ನ.19: ದೇಶ, ವಿದೇಶ ಸುದ್ದಿಗಳ ಚುಟುಕು ಸುದ್ದಿ
ಬೆಂಗಳೂರು, ನ.19: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
12.05:
ತಿರುಚ್ಚಿಯಲ್ಲಿರುವ
ಶ್ರೀಲಂಕಾದ
22
ನಿರಾಶ್ರಿತರು
ಆತ್ಮಹತ್ಯೆಗೆ
ಯತ್ನಿಸಿದ
ಘಟನೆ
ನಡೆದಿದೆ.
ಎಲ್ಲರನ್ನು
ಸರ್ಕಾರಿ
ಆಸ್ಪತ್ರೆಗೆ
ದಾಖಲಿಸಲಾಗಿದ್ದು,
7
ಜನರ
ಸ್ಥಿತಿ
ಗಂಭೀರವಾಗಿದೆ.
10.30: ಎಬೋಲಾ ವಿರುದ್ಧ ಹೋರಾಟಕ್ಕೆ ವಿಶ್ವಬ್ಯಾಂಕ್ ಸುಮಾರು 285 ಮಿಲಿಯನ್ ಡಾಲರ್ ದೇಣಿಗೆ ನೀಡುತ್ತಿದೆ.
10.20: ಸ್ವಯಂಘೋಷಿತ ದೇವಮಾನವ ರಾಮಪಾಲ್ ಬಂಧನಕ್ಕೆ ಭಕ್ತಾದಿಗಳು ಅಡ್ಡಿಪಡಿಸಿರುವುದರಿಂದ ಹರ್ಯಾಣ ಪೊಲೀಸರು ಹೊಸ ಡೆಡ್ ಲೈ ನೀಡಿದ್ದಾರೆ. ಗುರುಗಳನ್ನು ಬಂಧಿಸಿದ್ದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಭಕ್ತರು ಬೆದರಿಕೆ ಒಡ್ಡಿದ್ದಾರೆ.
10.15: ರಾಮಪಾಲ್ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಹೊಸದಾಗಿ ಮತ್ತೆ ಜಾಮೀನು ರಹಿತ ವಾರೆಂಟ್ ಹೊರಡಿಸಿ ನ.21ರೊಳಗಾಗಿ ರಾಮ್ ಪಾಲ್ ರನ್ನು ಹಾಜರುಪಡಿಸುವಂತೆ ಪೊಲೀಸರಿಗೆ ನ್ಯಾಯಾಲಯ ಆದೇಶಿಸಿದೆ.
10.00: ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ಫಿಜಿ ದೇಶಕ್ಕೆ ಆಗಮಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.