Get Updates
Get notified of breaking news, exclusive insights, and must-see stories!

UP Corporation Elections: ಮಾಫಿಯಾ ಮತ್ತು ಪ್ರತಿಪಕ್ಷಗಳ ವಿರುದ್ಧ ಸಿಎಂ ಯೋಗಿ ವಾಗ್ದಾಳಿ

ಲಕ್ನೋ ಏಪ್ರಿಲ್ 28: ಯುಪಿ ನಗರಪಾಲಿಕಾ ಚುನಾವಣೆಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಗೆಲುವಿನ ತಯಾರಿ ನಡೆಸಿವೆ. ಆಡಳಿತಾರೂಢ ಬಿಜೆಪಿ ಸೇರಿದಂತೆ ಇತರೆ ಪಕ್ಷಗಳು ತಮ್ಮ ತಮ್ಮ ಮೇಯರ್ ಮತ್ತು ಪುರಸಭೆ ಹಾಗೂ ಪಂಚಾಯಿತಿ ಅಧ್ಯಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪ್ರಯತ್ನ ನಡೆಸುತ್ತಿವೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಪ್ರಸ್ತುತ ಯುಪಿ ಪ್ರವಾಸದಲ್ಲಿದ್ದಾರೆ. ಈ ಅನುಕ್ರಮದಲ್ಲಿ ಗುರುವಾರ ಸಿಎಂ ಯೋಗಿ ಆದಿತ್ಯನಾಥ್ ಮಥುರಾಕ್ಕೆ ತೆರಳಿದ್ದರು. ಇದೇ ವೇಳೆ ಅವರು ತಮ್ಮ ಭಾಷಣದಲ್ಲಿ ಆಪರೇಷನ್ ಕಾವೇರಿ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

UP Municipal Elections 2023: CM Yogi Adityanath lashes out at mafia and opposition

ಮಥುರಾದ ಸೇಠ್ ಬಿಎನ್ ಪೊದ್ದಾರ್ ಇಂಟರ್ ಕಾಲೇಜು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಯೋಗಿ ಅವರ ಮಾತು ಕೇಳಲು ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ವೇಳೆ ಸಿಎಂ ಅವರನ್ನು ಸಂಸದೆ ಹೇಮಾ ಮಾಲಿನಿ ಸ್ವಾಗತಿಸಿದರು.

ಕೆಲ ಸಮಯದ ನಂತರ ಸಿಎಂ ಯೋಗಿ ಭಾಷಣ ಆರಂಭಿಸಿ ಅವರು ಡಬಲ್ ಇಂಜಿನ್ ಸರ್ಕಾರವನ್ನು ಹೊಗಳಿಸದ್ದಾರೆ. 'ಇಂದು ಭಾರತ ಬದಲಾಗಿದೆ. ಭಾರತ ಕ್ಷಿಪ್ರ ಬೆಳವಣಿಗೆಯ ಹಾದಿಯಲ್ಲಿದೆ. ಇಂದು ಭಾರತ ಜಾಗತಿಕ ಗುರುತಾಗಿದೆ. ಜಗತ್ತು ಭಾರತದ ಶಕ್ತಿಯ ಮೇಲೆ ನಂಬಿಕೆ ಇಟ್ಟಿದೆ. ಜಗತ್ತಿನಲ್ಲಿ ಎಲ್ಲೇ ಸಮಸ್ಯೆ ಇದ್ದರೂ ವಿಶ್ವ ನಾಯಕರು ಭಾರತದತ್ತ ನೋಡುತ್ತಾರೆ' ಎಂದು ಕೊಂಡಾಡಿದ್ದಾರೆ.

ಭಾರತೀಯರ ವಿಷಯಕ್ಕೆ ಬಂದರೆ ಪ್ರಧಾನಿ ತಕ್ಷಣವೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅದಕ್ಕಾಗಿ ಭಾರತವು ತಡಮಾಡದೆ ಆಪರೇಷನ್ ಕಾವೇರಿಯನ್ನು ಪ್ರಾರಂಭಿಸಿತು ಎಂದು ಅವರು ಹೇಳಿದರು.

