ಸೀಟ್ ಕಾರ್ಗಳಿಗೆ 1,300 ರೂಪಾಯಿ ಮತ್ತು ಎಕ್ಸಿಕ್ಯೂಟಿವ್ ಸೀಟ್ ಕಾರ್ಗಳಿಗೆ 2,300 ರೂಪಾಯಿ ದರವನ್ನು ನಿಗದಿಪಡಿಸಲಾಗಿದೆ. ತಮಿಳುನಾಡಿನಲ್ಲಿ ಎರಡು ವಂದೇ ಭಾರತ್ ರೈಲುಗಳು ಚೆನ್ನೈನಿಂದ ಕೊಯಮತ್ತೂರು ಮತ್ತು ತಿರುನಲ್ವೇಲಿಯಿಂದ ಚೆನ್ನೈಗೆ ದಕ್ಷಿಣ ರೈಲ್ವೇ ಮೂಲಕ ಸಂಚರಿಸುತ್ತಿವೆ. ಅಲ್ಲದೆ ವಿಜಯವಾಡದಿಂದ ತಿರುಪತಿ ಮೂಲಕ ಚೆನ್ನೈಗೆ ವಂದೇ ಭಾರತ್ ರೈಲು ಓಡುತ್ತಿದೆ.
-
ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ CSR ರಾಷ್ಟ್ರೀಯ ಸಮಾವೇಶ: ವಿಕಸಿತ ಭಾರತ ಚರ್ಚೆ -
Karnataka Weather: ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 39 ಡಿಗ್ರಿ ದಾಟಿದ ತಾಪಮಾನ -
ಅಕ್ಷಯ ತೃತೀಯ 2026: ಏಪ್ರಿಲ್ 19ಕ್ಕೆ ಚಿನ್ನದಂತಹ ಹಬ್ಬ; ಶುಭ ಮುಹೂರ್ತ, ಪೂಜಾ ವಿಧಿವಿಧಾನ, ವಿವರ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ












Click it and Unblock the Notifications