ನ.12: ದೇಶ, ವಿದೇಶ ಸುದ್ದಿಗಳ ಚುಟುಕು ಸುದ್ದಿ
ಬೆಂಗಳೂರು, ನ.12: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
13.45: ಧ್ವನಿಮತದ ಮೂಲಕ ದೇವೇಂದ್ರ ಅವರು ಬಹುಮತ ಸಾಬೀತು ಪಡಿಸಿರುವುದಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮಾಜಿ ಸಿಎಂ ಪೃಥ್ವಿರಾಜ್ ಚೌಹಾಣ್ ಮಾತನಾಡಿ ಶೀಘ್ರವೇ ರಾಜ್ಯಪಾಲ ಚನ್ನಮನೇನಿ ವಿದ್ಯಾಸಾಗರರಾವ್ ಅವರನ್ನು ಭೇಟಿ ದೂರು ಸಲ್ಲಿಸಲಾಗುವುದು ಎಂದಿದ್ದಾರೆ.

13.00 : ಮಹಾರಾಷ್ಟ್ರ ವಿಧಾನಸಭೆಯಲ್ಲಿ ಧ್ವನಿಮತದ ಮೂಲಕ ದೇವೇಂದ್ರ ಅವರು ಬಹುಮತ ಸಾಬೀತು ಪಡಿಸಿದ್ದಾರೆ.
11.15: ಮಹಾರಾಷ್ಟ್ರದ ನೂತನ ಸ್ಪೀಕರ್ ಆಗಿ ಹರಿಭಾವು ಬಾಗ್ಡೆ ಆಯ್ಕೆಯಾಗಿದ್ದಾರೆ.
Black day for Maharashtra's democracy, will meet Guv & will demand another round of trust vote: Prithviraj Chavan pic.twitter.com/eVBbhlE6Fy
— ANI (@ANI_news) November 12, 2014 10.55: ಮಹಾರಾಷ್ಟ್ರದಲ್ಲಿ ಸ್ಪೀಕರ್ ಆಯ್ಕೆ ಕಗ್ಗಂಟು ಮುಂದುವರೆದಿರುವ ನಡುವೆ ದೇವೇಂದ್ರ ಫಡ್ನವೀಸ್ ಅವರ ಸರ್ಕಾರದ ಶಕ್ತಿ ಪರೀಕ್ಷೆ ನಡೆಯಲಿದೆ. ಬಹುಮತ ಸಾಬೀತು ಪಡಿಸಲು ಮುಂದಾಗಿರುವ ಬಿಜೆಪಿಗೆ ಎನ್ ಸಿಪಿ ಬೆಂಬಲಿಸುವ ಎಲ್ಲಾ ಸಾಧ್ಯತೆಗಳಿವೆ.

10.40: ವಿದೇಶಿ ಪ್ರವಾಸದಲ್ಲಿರುವ ಭಾರತದ ಮೋದಿ ಅವರು ಮಲೇಷಿಯಾ ಪ್ರಧಾನಿ ನಜೀಬ್ ರಜಾಕ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
10.30: ಶೃಂಗಸಭೆಗೂ ಮುನ್ನ ಸಭಾಂಗಣದ ಚಿತ್ರವನ್ನು ಟ್ವೀಟ್ ಮಾಡಿದ ಮೋದಿ.
At the Summit...captured a glimpse of the venue. pic.twitter.com/jc8lzohM1x
— Narendra Modi (@narendramodi) November 12, 2014 10.15: ತಮಿಳುನಾಡು ಮೂಲದ ಐವರು ಮೀನುಗಾರರನ್ನು ಯಾವುದೇ ಷರತ್ತುಗಳಿಲ್ಲದೆ ಭಾರತಕ್ಕೆ ಕಳಿಸಲು ಶ್ರೀಲಂಕಾ ಬಹುತೇಕ ಒಪ್ಪಿದೆ.












Click it and Unblock the Notifications