UP Municipal Elections 2023: CM Yogi Adityanath lashes out at mafia and opposition

ಮಥುರಾ-ವೃಂದಾವನದ ವಿಷಯದ ಬಗ್ಗೆ ಮಾಡಿದ ಅವರು, 'ಹಿಂದಿನ ಜನರು ಏನಾಗುತ್ತಿದೆ ಎಂದು ಚಿಂತಿತರಾಗಿದ್ದರು. ಇಂದು ನಾವು ಈ ಸ್ಥಳದ ಅಭಿವೃದ್ಧಿ ಕ್ರಿಯಾ ಯೋಜನೆ ಹೊಂದಿದ್ದೇವೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಸಂಸದೆ ಹೇಮಾ ಮಾಲಿನಿ ಅವರ ಉಸ್ತುವಾರಿಯಲ್ಲಿ ಅತಿ ಶೀಘ್ರದಲ್ಲಿ ಚಾಲನೆ ಇದಕ್ಕೆ ನೀಡಲಾಗುವುದು' ಎಂದರು.

ಇದರೊಂದಿಗೆ ಪ್ರತಿಪಕ್ಷಗಳನ್ನು ಗುರಿಯಾಗಿಸಿಕೊಂಡ ಅವರು, 'ಹಿಂದಿನ ಸರ್ಕಾರಗಳು ಅರಾಜಕ ಮತ್ತು ಭ್ರಷ್ಟ ವ್ಯವಸ್ಥೆಯನ್ನು ಹೊಂದಿದ್ದವು. ಅವುಗಳನ್ನು ತೆರವುಗೊಳಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಅದೇ ಶುದ್ಧೀಕರಣಕ್ಕೆ ಅತ್ಯಂತ ಸೂಕ್ತ ಅಭ್ಯರ್ಥಿ ವಿನೋದ್ ಆರ್ಯ ಅವರನ್ನು ನಿಮ್ಮ ಸೇವೆಗಾಗಿ ನಿಮ್ಮ ನಡುವೆ ಕೈಬಿಡಲಾಗಿದೆ' ಎಂದು ಯೋಗಿ ಹೇಳಿದರು. ಈ ಮೂಲಕ ಮತದಾರರ ಗಮನವನ್ನು ಯೋಗಿ ಸೆಳೆದಿದ್ದಾರೆ.

UP Municipal Elections 2023: CM Yogi Adityanath lashes out at mafia and opposition

ಮಥುರಾದಲ್ಲಿ ನಡೆದ ಜವಾಹರ್ ಹಾಗ್ ಘಟನೆ ಎಲ್ಲರಿಗೂ ನೆನಪಿದೆ. ಒಂದು ಕಾಲದಲ್ಲಿ ಅಸ್ತವ್ಯಸ್ತವಾಗಿದ್ದ ಸ್ಥಳ ಈಗ ಸುಂದರ ಉದ್ಯಾನವನವಾಗಿದೆ. ಒಂದಾನೊಂದು ಕಾಲದಲ್ಲಿ ಮಥುರಾದ ಗೋಕುಲದಲ್ಲಿ ಹಾಲಿನ ನದಿಗಳು ಹರಿಯುತ್ತಿದ್ದವು. ಹಿಂದಿನ ಸರ್ಕಾರಗಳು ಇಲ್ಲಿ ಮಾಂಸ, ಮದ್ಯ ಮಾರಾಟ ಮಾಡುತ್ತಿದ್ದರು.

ಈಗ ಅವುಗಳನ್ನು ಧಾರ್ಮಿಕ ಕ್ಷೇತ್ರವೆಂದು ಘೋಷಿಸಲಾಗಿದೆ. ಇಲ್ಲಿ ಹಾಲು ಮತ್ತು ಮೊಸರು ಮಾರಲಾಗುತ್ತದೆ. ಮಥುರಾ-ಯಮುನಾವನ್ನು ಅದರ ಹಿಂದಿನ ವೈಭವಕ್ಕೆ ಮರುಸ್ಥಾಪಿಸಬೇಕು. ಬ್ರಜ್ ನಲ್ಲಿ 32,000 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆ ನಡೆಯುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+